Vishwavani Editorial: ಶ್ರೇಷ್ಠತೆಯ ವ್ಯಸನ ಏಕೆ ?
ಒಂದು ಪ್ರದೇಶದ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಹಿಂದೆ ನೂರಾರು ವರ್ಷಗಳ ಚರಿತ್ರೆ ಇರುತ್ತದೆ. ಅದನ್ನು ತಿಳಿದು ಗೌರವಿಸಬೇಕು. ಒಂದು ಮತ್ತೊಂದರ ಶ್ರೇಷ್ಠತೆಯನ್ನು ಸಾರುವುದು ನಮ್ಮ ಸಂವಿಧಾನದ ಮೌಲ್ಯಗಳಿಗೂ ವಿರುದ್ಧ. ಸಂವಿಧಾನದ ಪ್ರಕಾರ, ನಮ್ಮದು ಒಕ್ಕೂಟ ಗಣರಾಜ್ಯ


ಕಮಲ್ ಹಾಸನ್ ಭಾರತೀಯ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ ನಟ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೆಯೇ ಸೋನು ನಿಗಮ್ ಅತ್ಯುತ್ತಮ ಗಾಯಕರಲ್ಲೊಬ್ಬರು ಎನ್ನುವುದು ನಿಜ. ತಮ್ಮ ವೃತ್ತಿಯಿಂದ, ಪ್ರವೃತ್ತಿಯಿಂದ ಖ್ಯಾತಿಯ ಶಿಖರ ಕಂಡವರಿಗೆ ಜಗತ್ತಿನ ಎಲ್ಲ ವಿಷಯಗಳು ಗೊತ್ತಿರಬೇಕೆಂದೇನೂ ಇಲ್ಲ. ಆದರೆ ಒಮ್ಮೆ ಪ್ರಚಾರದ ಬೆಳಕಿಗೆ ಬಂದರೆ ಪ್ರತಿಯೊಂದು ವಿಷಯದ ಬಗ್ಗೆಯೂ ಪ್ರತಿಕ್ರಿಯೆ ನೀಡುವುದು, ಅಭಿಪ್ರಾಯ ವ್ಯಕ್ತಪಡಿಸುವುದು ಕೆಲವು ಖ್ಯಾತನಾಮರ ಖಯಾಲಿ. ತಮಿಳು ಭಾಷೆ ಕನ್ನಡದ ತಾಯಿ ಎಂದು ಹೇಳುವ ಕಮಲ ಹಾಸನ್ ಅವರ ನಿಲುವು ಮತ್ತು ಕನ್ನಡ ಭಾಷೆಗಿಂತ ದೇಶ ಮುಖ್ಯ ಎನ್ನುವ ಸೋನು ನಿಗಮ್ ಅವರಿಬ್ಬರ ನಿಲುವಿನಲ್ಲಿ ತಮ್ಮದೇ ಶ್ರೇಷ್ಠ ಎಂಬ ವ್ಯಸನವಿದೆ.
ಇದನ್ನೂ ಓದಿ: Vishwavani Editorial: ರಾಷ್ಟ್ರನಿಷ್ಠೆಯಲ್ಲೂ ರಾಜಕೀಯವೇ?
ಒಂದು ಪ್ರದೇಶದ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಹಿಂದೆ ನೂರಾರು ವರ್ಷಗಳ ಚರಿತ್ರೆ ಇರುತ್ತದೆ. ಅದನ್ನು ತಿಳಿದು ಗೌರವಿಸಬೇಕು. ಒಂದು ಮತ್ತೊಂದರ ಶ್ರೇಷ್ಠತೆಯನ್ನು ಸಾರುವುದು ನಮ್ಮ ಸಂವಿಧಾನದ ಮೌಲ್ಯಗಳಿಗೂ ವಿರುದ್ಧ. ಸಂವಿಧಾನದ ಪ್ರಕಾರ, ನಮ್ಮದು ಒಕ್ಕೂಟ ಗಣರಾಜ್ಯ.

ಇಲ್ಲಿನ ಪ್ರತಿಯೊಂದು ಭಾಷೆ, ಸಂಸ್ಕೃತಿ, ಮೌಲ್ಯಗಳ ಆಚರಣೆಗೆ ಸಂವಿಧಾನ ಅವಕಾಶ ಮಾಡಿ ಕೊಟ್ಟಿದೆ. ಆಡಳಿತಾತ್ಮಕ ದೃಷ್ಟಿಯಿಂದ ಹಿಂದಿ ಮತ್ತು ಇಂಗ್ಲಿಷ್ ಎರಡನ್ನೂ ಅಧಿಕೃತ ಭಾಷೆಗಳಾಗಿ ಗುರುತಿಸಲಾಗಿದೆ ಹೊರತು ಉಳಿದ ಭಾಷೆಗಳನ್ನು ಗೌಣವಾ ಗಿಸಿಲ್ಲ. ಕನ್ನಡವೂ ಭಾರತೀಯ ಭಾಷೆ ಯಾಗಿದ್ದು ಕನ್ನಡ ಹಾಡು ಹಾಡಿದ ಮಾತ್ರಕ್ಕೆ ದೇಶದ ಏಕತೆಗೆ ಭಂಗ ಬರುವುದಿಲ್ಲ.
ಹಾಗೆಯೇ ದ್ರಾವಿಡ ಮೂಲದ ಕನ್ನಡ, ತಮಿಳು, ತುಳು, ತೆಲುಗು, ಮಾಲಯಾಳಂ, ಕೊಡವ ಭಾಷೆ ಗಳು ಸಹೋದರ ಭಾಷೆಗಳಾಗಿದ್ದು ಇವುಗಳಲ್ಲಿ ಯಾವುದೇ ಭಾಷೆ ತಾಯಿಯ ಸ್ಥಾನ ಪಡೆಯಲು ಸಾಧ್ಯವಿಲ್ಲ. ಕಮಲಹಾಸನ್ ಹೇಳಿಕೆಯನ್ನು ನಿರ್ಲಕ್ಷಿಸೋಣ, ಕನ್ನಡದ ಕೃತಿಗೆ ಬುಕರ್ ಪ್ರಶಸ್ತಿ ಬಂದ, ಅನಂತ್ನಾಗ್ ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿದ ವಿಷಯಗಳನ್ನು ಸಂಭ್ರಮಿಸೋಣ.