Monday, 16th September 2024

ತತ್ತ್ವ ಸಿದ್ಧಾಂತ ಮೈಗೂಡಿಸಿಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಿ

ರಾಯಚೂರು: ಶಾರದಾಂಬೆ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ನಲ್ಲಿ ಬಸವ ಜಯಂತಿ ಆಚರಿಸುವ ಮೂಲಕ ಬಸವ ತತ್ತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಉತ್ತಮ ಕಾರ್ಯ ನಿರ್ವಹಿಸಬೇಕು ಎಂದು ಬ್ಯಾಂಕಿನ ವ್ಯವಸ್ಥಾಪಕ ಅಧ್ಯಕ್ಷರು ವೈ ಸುರೇಶ್ ಗೌಡ ತಿಳಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಚಂದ್ರಶೇಖರ್, ಪರಶುರಾಮ ಕೇಸರಿ,ಈರಣ್ಣ ಸಂಗಾಪುರ,ವಿಜಯಕುಮಾರ, ಸತ್ಯಪ್ಪ,ಸಂಗಮೇಶ್,ವೀರಭದ್ರಪ್ಪ ಸೇರಿದಂತೆ ಬ್ಯಾಂಕ್ ಅಧಿಕಾರಿಗಳು ಹಣ ಶೇಖರಣೆ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.