Sunday, 8th September 2024

ಕಲೆಯ ಆಗರ ಜಯರಾಂ ಮುಂಡಾಜೆ

* ಸ್ನೇಹಾ ಗೌಡ ಎಸ್‌ಡಿಎಂ ಕಾಲೇಜು, ಉಜಿರೆ

ವೃತ್ತಿಯೊಂದಿಗೆ ಪ್ರವೃತ್ತಿಯೂ ಮೇಳೈಸಿದರೆ ಬದುಕು ಸುಂದರವಾಗಿರುತ್ತದೆ. ಕಲೆಯ ಅಭಿರುಚಿ ಜೀವನಪ್ರೀತಿ ಕಲಿಸುವುದರೊಂದಿಗೆ ಕಲಾರಾಧನೆ ಮಾಡಲೂ ಅವಕಾಶ ನೀಡುತ್ತದೆ. ಇಂತಹ ಧ್ಯೇಯವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ರಂಗಕರ್ಮಿಯಾಗಿ ಸರ್ವಕಲೆಯನ್ನು ಬಲ್ಲ ಹಾಗೂ ತಮ್ಮ ಬದುಕನ್ನಾಾಗಸಿಕೊಂಡು, ಮುಂದಿನ ತಲೆಮಾರಿಗೂ ಕಲಾ ಸಂಸ್ಕೃತಿಯನ್ನು ಧಾರೆಯೆರೆಯುತ್ತಿಿರುವ ರಂಗಕಲಾವಿದ ಜಯರಾಂ ಕೆ ಮುಂಡಾಜೆ.

ತನ್ನ ವೃತ್ತಿಿಯೊಂದಿಗೆ ಪ್ರವೃತ್ತಿಿಯನ್ನೂ ಅತೀವವಾಗಿ ಪ್ರೀತಿಸುವ ಕಲಾಪ್ರತಿಭೆ. ದಕ್ಷಿಣ ಕನ್ನಡ ಜಿಲ್ಲೆೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯ ಜಯರಾಂ ಕೆ. ಎಲ್ಲರಿಂದಲೂ ಪ್ರೀತಿಯಿಂದ ‘ಮಾಸ್ಟ್ರು’ ಎಂದೇ ಕರೆಯಿಸಿಕೊಳ್ಳುವರು. ಭಜನೆ, ಭಾಷಣ, ಜನಪದ ಕುಣಿತ, ತಾಳಮದ್ದಳೆ, ಪ್ರಸಾದನ, ಕವನ ರಚನೆ, ಪಾಡ್ದನ ಹೇಳುವುದು, ನಾಟಕ ರಚನೆ, ನಿರ್ದೆಶನ, ಏಕಪಾತ್ರಾಾಭಿನಯ ಹೀಗೆ ಹತ್ತು ಹಲವು ರೀತಿಯ ಕಲಾ ಒಳಗೊಂಡ ಸಮ್ಮಿಿಲನ ಎಂದರೆ ತಪ್ಪಿಿಲ್ಲ.

ಇವರು ಪ್ರಾಾಥಮಿಕ ಮತ್ತು ಪ್ರೌೌಢ ಶಿಕ್ಷಣವನ್ನು ಮುಂಡಾಜೆಯಲ್ಲಿ ಪೂರೈಸಿ, ಪದವಿಪೂರ್ವ ಶಿಕ್ಷಣ ಹಾಗೂ ಚಿತ್ರಕಲಾ ಅಧ್ಯಾಾಪಕ ತರಬೇತಿಯನ್ನು ಉಡುಪಿಯಲ್ಲಿ ಪಡೆದರು. ಇವರು 5 ವರ್ಷ ವಯಸ್ಸಿಿನಲ್ಲಿದ್ದಾಾಗಲೆ ನಾಟಕದಲ್ಲಿ ಕೌಶಿಕನ ಪಾತ್ರ ಮಾಡಿ ಜನರಿಂದ ಮೆಚ್ಚುಗೆ ಗಳಿಸಿದರು. ನಂತರ ‘ಭೂಲೋಕದಲ್ಲಿ ಯಮರಾಜ’ ಅನ್ನುವ ನಾಟಕದಲ್ಲಿ ಯಮನ ಪಾತ್ರದಲ್ಲಿ ನಟಿಸಿದ್ದರು. ಶಾಲಾ ದಿನಗಳಲ್ಲೇ ಹಾಡು, ನಾಟಕ, ಕ್ರೀಡೆ, ಯಕ್ಷಗಾನ ಕ್ಷೇತ್ರಗಳಲ್ಲಿ ಸಾಧನೆಗೈಯಲು ತನ್ನ ಹೆತ್ತಮ್ಮನೇ ಕಾರಣವೆಂದು ಹೇಳಿಕೊಳ್ಳುತ್ತಾಾರೆ.

ಲಾವಣಿ ಹಾಗೂ ಏಕಪಾತ್ರಭಿನಯದಲ್ಲಿ ಮೈಸೂರು ವಿಭಾಗ ಮಟ್ಟದಲ್ಲಿ ಕಲಾಪ್ರದರ್ಶನ ನೀಡಿದ್ದಾಾರೆ. ಯುವಜನ ಮೇಳದಲ್ಲಿ 9 ಬಾರಿ ಜಿಲ್ಲಾಾ ಮಟ್ಟಕ್ಕೆೆ ಆಯ್ಕೆೆಯಾಗಿರುತ್ತಾಾರೆ. ತುಳುನಾಡಿನ ವೈವಿಧ್ಯಮಯ ಕಲಾಪ್ರಕಾರಗಳನ್ನೆೆಲ್ಲ ಒಗ್ಗೂಡಿಸಿ ತುಳುನಾಡ ವೈಭವ ಕಾರ್ಯಕ್ರಮದ ಮೂಲಕ ಜನರ ಮೆಚ್ಚಿಿಗೆಗ ಪಾತ್ರವಾದವರು. ನೂರಕ್ಕೂ ಹೆಚ್ಚು ನಾಟಕದಲ್ಲಿ ಸ್ತ್ರೀ ಪಾತ್ರಧಾರಿಯಾಗಿ, ಹಾಸ್ಯ ಕಲಾವಿದನಾಗಿ ಅಭಿನಯಿಸಿದ್ದಾಾರೆ. ಯಕ್ಷಗಾನದಲ್ಲೂ ಸ್ತ್ರೀ ವೇಷ ಪಾತ್ರ ನಿರ್ವಹಿಸುವಲ್ಲಿ ಎತ್ತಿಿದ ಕೈ. ಈವರೆಗೂ ಹಲವು ನಾಟಕಗಳಿಗೆ ನಿರ್ದೇಶನ ಮಾಡಿ ಕಥೆಗಳನ್ನೂ ಬರೆದಿದ್ದಾಾರೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ. ಭಾಷಣಗಾರರಾಗಿ, ಹಾಡುಗಾರರಾಗಿ, ಕುಣಿತ ಭಜನಾ ತಂಡದ ಸದಸ್ಯನಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಶಟಲ್ ಬ್ಯಾಾಡ್ಮಿಿಟನ್ ಆಡುವ ಕ್ರೀಡಾಪಟುವು ಹೌದು.
ಕೇವಲ ಸಾಂಸ್ಕೃತಿಕ ಕ್ಷೇತ್ರಕ್ಕೆೆ ಸೀಮಿತವಾಗದೆ ಗ್ರಾಾಮೀಣ ಭಾಗದ ಬಡ ವಿದ್ಯಾಾರ್ಥಿಗಳಿಗೆ ಮುಂಡಾಜೆಯಲ್ಲಿ ‘ಕಲಾಕುಂಚ’ಎಂಬ ಮನೆಪಾಠ ಕೇಂದ್ರದ ಮೂಲಕ ವಿದ್ಯಾಾದಾನ ಮಾಡುತ್ತಿಿದ್ದಾಾರೆ. ಚಿತ್ರಕಲೆ, ಚಿತ್ರವಿನ್ಯಾಾಸ, ಹಲಗೆ ಬರಹದಲ್ಲಿ ತೊಡಗಿರುವ ಇವರು ಉಜಿರೆಯ ಅನುಗ್ರಹ ಶಾಲೆಯಲ್ಲಿ ಕಲಾ ಶಿಕ್ಷಕರಾಗಿಯೂ ಕಾರ್ಯನಿರ್ವಹಿಸುತ್ತಿಿದ್ದಾಾರೆ. ಇವರ ಈ ಸತ್ಕಾಾರ್ಯಕ್ಕೆೆ ಉತ್ತೇಜನ ನೀಡುತ್ತಾಾ ಬಂದಿರುವವರು ಯುವಕ ಮಂಡಲ ಹಾಗೂ ಯಂಗ್ ಚಾಲೆಂಜರ್‌ಸ್‌ ಕ್ರೀಡಾ ಸಂಘ.

ಕಲೆಯನ್ನು ಮೈತುಂಬಿಸಿಕೊಂಡಿರುವ ಇವರಿಗೆ ರಾಜ್ಯಮಟ್ಟದ ಯಕ್ಷಗಾನ ಪ್ರಶಸ್ತಿಿ, ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಾಲೂಕು ಮಟ್ಟದ ಅತ್ಯುತ್ತಮ ಯುವ ಕಲಾವಿದ ಪ್ರಶಸ್ತಿಿ, ರಾಜ್ಯ ಮಟ್ಟದ ಯುವಜನ ಮೇಳದಲ್ಲಿ ‘ಎಚ್ಚಮ ನಾಯಕ’ ಏಕಪಾತ್ರಭಿನಯಕ್ಕೆೆ ರಾಜ್ಯ ಪ್ರಶಸ್ತಿಿ ಹೀಗೆ ಹತ್ತು ಹಲವು ಪ್ರಶಸ್ತಿಿಗಳು ದೊರಕಿವೆ.

Leave a Reply

Your email address will not be published. Required fields are marked *

error: Content is protected !!