Saturday, 27th July 2024

ಕಾನ್ಸ್​ಟೇಬಲ್ ಅನಿಲ್’ಗೆ ಸರ್ಕಾರಿ ಗೌರವದೊಂದಿಗೆ ಸಂಸ್ಕಾರ

ಬಾಗಲಕೋಟೆ: ಚಿತ್ತೂರು ಬಳಿ ಅಪಘಾತದಲ್ಲಿ ಕಾನ್ಸ್​ಟೇಬಲ್ ಅನಿಲ್​​​​​​​ ಮೃತಪಟ್ಟಿದ್ದು, ಜಮಖಂಡಿಯ ಚಿಕ್ಕಲಕಿಯಲ್ಲಿ ಸರ್ಕಾರಿ ಗೌರವದೊಂದಿಗೆ ಸಂಸ್ಕಾರ ಮಾಡಲಾಗಿದೆ. ಬಾಗಲಕೋಟೆಯ ಜನರು ಕಾನ್ಸ್​ಟೇಬಲ್​​ ಬೀಳ್ಕೊಟ್ಟರು. ಮಂಗಳವಾರ ಗ್ರಾಮಕ್ಕೆ ಅನಿಲ್​​​​​​​​​ ಮುಳಿಕ್​​​ ಮೃತದೇಹ ತರಲಾಗಿತ್ತು. ಹುಟ್ಟೂರು ಚಿಕ್ಕಲಕಿಯಲ್ಲಿ ಅನಿಲ್​ ಅಂತ್ಯಸಂಸ್ಕಾರ ಮಾಡಿದ್ದು, ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಪೊಲೀಸ್ ಗೌರವ ಸಲ್ಲಿಸಿದೆ. ಬಾಗಲಕೋಟೆ SP ಜಯಪ್ರಕಾಶ್​ ಜಮಖಂಡಿ, DySP ಪಾಂಡುರಂಗಯ್ಯ, ಸಿಪಿಐ ಗುರುನಾಥ ಚೌಹಾಣ್ ಸೇರಿ ಹಲವರು ಭಾಗಿಯಾಗಿದ್ದರು. ಅನಿಲ್​​​​​ ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಮುಂದೆ ಓದಿ

error: Content is protected !!