ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indi (Vijayapura) News: ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಪ್ರಯತ್ನವೇ ಸಂಘದ ಬೆಳವಣಿಗೆಗೆ ಕಾರಣವಾಗಿದೆ

ದೇಶದಲ್ಲಿನ ಮಹಾರಾಷ್ಟ ಹಾಗೂ ಮಧ್ಯಪ್ರದೇಶ ಸರಕಾರಗಳು ಮಾತ್ರ ರೈತರಿಗಾಗಿ ದೊಡ್ಡ-ದೊಡ್ಡ ಯೋಜನೆಗಳನ್ನು ಜಾರಿ ಮಾಡಿವೆ. ನೀರಾವರಿ ವಿದ್ಯುತ್ ಸೇರಿದಂತೆ ರೈತರಿಗೆ ಅವಶ್ಯವಿರುವ ಯೋಜನೆ ಗಳಿಗೆ ಆ ಸರಕಾರಗಳು ಆಧ್ಯತೆ ನೀಡುತ್ತವೆ. ನಮ್ಮಲ್ಲಿಯೂ ಸಹ ಸರಕಾರಗಳು ರೈತರಿಗೆ ಆಧ್ಯತೆ ನೀಡಬೇಕು

ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘಗಳು ಉತ್ತುಂಗದಲ್ಲಿವೆ

ಸೋಮವಾರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಇಂಡಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟಗಾರರ ಸಂಘದ ನೂತನ ಕಟ್ಟಡದ ಉದ್ಘಾಟನೆಯನ್ನು ಸಚಿವ ಶಿವಾನಧ ಪಾಟೀಲ ನೆರವೇರಿಸಿದರು, ಮಾತನಾಡಿದರು.

Profile Ashok Nayak Jun 3, 2025 1:03 PM

ಇಂಡಿ: ರಾಜ್ಯದಲ್ಲಿ ಕೆಲವೇ-ಕೆಲವು ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘಗಳು ಉತ್ತುಂಗದಲ್ಲಿವೆ. ಬಹಳಷ್ಟು ಸಂಘಗಳು ನಷ್ಟ ಅನುಭವಿಸಿವೆ. ಅದರಂತೆ ಜಿಲ್ಲೆಯಲ್ಲಿ ಇಂಡಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟಗಾರರ ಸಂಘ ಅತ್ಯುತ್ತಮವಾಗಿ ಬೆಳೆಯುತ್ತಿದೆ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಪ್ರಯತ್ನವೇ ಸಂಘದ ಬೆಳವಣಿಗೆಗೆ ಕಾರಣವಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ, ಜವಳಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಅವರು ಸೋಮವಾರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಇಂಡಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟಗಾರರ ಸಂಘದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ರೈತರಿಗೆ ಉಪಯುಕ್ತ ಬೀಜ ಗೊಬ್ಬರಗಳನ್ನು ವಿತರಿಸುತ್ತ ರೈತರಿಂದ ದವಸ ಧಾನ್ಯಗಳನ್ನು ಉತ್ತಮ ಬೆಲೆಗೆ ಖರೀದಿಸುವ ಮೂಲಕ ರೈತರಿಗೆ ಈ ಸಂಸ್ಥೆ ಆಸರೆಯಾಗಿದೆ ಎಂದ ಅವರು ರೈತರು ವೈಜ್ಞಾ ನಿಕ ಕೃಷಿ ಮಾಡುವ ಕಡೆಗೆ ಗಮನ ಹರಿಸಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ: Indi (Vijayapura) News: ಹಣ, ಆಸ್ತಿ. ಸಂಪತ್ತು ಯಾವುದು ನಮ್ಮ ಹಿಂದೆ ಬರುವುದಿಲ್ಲ, ಒಳ್ಳೆತನ ಮಾತ್ರ ಇಡೀ ಸಮಾಜ ಗೌರವಿಸುತ್ತದೆ

ಶಿರಸಿ ಹಾಗೂ ಕುಮಟಾ ಗಳಲ್ಲಿ ಇಂತಹ ಸಂಘ ಸಂಸ್ಥೆಗಳು 500 ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿವೆ. ನಾವೂ ಸಹ ಅವರಂತೆ ಮುಂದುವರೆಯಲು ಯೋಜನೆಗಳನ್ನು ರೂಪಿಸಿಕೊಳ್ಳ ಬೇಕೆಂದು ಸಲಹೆ ನೀಡಿದರು.

ದೇಶದಲ್ಲಿ ರೈತ ಬೆಳೆದ ಬೆಳೆಗೆ ಉತ್ತಮ ದರ ಸಿಗದಿದ್ದಕ್ಕಾಗಿ ರೈತರ ಸ್ಥಿತಿ ಅದೋ ಗತಿಗೆ ಬಂದಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ರೈತರ ಬೆಳೆಗಳಿಗೆ ಉತ್ತಮ ದರ ಲಭಿಸುವಂತೆ ಮಾಡಬೇಕಿದೆ ಎಂದರು.

ಜಿಲ್ಲೆಯಲ್ಲಿ ವಿಡಿಸಿಸಿ ಬ್ಯಾಂಕ್ ವತಿಯಿಂದ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ರೈತರ ಬೆನ್ನಿಗೆ ವಿಡಿಸಿಸಿ ಬ್ಯಾಂಕ್ ಸದಾ ಇದೆ. ಇದರಿಂದ ರೈತರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವಿದೆ ಎಂದರು.

ರಾಜ್ಯದಲ್ಲಿ ಅತೀ ಹೆಚ್ಚು ತೊಗರಿ ಬೆಳೆ ಬೆಳೆಯಲಾಗುತ್ತದೆ. ಆದರೆ ಕೇಂದ್ರ ಸರಕಾರ ಬೇರೆ ದೇಶದಿಂದ ತೊಗರಿ ಆಮದು ಮಾಡಿಕೊಂಡರೆ ನಮ್ಮ ರೈತರ ತೊಗರಿ ಬೆಲೆಗೆ ಉತ್ತಮ ಬೆಲೆ ಬರಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.

*

ಕೃಷ್ಣಾ ನದಿಯಿಂದ ಅವಳಿ ಜಿಲ್ಲೆಗೆ ೮೩ ಟಿಎಂಸಿ ನೀರು ಬಳಕೆಗೆ ಅವಕಾಶವಿದೆ. ಅಣೆಕಟ್ಟಿನ ಎತ್ತರವನ್ನು ೫೨೪ ಕ್ಕೆ ಏರಿಸಿದಾಗ ಮಾತ್ರ ಸಂಪೂರ್ಣ ಜಿಲ್ಲೆ ನೀರಾವರಿಗೆ ಒಳಪಡಲಿದೆ. ಆ ಯೋಜನೆ ಜಾರಿಯಾದರೆ ಈ ಬರಡು ಭೂಮಿಯಿಂದ ಬಂಗಾರ ತೆಗೆಯಲು ಸಾಧ್ಯವಾಗುತ್ತದೆ.

ಶಿವಾನಂದ ಪಾಟೀಲ, ಸಚಿವರು,

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶವಂತ್ರಾಯಗೌಡ ಪಾಟೀಲ ಮಾತನಾಡಿ, ದೇಶದಲ್ಲಿನ ಮಹಾರಾಷ್ಟ ಹಾಗೂ ಮಧ್ಯಪ್ರದೇಶ ಸರಕಾರಗಳು ಮಾತ್ರ ರೈತರಿಗಾಗಿ ದೊಡ್ಡ-ದೊಡ್ಡ ಯೋಜನೆಗಳನ್ನು ಜಾರಿ ಮಾಡಿವೆ. ನೀರಾವರಿ ವಿದ್ಯುತ್ ಸೇರಿದಂತೆ ರೈತರಿಗೆ ಅವಶ್ಯವಿರುವ ಯೋಜನೆಗಳಿಗೆ ಆ ಸರಕಾರಗಳು ಆಧ್ಯತೆ ನೀಡುತ್ತವೆ. ನಮ್ಮಲ್ಲಿಯೂ ಸಹ ಸರಕಾರಗಳು ರೈತರಿಗೆ ಆಧ್ಯತೆ ನೀಡಬೇಕು. ನಾನು ಈ ಭಾಗದ ನೀರಾವರಿ ಯೋಜನೆಗಾಗಿ ಸರ್ವ ತ್ಯಾಗಕ್ಕೂ ಸಿಧ್ಧ. ವಿಧಾನಸೌಧ ಒಳಗೆ, ಹೊರಗೆ ನಮ್ಮ ಭಾಗದ ಜನರ ಪರವಾಗಿ ಮಾತನಾಡುತ್ತೇನೆ ಎಂದರು.

ಸAಸ್ಥೆಯ ಅಧ್ಯಕ್ಷ ಬಿ.ಬಿ. ಗುಡ್ಡದ, ಕಾರ್ಯದರ್ಶಿ ಆರ್.ಜಿ. ಕಾವಿ ಮಾತನಾಡಿ, ಸಂಸ್ಥೆ ನಡೆದು ಬಂದ ದಾರಿಯ ಕುರಿತು ವಿವರಿಸಿದರು.

ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು.

ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ವಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ಬಿ.ಎಂ.ಕೋರೆ, ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತçದ, ಭಾಗ್ಯಶ್ರೀ ಕುಂಬಾರ ತಹಸೀಲ್ದಾರ ಬಿ.ಎಸ್. ಕಡಕಭಾವಿ, ಬಾಬುಸಾಹುಕಾರ ಮೇತ್ರಿ, ಎಂ.ಸಿ. ಮುಲ್ಲಾ, ಕೆ.ಹೆಚ್. ವಡ್ಡರ, ಸಂಸ್ಥೆಯ ಉಪಾಧ್ಯಕ್ಷ ಎ.ಬಿ. ಪಾಟೀಲ, ನಿರ್ದೇಶಕರಾದ ಗುರುನಾಥ ಮೈತ್ರಿ, ಶಿವನಗೌಡ ಪಾಟೀಲ, ರಾಜುಗೌಡ ಪಾಟೀಲ, ವಿಜಯಕುಮಾರ ನಿಡಗುಂದಿ, ಬಸವರಾಜ ಲವಗಿ, ಮಲ್ಲು ಗುಡ್ಲ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ.ಜಿ. ಕಾವಿ, ಜಿ.ಎಸ್. ಹೊಸಮನಿ, ಕೆ.ಡಿ. ಕುಲಕರ್ಣಿ, ಆನಂದ ರತ್ನಾಕರ, ಶ್ರೀಮಂತ ಇಂಡಿ, ಪ್ರಶಾಂತ ಕಾಳೆ, ಜಾವೀದ್ ಮೋಮಿನ್, ಮಹಾದೇವ ಗಡ್ಡದ, ರಜನಿ ಆಳಂದಿಕರ ಸೇರಿದಂತೆ ಇನ್ನಿತರರು ಇದ್ದರು.