Saturday, 27th July 2024

ಪ್ರವೀಣ್‌ ನೆಟ್ಟಾರು ಮಾಲೀಕತ್ವದ ಅಕ್ಷಯ ಚಿಕನ್‌ ಸೆಂಟರ್‌ ಪುನರಾಂಭ

ಪುತ್ತೂರು : ಜು26ರಂದು ಹತ್ಯೆಗೊಳಗಾದ ಹಿಂದೂ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಮಾಲೀಕತ್ವದ ಅಕ್ಷಯ ಚಿಕನ್‌ ಸೆಂಟರ್‌ ಪುನರಾಂಭಗೊಳ್ಳುತ್ತಿದೆ.

ಮಾಸ್ತಿಕಟ್ಟೆಯಲ್ಲಿರುವ ಈ ಅಂಗಡಿ ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ ಯತೀಶ್‌ ಮುರ್ಕೆತ್ತಿ ಮಾಲಕತ್ವದಲ್ಲಿ ಪುನಾರಂಭಗೊಳ್ಳುತ್ತಿದೆ. ಯತೀಶ್‌ ಈ ಹಿಂದೆ ಎಬಿವಿಪಿಯಲ್ಲಿ ಜಿಲ್ಲಾ ಸಂಚಾಲಕರಾಗಿ ಬಳಿಕ ಸುಳ್ಳ ತಾಲೂಕು ಜವಬ್ದಾರಿಯಲ್ಲಿ ತೊಡಗಿಕೊಂಡಿದ್ದರು. ಯತೀಶ್‌ ಕೋಳಿ ಸಾಕಾಣೆಕೆ ಮಾಡುತ್ತಿದ್ದು, ಇದೀಗ ‌ ಚಿಕನ್‌ ಸೆಂಟರ್‌ ಓಪನ್‌ ಮಾಡುತ್ತಿದ್ದಾರೆ.

ಮತಾಂಧ ಶಕ್ತಿಗಳ ನೀಚ ಕೆಲಸಕ್ಕೆ ಹಿಂದೂ ಸಮಾಜ ಎಂದಿಗೂ ಎದೆಗುಂದುವುದಿಲ್ಲ ಎಂಬ ಸಂದೇಶವನ್ನು ಈ ಮೂಲಕ ನೀಡುತ್ತಿದ್ದೇನೆ. ಈ ಅಂಗಡಿಯೂ ಅಕ್ಷಯ ಚಿಕನ್‌ ಸೆಂಟರ್‌ ಹೆಸರಿನಲ್ಲೇ ಮುಂದುವರೆಯಲಿದ್ದು, ಗ್ರಾಹಕರು ಸಹಕರಿಸಬೇಕು ಜತೆಗೆ ಪ್ರವೀಣ್‌ ನೆನಪಿನಲ್ಲಿ ಈ ಅಂಗಡಿ ಉಳಿಯುವ ದೃಷ್ಠಿಯಿಂದ ಮುಂದುವರಿಸುತ್ತೇನೆ. ಗ್ರಾಹಕರು ಯಾವುದೇ ಭಯವಿಲ್ಲದೇ ಬಂದ ಖರೀದಿಸಿ ಎಂದು ಯತೀಶ್‌ ಅಭಿಪ್ರಾಯ ಪಟ್ಟಿದ್ದಾರೆ.

error: Content is protected !!