ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಈ ಐಪಿಎಲ್‌ ಕಪ್‌ ನಿಮಗೆʼ-ಆರ್‌ಸಿಬಿ ಫ್ಯಾನ್ಸ್‌ಗೆ ಧನ್ಯವಾದ ಹೇಳಿದ ವಿರಾಟ್‌ ಕೊಹ್ಲಿ!

ಸತತ 18 ವರ್ಷಗಳ ಬಳಿಕ ಐಪಿಎಲ್‌ ಚೊಚ್ಚಲ ಕಪ್‌ ಗೆದ್ದು ರಾಜಧಾನಿ ಬೆಂಗಳೂರಿಗೆ ಆಗಮಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೆಲುವಿನ ಸಂಭ್ರಮಾಚರಣೆಯನ್ನು ಆಚರಿಸಿತು. ಈ ವೇಳೆ ಸಾವಿರಾರು ಆರ್‌ಸಿಬಿ ಅಭಿಮಾನಿಗಳು ಹಾಜರಿಸಿದ್ದರು. ಈ ವೇಳೆ ವಿರಾಟ್‌ ಕೊಹ್ಲಿ ಆರ್‌ಸಿಬಿ ಅಭಿಮಾನಿಗಳನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ಆರ್‌ಸಿಬಿ ಫ್ಯಾನ್ಸ್‌ಗೆ ಧನ್ಯವಾದ ಹೇಳಿದ ವಿರಾಟ್‌ ಕೊಹ್ಲಿ!

ಆರ್‌ಸಿಬಿ ಅಭಿಮಾನಿಗಳನ್ನು ಶ್ಲಾಘಿಸಿದ ವಿರಾಟ್‌ ಕೊಹ್ಲಿ.

Profile Ramesh Kote Jun 4, 2025 9:06 PM

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಆರ್‌ಸಿಬಿ ಅಭಿಮಾನಿಗಳನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಬುಧವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಗೆಲುವಿನ ಸಂಭ್ರಮಾಚರಣೆಯನ್ನು ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ಆಚರಿಸಿತು. ಈ ವೇಳೆ ಸಾವಿರಾರು ಅಭಿಮಾನಿಗಳು ಹಾಜರಿದ್ದರು. ಈ ವೇಳೆ ಮಾತನಾಡಿದ ವಿರಾಟ್‌ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಇದೇ ವೇಳೆ ಅವರು ಆರ್‌ಸಿಬಿ ಅಭಿಮಾನಿಗಳನ್ನು ದೊಡ್ಡದಾಗಿ ಗುಣಗಾನ ಮಾಡಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜೂನ್‌ 3 ರಂದು ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ 6 ರನ್‌ಗಳಿಂದ ರೋಚಕ ಗೆಲುವು ಸಾಧಿಸಿತ್ತು. ಆ ಮೂಲಕ 18 ವರ್ಷಗಳ ಬಳಿಕ ಚೊಚ್ಚಲ ಐಪಿಎಲ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಇದಾದ ಬಳಿಕ ಜೂನ್‌ 4 ರಂದು ಆರ್‌ಸಿಬಿ ತಂಡ, ಬೆಂಗಳೂರಿಗೆ ಆಗಮಿಸಿತ್ತು ಹಾಗೂ ವಿಧಾನ ಸೌಧದಲ್ಲಿ ಗೌರವವನ್ನು ಸ್ವೀಕಿಸರಿಸಿ ವಿಜಯೋತ್ಸವವನ್ನು ಆಚರಿಸಿತು. ಈ ವೇಳೆ ವಿರಾಟ್‌ ಕೊಹ್ಲಿ ಮಾತು ಆರಂಭಿಸುವುದಕ್ಕೂ ಮುನ್ನ ಅಭಿಮಾನಿಗಳು ವಿರಾಟ್‌ ಕೊಹ್ಲಿ... ವಿರಾಟ್‌ ಕೊಹ್ಲಿ ಎಂದು ಕೂಗಿದರು. ಇದರ ಪರಿಣಾಮ ಕೊಹ್ಲಿ ಮಾತು ಆರಂಭಿಸಿದ್ದು ತಡವಾಯಿತು.

IPL 2025: ʻಕಪ್‌ ಗೆಲ್ಲುವುದು ಸುಲಭವಲ್ಲʼ-ಕಣ್ಣೀರಿಟ್ಟ ವಿರಾಟ್‌ ಕೊಹ್ಲಿ ಬಗ್ಗೆ ರಿಕಿ ಪಾಂಟಿಂಗ್‌ ಹೇಳಿದ್ದಿದು!

"ಈ ಸಲ ಕಪ್‌ ನಮ್ದೇ ಎಂದು ಇನ್ನು ಮುಂದೆ ಹೇಳಲು ಸಾಧ್ಯವಿಲ್ಲ, ಇದರ ಬದಲು ಈ ಸಲ ಕಪ್‌ ನಮ್ದೆ ಎಂದು ಹೇಳಬೇಕು. ನಾವು ನಮ್ಮ ಕೆಲಸವನ್ನು ಮಾಡಿ ಮುಗಿಸಿದ್ದೇವೆ," ಎಂದು ವಿರಾಟ್‌ ಕೊಹ್ಲಿ ಹೇಳಿದ್ದಾರೆ.

"ಈ ಗೆಲುವು ಕೇವಲ ಆಟಗಾರರಿಗೆ ಮಾತ್ರವಲ್ಲ, ಇದು ಅಭಿಮಾನಿಗಳಿಗಾಗಿ ಹಾಗೂ ಅದ್ಭುತ ನಗರವನ್ನು ಇಷ್ಟಪಡುವವರಿಗಾಗಿ. ಸತತ 18 ವರ್ಷಗಳ ಕಾಲ ಏರಿಳಿತಗಳಲ್ಲಿ ಅಭಿಮಾನಿಗಳು ನಮಗೆ ಬೆಂಬಲಿಸಿದ್ದಾರೆ. ಇಂಥಾ ಅಭಿಮಾನಿಗಳನ್ನು ನಾನು ಇಡೀ ಪ್ರಪಂಚದಲ್ಲಿಯೇ ಎಲ್ಲಿಯೂ ನೋಡಿಲ್ಲ. ನಿಮ್ಮೆಲ್ಲರಿಗೂ ಅಭಿನಂದನೆಗಳು," ಎಂದು ಆರ್‌ಸಿಬಿ ಮಾಜಿ ನಾಯಕ ತಿಳಿಸಿದ್ದಾರೆ.

IPL 2025: 18 ವರ್ಷಗಳ ಬಳಿಕ ಚೊಚ್ಚಲ ಕಪ್‌ ಗೆದ್ದು ಕಣ್ಣೀರಿಟ್ಟ ವಿರಾಟ್‌ ಕೊಹ್ಲಿ!

ರಜತ್‌ ಪಾಟಿದಾರ್‌ಗೆ ಕೊಹ್ಲಿ ಮೆಚ್ಚುಗೆ

ತಮ್ಮ ನಾಯಕತ್ವದ ಚೊಚ್ಚಲ ಆವೃತ್ತಿಯಲ್ಲಿಯೇ ಆರ್‌ಸಿಬಿಗೆ ಕಪ್‌ ಗೆದ್ದುಕೊಟ್ಟ ರಜತ್‌ ಪಾಟಿದಾರ್‌ ಅವರನ್ನು ಇದೇ ವೇಳೆ ವಿರಾಟ್‌ ಕೊಹ್ಲಿ ಶ್ಲಾಘಿಸಿದ್ದಾರೆ. ಈ ಸೀಸನ್‌ ಆರಂಭಕ್ಕೂ ಮುನ್ನ ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ತಾವೇ ಹೇಳಿದ್ದ ಮಾತುಗಳನ್ನು ಇದೀಗ ಕೊಹ್ಲಿ ಸ್ಮರಿಸಿಕೊಂಡಿದ್ದಾರೆ.

"ನಮ್ಮ ಹೊಸ ನಾಯಕನಿಗೆ ಬೆಂಬಲ ನೀಡಬೇಕೆಂದು ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ಮನವಿ ಮಾಡಿದ್ದೆ. ದೀರ್ಘಾವಧಿವರೆಗೂ ಈ ತಂಡವನ್ನು ಇವರು ಮುನ್ನಡೆಸಲಿದ್ದಾರೆಂದು ನಿಮಗೆ ನಾನು ಸ್ಪಷ್ಟವಾಗಿ ಹೇಳಿದ್ದೆ. ಅದರಂತೆ ಅವರು ತಮ್ಮ ನಾಯಕತ್ವದ ಮೊದಲ ಸೀಸನ್‌ನಲ್ಲಿ ನಮಗಾಗಿ ಕಪ್‌ ಗೆದ್ದಿದ್ದಾರೆ. ದಯವಿಟ್ಟು ನಮ್ಮ ನಾಯಕ ರಜತ್‌ ಪಾಟಿದಾರ್‌ ಆಗಮಿಸಬೇಕು," ಎಂದು ವಿರಾಟ್‌ ಕೊಹ್ಲಿ ಹೇಳಿದ್ದಾರೆ.