Sunday, 8th September 2024

ಪುದುಚೇರಿಯಲ್ಲಿ ಜು.16 ರಿಂದ ಶಾಲಾ ಕಾಲೇಜು ಪುನರಾರಂಭ

ಪುದುಚೇರಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ 9-12 ತರಗತಿಗಳ ಶಾಲಾ ಕಾಲೇಜುಗಳನ್ನು ಜು.16 ರಿಂದ ಪುನರಾರಂಭಿಸಲು ಪುದುಚೇರಿ ಮುಖ್ಯಮಂತ್ರಿ ಎನ್ ರಂಗಸ್ವಾಮಿ ಆದೇಶಿಸಿದ್ದಾರೆ.

9-12 ತರಗತಿಗಳ ವಿದ್ಯಾರ್ಥಿಗಳ ಎಲ್ಲಾ ಶಾಲೆಗಳು ಜು.16 ರಿಂದ ಮತ್ತೆ ತೆರೆಯಲ್ಪಡುತ್ತವೆ. ಜು.16 ರಿಂದ ಎಲ್ಲಾ ಕಾಲೇಜುಗಳನ್ನು ಸಹ ಮತ್ತೆ ತೆರೆಯ ಲಾಗುವುದು’ ಎಂದು ಅವರು ಹೇಳಿದರು. ಕೇಂದ್ರಾಡಳಿತ ಪ್ರದೇಶದ ಕೋವಿಡ್ -19 ವ್ಯಾಕ್ಸಿನೇಷನ್ ಸ್ಥಿತಿಯ ಬಗ್ಗೆ ಮಾತನಾಡಿದ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ತಮಿಳುಸಾಯಿ ಸೌಂದರ್ ರಾಜನ್, ‘ಪುದುಚೇರಿಯಲ್ಲಿ ಹೆಚ್ಚು ಲಸಿಕೆ ಕೊಡಲಾಗಿದೆ, ನಾವು 5 ಲಕ್ಷ ಲಸಿಕೆಗಳನ್ನು ದಾಟಿದ್ದೇವೆ’ ಎಂದು ಹೇಳಿದರು.

ಆಗಸ್ಟ್ 15 ರೊಳಗೆ ಕೇಂದ್ರಾಡಳಿತ ಪ್ರದೇಶದ ಎಲ್ಲ ಅರ್ಹ ಜನರಿಗೆ ಲಸಿಕೆ ಹಾಕುವ ಗುರಿ ಸರ್ಕಾರ ಹೊಂದಿದೆ.’ಜನರಿಗೆ ಲಸಿಕೆ ಹಿಂಜರಿಕೆ ಇತ್ತು ಆದರೆ ಈಗ ಅವರು ಅದನ್ನು ಜಯಿಸಿದ್ದಾರೆ.ನಮ್ಮ ಯೋಜನೆಯ ಪ್ರಕಾರ ಆಗಸ್ಟ್ 15 ರ ಮೊದಲು ಪುದುಚೇರಿಗೆ ಸಂಪೂರ್ಣವಾಗಿ ಲಸಿಕೆ ನೀಡಲಾಗುವುದು ಎಂದು ಹೇಳಿದರು.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಯುಟಿ ಯಲ್ಲಿ 157 ಸಕ್ರಿಯ ಕೋವಿಡ್ -19 ಪ್ರಕರಣಗಳಿವೆ.

Leave a Reply

Your email address will not be published. Required fields are marked *

error: Content is protected !!