Saturday, 26th October 2024

ಧಾರ‍್ಮಿಕ ಶ್ರದ್ಧಾ ಕೇಂದ್ರಗಳು ನೆಮ್ಮದಿ ನೀಡುವ ಕೇಂದ್ರಗಳಾಗಬೇಕು

ಚಿಕ್ಕನಾಯಕನಹಳ್ಳಿ : ಧಾರ‍್ಮಿಕ ಶ್ರದ್ದಾ ಕೇಂದ್ರಗಳು ನೆಮ್ಮದಿ ನೀಡುವ ಕೇಂದ್ರಗಳಾಗಬೇಕು ಎಂದು ಶ್ರೀ ಕ್ಷೇತ್ರ ರ‍್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಪ್ರೇಮಾನಂದ ಎಲ್. ಬಿ. ಹೇಳಿದರು.

ಅವರು ಗೋಡೆಕೆರೆ ಗ್ರಾಮಪಂಚಾಯತ್ ವ್ಯಾಪ್ತಿಯ ಬಗ್ಗನಹಳ್ಳಿ ಶ್ರೀ ಜುಂಜಪ್ಪ ಸ್ವಾಮಿ ದೇವಸ್ಥಾನದ ಜರ‍್ಣೋದ್ದಾರಕ್ಕಾಗಿ ಶ್ರೀಕ್ಷೇತ್ರ ರ‍್ಮಸ್ಥಳದಿಂದ ಮಂಜೂರುಗೊಂಡ ರೂ ೧,೫೦,೦೦೦ ಡಿಡಿಯನ್ನು ವಿತರಿಸಿ ಈ ಮಾತನ್ನು ಹೇಳಿದರು.

ಅವರು ಮಾತನಾಡುತ್ತಾ “ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಧರ‍್ಮಿಕ ಮನೋಭಾವ ಕಡಿಮೆಯಾಗುತ್ತಿದೆ ಇಂತಹ ಧರ‍್ಮಿಕ ಶ್ರದ್ದಾ ಕೇಂದ್ರಗಳಿಂದ ಜನರಲ್ಲಿ ರ‍್ಮಜಾಗೃತಿ ಮೂಡುವಂತಾಗಬೇಕು. ಭಾರತೀಯ ಸಂಸ್ಕೃತಿ ಸಂಸ್ಕಾರ ಉಳಿಸುವ ಕೆಲಸ ಆಗಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಶೇಷಯ್ಯ, ಉಪಾಧ್ಯಕ್ಷರಾದ ರಾಜಣ್ಣ,ಕರ‍್ಯರ‍್ಶಿ ಶ್ರೀನಿವಾಸ್, ಮೇಲ್ವಿಚಾರಕ ರಮೇಶ್, ಸೇವಾ ಪ್ರತಿನಿಧಿ ಶ್ರೀಮತಿ ಪದ್ಮ, ಸ್ವ ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.