Saturday, 27th July 2024

ರಥೋತ್ಸವಕ್ಕೆ ಆಗಮಿಸಿದ್ದ ವೃದ್ಧೆ ಹೃದಯಾಘಾತದಿಂದ ಸಾವು

ಮಂಡ್ಯ: ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದ ಶ್ರೀ ಗಂಗಾಧರೇಶ್ವರಸ್ವಾಮಿ ರಥೋತ್ಸವಕ್ಕೆ ಆಗಮಿಸಿದ್ದ ವೃದ್ಧೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಮೈಸೂರು ನಗರದ ಕಸ್ತೂರಿಬಾ ನಗರ ನಿವಾಸಿ ಮಹದೇವಮ್ಮ(65) ಮೃತರು.

ಇಂದು ಮುಂಜಾನೆ 4.58ರ ಬ್ರಾಹ್ಮಿ ಮುಹೂರ್ತದಲ್ಲಿ ರಥೋತ್ಸವ ನೆರವೇರಿತು. ರಥೋತ್ಸವ ಕಣ್ತುಂಬಿಕೊಂಡ ಬಳಿಕ ಹಿಂತಿರು ಗುತ್ತಿದ್ದ ಮಹದೇವಮ್ಮ ಅಲ್ಲೇ ಕುಸಿದು ಬಿದ್ದರು. ತಕ್ಷಣ ವೃದ್ಧೆಯನ್ನು ಕುಟುಂಬಸ್ಥರು ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ದ ರಾದರೂ ಬದುಕಲಿಲ್ಲ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

error: Content is protected !!