Friday, 20th September 2024

ಗೆಲುವಿನ ಹಾದಿಗೆ ಮರಳಿದ ಸನ್‌ರೈಸರ್ಸ್

ದುಬೈ: ಕನ್ನಡಿಗ ಮನೀಷ್ ಪಾಂಡೆ (83*ರನ್) ಹಾಗೂ ಆಲ್ರೌಂಡರ್ ವಿಜಯ್ ಶಂಕರ್ (52*ರನ್) ಜೋಡಿಯ ಬಿರುಸಿನ ಬ್ಯಾಟಿಂಗ್ ಹಾಗೂ ಜೇಸನ್ ಹೋಲ್ಡರ್ (33ಕ್ಕೆ 3) ಮಾರಕ ದಾಳಿ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಗೆಲುವಿನ ಹಾದಿಗೆ ಮರಳಿತು.

ಗುರುವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ತಂಡ ರಾಜಸ್ಥಾನ ರಾಯಲ್ಸ್ ಎದುರು 8 ವಿಕೆಟ್‌ಗಳಿಂದ ಸುಲಭ ಜಯ ದಾಖಲಿ ಸಿತು. ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಡೇವಿಡ್ ವಾರ್ನರ್ ಬಳಗ ಲೀಗ್‌ನಲ್ಲಿ 4ನೇ ಜಯ ದಾಖಲಿಸಿ ಪ್ಲೇಆಫ್ ಆಸೆ ಜೀವಂತ ವಾಗಿರಿಸಿಕೊಂಡಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ 6 ವಿಕೆಟ್‌ಗೆ 154 ರನ್ ಪೇರಿಸಿತು. ಪ್ರತಿಯಾಗಿ ಜೋಫ್ರಾ ಆರ್ಚರ್ (21ಕ್ಕೆ 2) ಮಾರಕ ದಾಳಿ ನಡುವೆಯೂ ಮನೀಷ್ ಪಾಂಡೆ ಹಾಗೂ ವಿಜಯ್ ಶಂಕರ್ ಜೋಡಿ ಮುರಿಯದ 3ನೇ ವಿಕೆಟ್‌ಗೆ 93 ಎಸೆತಗಳಲ್ಲಿ 140 ಜತೆಯಾಟದ ಫಲವಾಗಿ ಸನ್‌ರೈಸರ್ಸ್‌ 18.1 ಓವರ್‌ಗಳಲ್ಲಿ 2 ವಿಕೆಟ್‌ಗೆ 156 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ರಾಜಸ್ಥಾನ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಸುಲಭ ಜಯ ಸಂಪಾದಿಸಿ ಅಂಕಪಟ್ಟಿಯಲ್ಲಿ ಮೇಲಕ್ಕೇರಿದೆ.

ವಾರ್ನರ್ ಪಡೆ ಆರಂಭಿಕರನ್ನು ಕಳೆದುಕೊಂಡರೂ ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್ ತಲಾ ಅರ್ಧಶತಕ ಗಳಿಸಿ ರನ್ ಚೇಸ್ ಮಾಡಿ ತಂಡಕ್ಕೆ 8 ವಿಕೆಟ್ ಗಳ ಜಯ ದಾಖಲಿಸಿ 2 ಅಂಕ ತಂದುಕೊಟ್ಟರು. ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನ ಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ 7 ಸ್ಥಾನದಲ್ಲಿದ್ದ ಸನ್‌ರೈಸರ್ಸ್‌ ಈ ಗೆಲುವಿನೊಂದಿಗೆ 5ನೇ ಸ್ಥಾನಕ್ಕೇರಿದೆ.