Vishwavani Editorial: ಯುದ್ದಕಾಲೇ ಶಸ್ತ್ರಾಭ್ಯಾಸ ತರವೇ?
ಮಳೆಗಾಲ ಬಂತು ಎಂದಾಕ್ಷಣ ವಿವಿಧ ಪ್ರಾಂತ್ಯಗಳಲ್ಲಿ ಕಾಣಬರುವ ‘ವರ್ಷಧಾರೆ’ಯ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವುದೇ ಒಂದು ಸಂಭ್ರಮ. ಅದರಲ್ಲೂ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿನ ಮಳೆಯನ್ನು ನೋಡುತ್ತಿದ್ದರೆ, ‘ನೆಲ ಮುಗಿಲನಪ್ಪಿದುದೋ, ಮುಗಿಲೇ ನೆಲನಪ್ಪಿ ದುದೋ, ಮಳೆಯಲ್ಲಿ ಬಯಲಾಯ್ತು ಬಯಲಿನಂತರವು’ ಎಂಬ ಕವಿ ವಾಣಿ ನೆನಪಾಗುತ್ತದೆ.


ಮಳೆಗಾಲ ಬಂತು ಎಂದಾಕ್ಷಣ ವಿವಿಧ ಪ್ರಾಂತ್ಯಗಳಲ್ಲಿ ಕಾಣಬರುವ ‘ವರ್ಷಧಾರೆ’ಯ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವುದೇ ಒಂದು ಸಂಭ್ರಮ. ಅದರಲ್ಲೂ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿನ ಮಳೆಯನ್ನು ನೋಡುತ್ತಿದ್ದರೆ, ‘ನೆಲ ಮುಗಿಲನಪ್ಪಿದುದೋ, ಮುಗಿಲೇ ನೆಲನಪ್ಪಿದುದೋ, ಮಳೆಯಲ್ಲಿ ಬಯಲಾಯ್ತು ಬಯಲಿನಂತರವು’ ಎಂಬ ಕವಿ ವಾಣಿ ನೆನಪಾಗುತ್ತದೆ. ಒಂದೊಮ್ಮೆ ಮಳೆ ಬಾರದಿದ್ದರೂ, ‘ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ ಬಾಳೆತೋಟಕೆ ನೀರಿಲ್ಲ’ ಎಂದು ಚಿಣ್ಣರ ಬಾಯಲ್ಲಿ ಹಾಡಿಸುವಷ್ಟರ ಮಟ್ಟಿಗೆ ಕವಿಗಳು ಮಳೆಗೆ ಮನಸೋಲುತ್ತಾರೆ. ಆದರೆ, ಹೀಗೆ ಜೀವಸೆಲೆ ಉಕ್ಕಿಸಬೇಕಿದ್ದ ಮಳೆಯು ದಿನಗಳೆದಂತೆ, ತಲ್ಲಣವನ್ನು ತಂದೊಡ್ಡುವ ‘ಅನಪೇಕ್ಷಿತ ಅತಿಥಿ’ ಆಗುತ್ತಿದೆಯೇ ಎಂದು ಯಾರಿಗಾದರೂ ಅನಿಸುತ್ತಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ.
ಇದನ್ನೂ ಓದಿ: Vishwavani Editorial: ಸಂಚುಕೋರರಿಗೆ ಶಾಸ್ತಿಯಾಗಲಿ
ಕಾರಣ, ಅತಿರೇಕದ ಮತ್ತು ಅಕಾಲಿಕ ಮಳೆಯಿಂದಾಗುವ ಬೆಳೆ ನಾಶ, ಘಾಟಿ ಪ್ರದೇಶಗಳಲ್ಲಿ ಕಾಣ ಬರುವ ಭೂಕುಸಿತದಿಂದ ಸಂಚಾರಕ್ಕೆ ಒದಗುವ ಅಸ್ತವ್ಯಸ್ತತೆ, ನಗರ ಪ್ರದೇಶಗಳಲ್ಲಿ ಕಾಣಬರುವ ಪ್ರವಾಹದೋಪಾದಿ ದೃಶ್ಯಗಳು, ಮಳೆಯ ಮಹಾಪೂರದಲ್ಲಿ ಕೊಚ್ಚಿ ಹೋಗುವ ಜನ-ಜಾನುವಾರು ಗಳ ಸುದ್ದಿಗಳು ಈಚೀಚೆಗೆ ಸಾಮಾನ್ಯವಾಗುತ್ತಿವೆ. ಪ್ರಕೃತಿಯ ಎದುರು ಮನುಷ್ಯ ನಿಲ್ಲಲಾಗದು,
ತೊಡೆ ತಟ್ಟಲಾಗದು ಎಂಬುದೇನೋ ಖರೆ; ಆದರೆ ಒಂದು ಮಟ್ಟದ ಮುನ್ನೆಚ್ಚರಿಕಾ ಕ್ರಮ ಗಳನ್ನಂತೂ ನಾಗರಿಕರು ಮತ್ತು ಆಳುಗರು ಕೈಗೊಳ್ಳಲು ಸಾಧ್ಯವಿದೆ. ಕೆರೆಗಳನ್ನು ಅತಿಕ್ರಮಿಸಿ ಮಹಲುಗಳನ್ನು ಕಟ್ಟಿದ ಪರಿಣಾಮವೇ ಬೆಂಗಳೂರಿನಲ್ಲಿನ ಮಳೆ ಪ್ರವಾಹಕ್ಕೆ ಕಾರಣವಾಗಿದ್ದರೆ, ಅಭಿವೃದ್ಧಿ ಚಟುವಟಿಕೆಗಳ ಹೆಸರಿನಲ್ಲಿ ಬೆಟ್ಟಗಳ ಒಡಲಿಗೆ ಕನ್ನ ಹಾಕಿದ್ದು ಘಾಟಿ ಪ್ರದೇಶಗಳಲ್ಲಿನ ಮಣ್ಣು ಕುಸಿತಕ್ಕೆ ಒಂದು ಹೇತುವಾಗಿದೆ ಎನ್ನುತ್ತಾರೆ ಬಲ್ಲವರು.
ಇಂಥ ಅಪಸವ್ಯಗಳಿಗೆ ನಿರ್ಣಾಯಕ ನಿಲುಗಡೆ ಒಡ್ಡಬೇಕಿದೆ; ಅದನ್ನು ಬಿಟ್ಟು ಮಳೆಗಾಲ ಸನ್ನಿಹಿತ ವಾದಾಗಷ್ಟೇ, ಏನಾದರೂ ಅನಾಹುತವಾದಾಗಷ್ಟೇ ಸುರಕ್ಷತಾ ಕ್ರಮಗಳಿಗೆ ಮುಂದಾಗುವುದು ‘ಯುದ್ಧಕಾಲೇ ಶಸಾಭ್ಯಾಸ’ ಎಂಬ ಮಾತನ್ನು ನೆನಪಿಸುತ್ತದೆ.