ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Dino Morea: ಭ್ರಷ್ಟಾಚಾರ ಪ್ರಕಣದಲ್ಲಿ ಬಾಲಿವುಡ್‌ ನಟನಿಗೆ ಕಾನೂನು ಸಂಕಷ್ಟ

ಮಿಥಿ ನದಿಯನ್ನು ಸ್ವಚ್ಛಗೊಳಿಸುವ ಒಪ್ಪಂದಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ನಟ ಡಿನೋ ಮೋರಿಯಾ ಅವರು ಸೋಮವಾರ ಮುಂಬೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗದ ಮೂಲಗಳ ಪ್ರಕಾರ ನಟ ಮತ್ತು ಆತನ ಸಹೋದರ ಪ್ರಕರಣದ ಪ್ರಮುಖ ಆರೋಪಿ ಕೇತನ್ ಕದಮ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

ಭ್ರಷ್ಟಾಚಾರ ಪ್ರಕಣದಲ್ಲಿ ಬಾಲಿವುಡ್‌ ನಟನಿಗೆ ಕಾನೂನು ಸಂಕಷ್ಟ

ಮುಂಬೈ: ಮಿಥಿ ನದಿಯನ್ನು (Mithi River) ಸ್ವಚ್ಛಗೊಳಿಸುವ ಒಪ್ಪಂದಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದ (River Cleaning Corruption Case) ಕುರಿತು ನಟ ಡಿನೋ ಮೋರಿಯಾ (Actor Dino Morea) (49) ಅವರನ್ನು ಸೋಮವಾರ ಮುಂಬೈ ಪೊಲೀಸರು (Mumbai police) ವಿಚಾರಣೆ ನಡೆಸಿದರು. ಮುಂಬೈ ಮೂಲಕ ಹರಿಯುವ ಮಿಥಿ ನದಿ ಸ್ವಚ್ಛಗೊಳಿಸುವ ಒಪ್ಪಂದಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪಿ ಮೇ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟಿರುವ ಕೇತನ್ ಕದಮ್ ಜೊತೆ ಸಂಪರ್ಕದಲ್ಲಿದ್ದ ಕಾರಣಕ್ಕೆ ನಟ ಡಿನೋ ಮೋರಿಯಾ ಮತ್ತು ಆತನ ಸಹೋದರನನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಮಿಥಿ ನದಿಯನ್ನು ಸ್ವಚ್ಛಗೊಳಿಸುವ ಒಪ್ಪಂದಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ನಟ ಡಿನೋ ಮೋರಿಯಾ ಅವರು ಸೋಮವಾರ ಮುಂಬೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗದ ಮೂಲಗಳ ಪ್ರಕಾರ ನಟ ಮತ್ತು ಆತನ ಸಹೋದರ ಪ್ರಕರಣದ ಪ್ರಮುಖ ಆರೋಪಿ ಕೇತನ್ ಕದಮ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಕೇತನ್ ಕದಮ್ ಮತ್ತು ಜೈ ಜೋಶಿ ಅವರಿಗೆ ಫೋನ್ ವಿಶ್ಲೇಷಣೆ ನಡೆಸಿದಾಗ ಮೋರಿಯಾ ಅವರೊಂದಿಗೆ ಸಂಪರ್ಕದಲ್ಲಿದ್ದುದು ತಿಳಿದುಬಂದಿದೆ. ಮೋರಿಯಾ ಮತ್ತು ಆತನ ಸಹೋದರನು ಕೇತನ್ ಕದಮ್ ನೊಂದಿಗೆ ಹಲವು ಬಾರಿ ಫೋನ್‌ನಲ್ಲಿ ಮಾತನಾಡಿರುವುದಕ್ಕೆ ದಾಖಲೆಗಳು ಸಿಕ್ಕಿವೆ. ಆರೋಪಿಗಳು ಮತ್ತು ನಟನ ಸಂಪರ್ಕ ಮತ್ತು ಅವರ ವ್ಯವಹಾರಗಳ ಬಗ್ಗೆ ಪೊಲೀಸರು ಮೋರಿಯಾ ಮತ್ತು ಆತನ ಸಹೋದರನನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

ಏನಿದು ಹಗರಣ?

ಮಿಥಿ ನದಿಯನ್ನು ಹೂಳು ತೆಗೆಯುವ ಪ್ರಾಜೆಕ್ಟ್ ಗೆ ಸಂಬಂಧಿಸಿ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನೊಂದಿಗೆ ಕೇರಳದ ಸಂಸ್ಥೆ ಮತ್ತು ಹೂಳು ತೆಗೆಯುವ ಯಂತ್ರಗಳನ್ನು ಬಾಡಿಗೆಗೆ ನೀಡುವ ಕೇತನ್ ಕದಮ್ ಮತ್ತು ಜೈ ಜೋಶಿ ಅವರು ಒಪ್ಪಂದವನ್ನು ನಡೆಸಿದ್ದರು. ಇದರಲ್ಲಿ 65 ಕೋಟಿ ರೂ. ಅಕ್ರಮ ನಡೆಸಲಾಗಿದೆ ಎಂದು ಆರ್ಥಿಕ ಅಪರಾಧಗಳ ವಿಭಾಗ ಆರೋಪಿಸಿದೆ.

ಹೂಳು ತೆಗೆಯುವ ಮತ್ತು ಹೂಳೆತ್ತುವ ಯಂತ್ರಗಳಲ್ಲಿ ಪರಿಣತಿ ಹೊಂದಿರುವ ಕೇರಳ ಮೂಲದ ಮ್ಯಾಟ್‌ಪ್ರಾಪ್‌ನ ಸ್ಥಾವರಕ್ಕೆ ಭೇಟಿ ನೀಡಿದ ಬಿಎಂಸಿ ಅಧಿಕಾರಿಗಳ ತಂಡವು ಬಳಿಕ ಮ್ಯಾಟ್‌ಪ್ರಾಪ್ ಯಂತ್ರಗಳಿಗೆ ಟೆಂಡರ್‌ ಕರೆದಿದೆ. ಇದರ ಪ್ರಕಾರ ಟೆಂಡರ್ ಗೆ ಅರ್ಜಿ ಸಲ್ಲಿಸುವ ಗುತ್ತಿಗೆದಾರರು ಕೇರಳ ಸಂಸ್ಥೆಯಿಂದ ಯಂತ್ರಗಳನ್ನು ಖರೀದಿಸಬೇಕು ಅಥವಾ ಬಾಡಿಗೆಗೆ ಪಡೆಯಬೇಕಾಗುತ್ತದೆ ಎನ್ನುವ ಷರತ್ತು ವಿಧಿಸಲಾಗಿದೆ. ಆದರೆ ಯಂತ್ರ ಖರೀದಿಸಲು ಹೋದ ಬಿಎಂಸಿ ಅಧಿಕಾರಿಯೊಬ್ಬರಿಗೆ ಯಂತ್ರಗಳನ್ನು ಬಾಡಿಗೆಗೆ ನೀಡುವ ಮಧ್ಯವರ್ತಿ ಕೇತನ್ ಕದಮ್ ಮತ್ತು ಜೈ ಜೋಶಿ ಅವರನ್ನು ಸಂಪರ್ಕಿಸುವಂತೆ ನಿರ್ದೇಶಿಸಲಾಗಿದೆ. ಬಳಿಕ ಇವರ ನಡುವೆ ಎರಡು ವರ್ಷಗಳ ಒಪ್ಪಂದವನ್ನು 4 ಕೋಟಿ ರೂ.ಗಳಿಗೆ ಮಾಡಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಬಿಎಂಸಿ ಅಧಿಕಾರಿಗಳು, ಮ್ಯಾಟ್‌ಪ್ರಾಪ್ ಪ್ರತಿನಿಧಿಗಳು ಮತ್ತು ಕದಮ್ ಮತ್ತು ಜೋಶಿ ಪ್ರಮುಖ ಆರೋಪಿಗಳಾಗಿದ್ದಾರೆ ಎಂದು ಸೇರಿಕೊಂಡಿದ್ದಾರೆ ಎಂದು ಆರ್ಥಿಕ ಅಪರಾಧಗಳ ವಿಭಾಗ ಆರೋಪಿಸಿದೆ.

ಇದನ್ನೂ ಓದಿ: Bengaluru Rains: ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ; ಟ್ರಾಫಿಕ್‌ ಕಿರಿ ಕಿರಿ, ಸವಾರರ ಪರದಾಟ

ಹೂಳು ತೆಗೆಯುವ ಪ್ರಕ್ರಿಯೆಗಾಗಿ ಬಿಎಂಸಿ ಅಧಿಕಾರಿಗಳು ಗುತ್ತಿಗೆದಾರರಿಗೆ 17 ಕೋಟಿ ರೂ.ಗಳನ್ನು ಪಾವತಿಸಿದ್ದಾರೆ. ಮುಂಬೈನಿಂದ ಕೆಸರನ್ನು ಸಾಗಿಸಲು ಗುತ್ತಿಗೆದಾರರು ನಕಲಿ ಬಿಲ್‌ಗಳನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಮ್ಯಾಟ್‌ಪ್ರಾಪ್‌ನ ದೀಪಕ್ ಮೋಹನ್, ಕಿಶೋರ್ ಮೆನನ್, ಯಂತ್ರಗಳನ್ನು ಬಾಡಿಗೆಗೆ ನೀಡುವ ಕೇತನ್ ಕದಮ್ ಮತ್ತು ಜೈ ಜೋಶಿ ಸೇರಿದಂತೆ ಒಟ್ಟು 13 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇದರಲ್ಲಿ ಕದಮ್ ಮತ್ತು ಜೋಶಿಯನ್ನು ಮಾತ್ರ ಬಂಧಿಸಲಾಗಿದೆ.