ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಕರೋನಾ: ಆತಂಕ ಬೇಡ, ಎಚ್ಚರವಿರಲಿ

ಹೃದಯ ಸಂಬಂಧಿ ಮತ್ತು ಉಸಿರಾಟ ಸಂಬಂಧಿ ಸಮಸ್ಯೆಗಳು ಇರುವ ರೋಗಿಗಳನ್ನು ತಪಾಸಣೆಗೆ ಒಳಪಡಿಸುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ಮುನ್ನೆಚ್ಚರಿಕೆ ಕ್ರಮಗಳಿಗೆ ಸಂಬಂಧಿಸಿದ ಮಾರ್ಗ ಸೂಚಿಗಳನ್ನು ಆಸ್ಪತ್ರೆಗಳಿಗೆ ಮತ್ತು ಶಾಲೆಗಳಿಗೆ ಕಳುಹಿಸಿದೆ. ಹೀಗೆ ಕರೋನಾ ಸೋಂಕು ಹರಡುವುದರ ಮೇಲೆ ನಿಗಾ ಇರಿಸಲು, ಹರಡುವುದನ್ನು ತಡೆಯುವ ಸುರಕ್ಷತಾ ಕ್ರಮಗಳನ್ನು ಸಕರಾರ ತೆಗೆದುಕೊಂಡಿದೆ.

ಕರೋನಾ: ಆತಂಕ ಬೇಡ, ಎಚ್ಚರವಿರಲಿ

Profile Ashok Nayak May 30, 2025 5:57 AM

ದೇಶದ ವಿವಿಧೆಡೆ ಕರೋನಾ ಪ್ರಕರಣಗಳು ಮತ್ತೆ ವರದಿಯಾಗುತ್ತಿವೆ. ಕಳೆದ ಹದಿನೈದು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಸಾವಿರ ದಾಟಿದೆ. ಕೇರಳ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶತಕ ದಾಟಿದೆ. ಕೆಲವೆಡೆ ಸಾವಿನ ವರದಿಗಳೂ ಆಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜಾಗೃತವಾಗಿದ್ದು, ಕೋವಿಡ್ ಪರೀಕ್ಷಾ ಕಿಟ್‌ಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದೆ.

ಹೃದಯ ಸಂಬಂಧಿ ಮತ್ತು ಉಸಿರಾಟ ಸಂಬಂಧಿ ಸಮಸ್ಯೆಗಳು ಇರುವ ರೋಗಿಗಳನ್ನು ತಪಾಸಣೆಗೆ ಒಳಪಡಿಸುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ಮುನ್ನೆಚ್ಚರಿಕೆ ಕ್ರಮಗಳಿಗೆ ಸಂಬಂಧಿಸಿದ ಮಾರ್ಗ ಸೂಚಿಗಳನ್ನು ಆಸ್ಪತ್ರೆಗಳಿಗೆ ಮತ್ತು ಶಾಲೆಗಳಿಗೆ ಕಳುಹಿಸಿದೆ. ಹೀಗೆ ಕರೋನಾ ಸೋಂಕು ಹರಡುವು ದರ ಮೇಲೆ ನಿಗಾ ಇರಿಸಲು, ಹರಡುವುದನ್ನು ತಡೆಯುವ ಸುರಕ್ಷತಾ ಕ್ರಮಗಳನ್ನು ಸರಕಾರ ತೆಗೆದುಕೊಂಡಿದೆ.

ಇದನ್ನೂ ಓದಿ: Vishwavani Editorial: ಶ್ರೇಷ್ಠತೆಯ ವ್ಯಸನ ಏಕೆ ?

ಹೀಗಾಗಿ ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ, ಹಾಗಂತ ನಿರ್ಲಕ್ಷ್ಯ ಮಾಡುವುದೂ ಸರಿಯಲ್ಲ. ಕರೋನಾ ಬಗ್ಗೆ ಹೆದರುವುದಕ್ಕಿಂತ ಹೆಚ್ಚಾಗಿ ಈ ರೋಗ ಯಾವ ರೀತಿ ಹರಡುತ್ತದೆ. ಈ ರೋಗ ಬಂದರೆ ಯಾವ ರೀತಿಯ ಮುಂಜಾಗ್ರತೆ ಕ್ರಮ ಅನುಸರಿಸಬೇಕು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಕರೋನಾ ಒಂದು ವೈರಸ್.

ಇದು ಗಾಳಿಯಲ್ಲಿ ಹರಡುವ ಸೋಂಕು ಅಲ್ಲ. ಬದಲಾಗಿ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ನಿಮ್ಮ ಸುತ್ತಲಿನ ಯಾವುದೇ ಒಬ್ಬ ವ್ಯಕ್ತಿಗೆ ಕರೋನಾ ಪಾಸಿಟಿವ್ ಬಂದರೂ ಹೆದರಬೇಕಾಗಿಲ್ಲ. ಅವರಿಂದ ಸಾಮಾಜಿಕ ಅಂತರ ಕಾಯ್ದುಕೊಂಡರೆ ಸಾಕು. ಅಲ್ಲದೆ, ಸರಕಾರ ಮಾಸ್ಕ್ ಕಡ್ಡಾಯ ಗೊಳಿಸುವವರೆಗೂ ನೋಡೋಣ ಎಂಬುದನ್ನು ಬಿಟ್ಟು ಈಗಿನಿಂದಲೇ ಮಾಸ್ಕ್ ಧರಿಸುವುದನ್ನು ರೂಢಿಸಿಕೊಳ್ಳಬೇಕು. ಶ್ವಾಸಕೋಸದ ತೊಂದರೆ, ಹೃದಯಕ್ಕೆ ಸಂಭಂದಿಸಿದ ಕಾಯಿಲೆಗಳು, ಕಿಡ್ನಿ ರೋಗ, ಮಧು ಮೇಹ, ನ್ಯೂಮೋನಿಯ, ಮುಂತಾದ ರೋಗ ಇರುವವರು, 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಾದವರು, ಸಣ್ಣ ಮಕ್ಕಳು ಅವರ ಆರೋಗ್ಯದ ಕಡೆ ಹೆಚ್ಚಿನ ಗಮನವಿಡಬೇಕು.

ಸರಕಾರ, ಸಂಘ-ಸಂಸ್ಥೆಗಳು ಕೂಡ ಹಿರಿಯ ನಾಗರಿಕರು, ಕರೋನಾಗೆ ಸುಲಭವಾಗಿ ತುತ್ತಾಗು ವವರನ್ನು ಗಮನದಲ್ಲಿ ಇರಿಸಿಕೊಂಡು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು.