Monday, 16th September 2024

ರಾಜ್ಯ ಮಟ್ಟದ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟಣೆ

ಮಂಗಳೂರು: ಖಿದ್ಮಾ ಫೌಂಡೇಶನ್ ಕರ್ನಾಟಕ ರಾಷ್ಟ್ರ ಪಿತ ಮಹಾತ್ಮ ಗಾಂಧಿ ಅವರ ಜಯಂತಿಯ ಪ್ರಯುಕ್ತ ಆಯೋಜಿಸ ಲಾಗಿದ್ದ ರಾಜ್ಯ ಮಟ್ಟದ ಕವನ ಸ್ಪರ್ಧೆಯ ಫಲಿ ತಾಂಶ ಪ್ರಕಟಣೆಯಾಗಿದೆ.

ಪ್ರಥಮ ಸ್ಥಾನವನ್ನು ಪರಿಮಳ ಮಹೇಶ್ ರಾವ್ ಮಂಗಳೂರು, ದ್ವಿತೀಯ ಡಾ. ಮೋಹನ್ ಕುಮಾರ್ ಮಿರ್ಲೆ ಮತ್ತು ಗಿರಿಜಾ ಇಟಗಿ ಹಾಗೂ ತೃತೀಯ ಬಹುಮಾನವನ್ನು ಮಹಮ್ಮದ್ ಅನ್ಸಾದ್ ಕಬಕ ಮತ್ತು ಡಾ. ರಾಘವೇಂದ್ರ ರಾವ್ ಉಡುಪಿ ಪಡೆದು ಕೊಂಡರು.

ಮೀನಾ ನಾಗರಾಜ್,ಗುಲಾಬಿ ರಾಘವೇಂದ್ರ,ರಾಜು ಸನದಿ,ಡಾ. ಕೊಳ್ಚಪ್ಪೆ ಗೋವಿಂದಾ ಭಟ್,ಪ್ರೊ. ಫರ್ಹನಾಜ್ ಮಸ್ಕಿ, ಅಭಿಷೇಕ್. ಎಸ್,ಮಹೇಶ್ ಕುಮಾರ್,ನಿರಂಜನ ಕೇಶವ ನಾಯಕ, ಅಜಿತ್ ಪಾಟ್ರೋಟ, ದೀಪಕ್ ನಿಡಘಟ್ಟ, ಜ್ಯೋತಿ ಜಿ. ಮೈಸೂರು ಹಾಗೂ ವೈಲೇಶ್ ಪಿ. ಎಸ್ ಅವರ ಕವನವು ತೀರ್ಪುಗಾರರ ಮೆಚ್ಚುಗೆಯನ್ನು ಪಡೆದಿದೆ.

ರಾಜ್ಯ ಮಟ್ಟದ ಕವನ ಸ್ಪರ್ಧೆಯ ಫಲಿತಾಂಶವನ್ನು ಶಿಕ್ಷಕಿ ಶ್ರೀಮತಿ ಅಶ್ವಿನಿ ಎಸ್.ಅಂಗಡಿ ಬಾದಾಮಿ ಮತ್ತು ಕವಿ, ವಿರ್ಮಶಕ ಜಬೀವುಲ್ಲಾ ಎಂ. ಅಸದ್ ಮೊಲಕಲ್ಮೂರು ನೀಡಿದರು. ಖಿದ್ಮಾ ಫೌಂಡೇಶನ್ ರಾಜ್ಯ ಸಂಚಾಲಕ ಆಮಿರ್ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದೆ.