ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ರಾಷ್ಟ್ರನಿಷ್ಠೆಯಲ್ಲೂ ರಾಜಕೀಯವೇ?

“ಪಾಕಿಸ್ತಾನದ ಮಡಿಲಲ್ಲಿ ನೆಲೆಗೊಂಡಿದ್ದ ಭಯೋತ್ಪಾದಕರ 9 ತಾಣಗಳ ಮೇಲೆ ಭಾರತವು ದಾಳಿ ನಡೆಸಿದ ನಂತರವಷ್ಟೇ ಪಾಕಿಸ್ತಾನಕ್ಕೆ ಮಾಹಿತಿ ನೀಡಲಾಯಿತು" ಎಂಬುದಾಗಿ ಜೈಶಂಕರ್ ಸಂಸದೀಯ ಸಮಿತಿಗೆ ತಿಳಿಸಬೇಕಾಗಿ ಬಂದಿರುವುದು ಈ ಮಾತಿಗೆ ಪುಷ್ಟಿ ನೀಡುತ್ತದೆ. ಹಿಂದೊಮ್ಮೆ ಉಗ್ರರ ನೆಲೆಗಳ ಮೇಲೆ ಭಾರತವು ‘ಸರ್ಜಿಕಲ್ ಸ್ಟ್ರೈಕ್’ ಕೈಗೊಂಡಾಗಲೂ, ಅದಕ್ಕೆ ಪುರಾವೆ ಒದಗಿಸುವಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ಆಗ್ರಹ ಹೊಮ್ಮಿತ್ತು ಎಂಬುದನ್ನಿಲ್ಲಿ ಸ್ಮರಿಸಬಹುದು.

ರಾಷ್ಟ್ರನಿಷ್ಠೆಯಲ್ಲೂ ರಾಜಕೀಯವೇ?

Profile Ashok Nayak May 28, 2025 5:24 AM

ದಕ್ಷ ಹಾಗೂ ಸಮರ್ಥ ರಾಜಕೀಯ ಪಕ್ಷವು ಅಧಿಕಾರದ ಗದ್ದುಗೆಯನ್ನು ಅಪ್ಪುವುದು ಎಷ್ಟು ಮುಖ್ಯ ವೋ, ಅಂಥ ಸರಕಾರವು ಒಂದೊಮ್ಮೆ ತಪ್ಪು ಹೆಜ್ಜೆ ಇಟ್ಟರೆ ಕಿವಿ ಹಿಂಡಿ ಸರಿದಾರಿಗೆ ತರುಬಲ್ಲಂಥ ಮತ್ತೊಂದು ಪರಿಣಾಮಕಾರಿ ಪಕ್ಷವೂ ಪ್ರತಿಪಕ್ಷದ ಸ್ಥಾನದಲ್ಲಿ ಇರಬೇಕಾದ್ದು ಅತ್ಯಗತ್ಯ. ಅದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಸೊಬಗೂ ಹೌದು. ಪ್ರತಿಪಕ್ಷಗಳು ಸರಕಾರವನ್ನು ಕಾಲಾನು ಕಾಲಕ್ಕೆ ಹಾಗೆ ತಿವಿಯುತ್ತಿದ್ದರೆ ಮಾತ್ರವೇ, ‘ನಾವು ದರ್ಬಾರು ನಡೆಸಲು ಈ ಸಿಂಹಾಸನವನ್ನು ಅಲಂಕರಿಸಿದ್ದಲ್ಲ, ಹಲವು ವಿಷಯಗಳಲ್ಲಿ ನಾವು ಉತ್ತರದಾಯಿಗಳಾಗಿದ್ದೇವೆ’ ಎಂಬ ಹೊಣೆಯರಿತ ಚಿತ್ತಸ್ಥಿತಿ ಅಧಿಕಾರಸ್ಥರಲ್ಲಿ ಢಾಳಾಗಿ ಕೆನೆಗಟ್ಟುತ್ತದೆ. ಆದರೆ, ‘ವಿರೋಧಿಸಬೇಕು’ ಎಂಬ ಒಂದೇ ಕಾರಣಕ್ಕೆ ಸರಕಾರದ ಎಲ್ಲ ಹೆಜ್ಜೆಗಳನ್ನೂ, ಉಪಕ್ರಮ ಗಳನ್ನೂ ಹಳದಿ ಕನ್ನಡಕದಲ್ಲೇ ನೋಡು ವುದು ವಿರೋಧ ಪಕ್ಷಗಳ ಕೆಲಸವಾಗಬಾರದು.

ಇದನ್ನೂ ಓದಿ: Vishwavani Editorial: ಯುದ್ದಕಾಲೇ ಶಸ್ತ್ರಾಭ್ಯಾಸ ತರವೇ?

ಪಹಲ್ಗಾಮ್‌ನಲ್ಲಿ ಉಗ್ರರು ಕೈಗೊಂಡ ಹತ್ಯಾಕಾಂಡಕ್ಕೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಭಾರತವು ಕೈಗೊಳ್ಳುವ ‘ಪಾಠ ಕಲಿಸುವ’ ಕ್ರಮಕ್ಕೆ ತನ್ನ ಬೆಂಬಲವಿದೆ ಎಂದು ಶುರುವಿನಲ್ಲಿ ಹೇಳಿಕೊಂಡಿದ್ದ ಕಾಂಗ್ರೆಸ್ ಪಕ್ಷವು, ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಗೆ ಸಂಬಂಧಿಸಿ ಅಪಸ್ವರ ಎತ್ತಿರುವು ದನ್ನು ಒಪ್ಪಲಾದೀತೇ? ಹೀಗಾಗಿ, ಸದರಿ ಕಾರ್ಯಾಚರಣೆಯ ಬಗ್ಗೆ ಪಾಕಿಸ್ತಾನ ಸೇನೆಗೆ ಭಾರತವು ಮೊದಲೇ ಮಾಹಿತಿ ನೀಡಿತ್ತು ಎಂಬ ಕಾಂಗ್ರೆಸ್‌ನ ಆರೋಪಕ್ಕೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಮತ್ತೊಮ್ಮೆ ಸ್ಪಷ್ಟೀಕರಣವನ್ನು ನೀಡಬೇಕಾಗಿ ಬಂದಿದೆ.

“ಪಾಕಿಸ್ತಾನದ ಮಡಿಲಲ್ಲಿ ನೆಲೆಗೊಂಡಿದ್ದ ಭಯೋತ್ಪಾದಕರ 9 ತಾಣಗಳ ಮೇಲೆ ಭಾರತವು ದಾಳಿ ನಡೆಸಿದ ನಂತರವಷ್ಟೇ ಪಾಕಿಸ್ತಾನಕ್ಕೆ ಮಾಹಿತಿ ನೀಡಲಾಯಿತು" ಎಂಬುದಾಗಿ ಜೈಶಂಕರ್ ಸಂಸದೀಯ ಸಮಿತಿಗೆ ತಿಳಿಸಬೇಕಾಗಿ ಬಂದಿರುವುದು ಈ ಮಾತಿಗೆ ಪುಷ್ಟಿ ನೀಡುತ್ತದೆ. ಹಿಂದೊಮ್ಮೆ ಉಗ್ರರ ನೆಲೆಗಳ ಮೇಲೆ ಭಾರತವು ‘ಸರ್ಜಿಕಲ್ ಸ್ಟ್ರೈಕ್’ ಕೈಗೊಂಡಾಗಲೂ, ಅದಕ್ಕೆ ಪುರಾವೆ ಒದಗಿಸುವಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ಆಗ್ರಹ ಹೊಮ್ಮಿತ್ತು ಎಂಬುದನ್ನಿಲ್ಲಿ ಸ್ಮರಿಸಬಹುದು. ರಾಷ್ಟ್ರನಿಷ್ಠೆಯ ವಿಷಯ ಬಂದಾಗ, ‘ರಾಜಕೀಯ’ವನ್ನು ಪಕ್ಕಕ್ಕೆ ಇಡಬೇಕು ಎಂಬುದು ಕೆಲವರಿಗೆ ಅರ್ಥವಾಗುವುದಾದರೂ ಯಾವಾಗ?