ಅವಲೋಕನ ಡಾ. ಸಿ.ಜಿ. ರಾಘವೇಂದ್ರ ವೈಲಾಯು ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದ ನಲಂದಾ, ವಿಕ್ರಮಶಿಲಾ, ತಕ್ಷಶಿಲಾದಂಥ ಬೃಹತ್ ವಿಶ್ವವಿದ್ಯಾಲಯ ಗಳು ಕೇವಲ ಬೆರಳೆಣಿಕೆಯಷ್ಟು ಸಂಖ್ಯೆೆಯ ಆಕ್ರಮಣ ಕಾರರಿಂದ ನಾಶವಾಯಿತೆಂದರೆ, ಅದು ಅಹಿಂಸೆಯ ವಿಪರೀತಾಚರಣೆಯಲ್ಲವೇ? ಭಾರತೀಯ ಧರ್ಮಶಾಸ್ತ್ರದಲ್ಲಿ ಹಲವು ಕಡೆ ಉಲ್ಲೇಖವಾಗಿರುವ ಅಹಿಂಸಾತತ್ವವು ಸನಾತನ ಧರ್ಮ, ಜೈನ ಹಾಗೂ ಬೌದ್ಧ ಪಂಥಗಳಲ್ಲೂ ಉಲ್ಲೇಖವಾಗಿ ಆಚರಿಸಲ್ಪಟ್ಟಿದೆ. ಪತಂಜಲಿಯ ಅಷ್ಟಾಾಂಗಯೋಗದಲ್ಲಿ ಮೊದಲ ಮೆಟ್ಟಿಲಾದ ಪ್ರಾಾಥಮಿಕ ಅಂಗವಾಗಿ ಅಹಿಂಸೆಯು ಹೇಳಲ್ಪಟ್ಟಿದೆ. ಇದನ್ನು ಆಚರಿಸದೇ ಧ್ಯಾಾನ, ಸಮಾಧಿಗಳಿಗೆ ಅರ್ಹತೆಯೇ ಇಲ್ಲ. ಅಹಿಂಸಾಚರಣೆಯು ವ್ಯಕ್ತಿಿಗೆ ನೈತಿಕ ಶಕ್ತಿಿ, […]