ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ex MLA K P BachheGowda: ವಿದ್ಯೆ ಕಲಿಸಿದ ಗುರುಗಳನ್ನು ವಿದ್ಯಾರ್ಥಿಗಳು ಜೀವಮಾನ ಪರ್ಯಂತ ಗೌರವದಿಂದ ಕಾಣಬೇಕು : ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ

ಕೆ. ಪಿ.ಬಚ್ಚೇಗೌಡ ಶಾಸಕರಾಗಿದ್ದ ಅವಧಿಯಲ್ಲಿ ಅವರು ಓದಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಕಟ್ಟಡಕ್ಕೆ ೫ ಕೋಟಿ ರೂಗಳನ್ನು ಸರ್ಕಾರ ದಿಂದ ಅನುದಾನ ಕೊಡಿಸಿದ್ದನ್ನು ನೆನಪು ಮಾಡಿಕೊಂಡರು. ನಂತರದ ಅವಧಿಯಲ್ಲಿ ಮತ್ತೂ ೯ ಕೋಟಿ ರೂಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸರ್ಕಾರಿ ಅನುದಾನ ಬಂದಿದ್ದು, ಇದೀಗ ರಾಜ್ಯ ಗಮನಸೆಳೆಯುವಂತೆ ಅತ್ಯಂತ ಆಧುನಿಕ ರೀತಿಯಲ್ಲಿ ಕಾಲೇಜ್ ಕಟ್ಟಡ ನಿರ್ಮಾಣ ಆಗುತ್ತಿದೆ

ಗುರುಗಳನ್ನು ವಿದ್ಯಾರ್ಥಿಗಳು ಜೀವಮಾನ ಪರ್ಯಂತ ಗೌರವದಿಂದ ಕಾಣಬೇಕು

ವಿದ್ಯೆ ಕಲಿಸಿದ ಗುರುಗಳನ್ನು ವಿದ್ಯಾರ್ಥಿಗಳು ಜೀವಮಾನ ಪರ್ಯಂತ ಗೌರವದಿಂದ ಕಾಣಬೇಕು ಹಾಗೂ ಅಂತಹ ಗುರುಗಳಿಂದ ಕಲಿತ ವಿದ್ಯೆಯನ್ನು ಉತ್ತಮ ಶಿಷ್ಯರಿಗೆ ವಿದ್ಯಾದಾನ ನೀಡಬೇಕು ಆಗ ಗುರುಗಳ ಋಣ ತೀರಿಸಿದಂತೆ ಆಗುತ್ತದೆ ಎಂದು ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ತಿಳಿಸಿದರು.

Profile Ashok Nayak Jun 3, 2025 11:42 AM

ಚಿಕ್ಕಬಳ್ಳಾಪುರ: ವಿದ್ಯೆ ಕಲಿಸಿದ ಗುರುಗಳನ್ನು ವಿದ್ಯಾರ್ಥಿಗಳು ಜೀವಮಾನ ಪರ್ಯಂತ ಗೌರವ ದಿಂದ ಕಾಣಬೇಕು ಹಾಗೂ ಅಂತಹ ಗುರುಗಳಿಂದ ಕಲಿತ ವಿದ್ಯೆಯನ್ನು ಉತ್ತಮ ಶಿಷ್ಯರಿಗೆ ವಿದ್ಯಾ ದಾನ ನೀಡಬೇಕು ಆಗ ಗುರುಗಳ ಋಣ ತೀರಿಸಿದಂತೆ ಆಗುತ್ತದೆ ಎಂದು ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ತಿಳಿಸಿದರು.

ಜಿಲ್ಲಾ ನಿವೃತ್ತ ಸರ್ಕಾರಿ  ನೌಕರರ ಸಂಘದ ವತಿಯಿಂದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಿದ್ದ ಗುರು ಶಿಷ್ಯರ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಚಿಕ್ಕಬಳ್ಳಾಪುರದ ಎಂ.ಜಿ.ರಸ್ತೆಯಲ್ಲಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಿವೃತ್ತ ಜುಯಾ ಲಜಿ ಪ್ರಾಣಿಶಾಸ್ತ್ರ ವಿಭಾಗದ ನಿವೃತ್ತ ಉಪನ್ಯಾಸಕ ಬಿ.ಕೆ. ರಾಮ ಮೋಹನ್ ನಿವೃತ್ತ ಉಪನ್ಯಾಸಕಿ ಉಷಾ  ನಿವೃತ್ತ ಉಪನ್ಯಾಸಕ ಜಯಚಂದ್ರ ರವರುಗಳನ್ನು ಹಿರಿಯ ವಿದ್ಯಾರ್ಥಿಗಳು ಸನ್ಮಾನಿಸುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಇದನ್ನೂ ಓದಿ: Chikkaballapur News: ಸರ್ವೋದಯ ಪರಿಕಲ್ಪನೆಯಲ್ಲಿ ಜೆಡಿಯು ಚುನಾವಣೆ: ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ನಾಗರಾಜು ಪರ ಮಹಿಮಾ ಪಾಟೀಲ್ ಪ್ರಚಾರ

ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಿವೃತ್ತ ಪ್ರಾಂಶುಪಾಲ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಿ.ವಿ. ಕೃಷ್ಣ ಮಾತನಾಡಿ ಕೆ. ಪಿ.ಬಚ್ಚೇಗೌಡ ಶಾಸಕರಾಗಿದ್ದ ಅವಧಿಯಲ್ಲಿ ಅವರು ಓದಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಕಟ್ಟಡಕ್ಕೆ ೫ ಕೋಟಿ ರೂಗಳನ್ನು ಸರ್ಕಾರ ದಿಂದ ಅನುದಾನ ಕೊಡಿಸಿದ್ದನ್ನು ನೆನಪು ಮಾಡಿಕೊಂಡರು. ನಂತರದ ಅವಧಿಯಲ್ಲಿ ಮತ್ತೂ ೯ ಕೋಟಿ ರೂಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸರ್ಕಾರಿ ಅನುದಾನ ಬಂದಿದ್ದು, ಇದೀಗ ರಾಜ್ಯ ಗಮನಸೆಳೆಯುವಂತೆ ಅತ್ಯಂತ ಆಧುನಿಕ ರೀತಿಯಲ್ಲಿ ಕಾಲೇಜ್ ಕಟ್ಟಡ ನಿರ್ಮಾಣ ಆಗುತ್ತಿದೆ ಎಂದು ಸ್ಮರಿಸಿಕೊಂಡರು.

ರಾಜ್ಯ ಸರ್ಕಾರದ ಗ್ಯಾರೆಂಟಿಗಳ ಅನುಷ್ಠಾನ ಸಮಿತಿ ಪ್ರಾಧಿಕಾರ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ವಿದ್ಯಾರ್ಥಿ ಯಲುವಹಳ್ಳಿ ಎನ್ ರಮೇಶ್ ಮಾತನಾಡಿ ಈ ರೀತಿ ಗುರುಗಳನ್ನು ಸ್ಮರಿಸುವ ಕಾರ್ಯ ಕ್ರಮ ಅತ್ಯಂತ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚು ಹಿರಿಯ ವಿದ್ಯಾರ್ಥಿ ಗಳನ್ನು ಸಂಘಟಿಸಿ ಅತ್ಯಂತ ಉತ್ತಮವಾದ ಗುರು ಶಿಷ್ಯರ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಡಾ. ಬಿ ವಿ ಮಂಜುನಾಥ್ ಕೆ ಟಿ. ಕೃಷ್ಣಕಾಂತ್ ಕೆ.ಟಿ. ವಿಜಯ ಕೃಷ್ಣ ಮುನಿರಾಜು ಡಾ.ಜಿ. ವಿ. ಮಂಜುನಾಥ್ ನಿವೃತ್ತ ಬ್ಯಾಂಕ್ ಉದ್ಯೋಗಿ ಶ್ರೀನಾಥ್ ಹಿರಿಯ ನಿವೃತ್ತ ನೌಕರ ರೈಲ್ ಶ್ರೀನಿವಾಸ್ ಒಳಗೊಂಡಂತೆ ಮತ್ತೆ ಇರವರು ಹಾಜರಿದ್ದರು.