Saturday, 27th July 2024

ಯೋಗಪಟು ಸ್ವಾಮಿ ಶಿವಾನಂದರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

ನವದೆಹಲಿ: ಯೋಗ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಯೋಗ ಪಟು ಮತ್ತು ಗುರು ಸ್ವಾಮಿ ಶಿವಾನಂದ(125) ಅವರಿಗೆ ಸೋಮವಾರ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಿವಾನಂದ ಅವರು ಬಹುಶಃ ದೇಶದ ಇತಿಹಾಸದಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಹಿರಿಯರು.

ಪ್ರಶಸ್ತಿ ಸ್ವೀಕರಿಸುವ ಮೊದಲು ಸ್ವಾಮಿ ಶಿವಾನಂದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮಸ್ಕರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

‘ಯೋಗ ಸೇವಕ’ ಎಂದೇ ಖ್ಯಾತ ಸ್ವಾಮಿ ಶಿವಾನಂದರು ತಮ್ಮ ಸಾಧನೆ, ವಿನಯತೆ ಯಿಂದಲೇ ಗಮನ ಸೆಳೆದವರು. ಅವರು ಮೂರು ದಶಕಗಳಿಂದ ಕಾಶಿಯ ಘಾಟ್‌ ಗಳಲ್ಲಿ ಯೋಗವನ್ನು ಅಭ್ಯಾಸ ಮಾಡುತ್ತಿದ್ದಾರೆ ಮತ್ತು ಯೋಗ ಕಲಿಸುತ್ತಿದ್ದಾರೆ.

ನೆಟ್ಟಿಗರು ಶಿವಾನಂದರ ಈ ನಡೆ ಭಾರತದ ನಿಜವಾದ ಸಂಸ್ಕೃತಿಯ ದ್ಯೋತಕ ಎಂದು ಬಣ್ಣಿಸಿದ್ದಾರೆ.

error: Content is protected !!