Viral Video: ಹಾಸ್ಟೆಲ್ ಊಟದಲ್ಲಿ ಗೃಹ ಸಚಿವೆ ಪ್ಲೇಟ್ನಲ್ಲಿ ಸಿಕ್ತು ಜಿರಳೆ; ವಾರ್ಡನ್ ಅಮಾನತು
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಹಾಸ್ಟೆಲ್ನ ವಾರ್ಡನ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ರಾಜ್ಯ ಗೃಹ ಸಚಿವೆ ವಂಗಲಪುಡಿ ಅನಿತಾ ಅವರು ಹಾಸ್ಟೆಲ್ ಆವರಣದಲ್ಲಿ ನಡೆಸಿದ ಹಠಾತ್ ತಪಾಸಣೆಯ ಸಮಯದಲ್ಲಿ ಅವರ ಊಟದಲ್ಲಿ ಜಿರಳೆ ಕಂಡುಬಂದಿದೆ. ಗೃಹ ಸಚಿವೆ ಊಟ ಮಕ್ಕಳೊಂದಿಗೆ ಕೂತು ಊಟ ಸವಿಯುತ್ತಿದ್ದರು. ಆಗ ಅವರ ಬಟ್ಟಲಿನಲ್ಲಿ ಜಿರಳೆ ಕಾಣಿಸಿಕೊಂಡಿದೆ.


ಹೈದರಾಬಾದ್: ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂನಲ್ಲಿರುವ ಹಾಸ್ಟೆಲ್ನ ವಾರ್ಡನ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ರಾಜ್ಯ ಗೃಹ ಸಚಿವೆ ವಂಗಲಪುಡಿ ಅನಿತಾ ಅವರು ಹಾಸ್ಟೆಲ್ ಆವರಣದಲ್ಲಿ ನಡೆಸಿದ ಹಠಾತ್ ತಪಾಸಣೆಯ ಸಮಯದಲ್ಲಿ ಅವರ ಊಟದಲ್ಲಿ ಜಿರಳೆ ಕಂಡುಬಂದಿದೆ. ಹೀಗಾಗಿ ಅಮಾನತು ಮಾಡಲಾಗಿದೆ. ಎಕ್ಸ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ (Viral Video) ವಂಗಲಪುಡಿ ಅನಿತಾ ಕೆಲವು ವಿದ್ಯಾರ್ಥಿನಿಯರೊಂದಿಗೆ ಊಟ ಮಾಡುತ್ತಿರುವುದನ್ನು ತೋರಿಸಲಾಗಿದೆ. ಹಾಸ್ಟೆಲ್ನಲ್ಲಿ ಶುಚಿತ್ವದ ಕೊರತೆ ಇದೆ ಎಂದು ಕಂಡು ಬಂದ ಕೂಡಲೇ ಸಚಿವೆ ಅಮಾನತು ಆದೇಶವನ್ನು ಹೊರಡಿಸಿದ್ದಾರೆ.
ಗೃಹ ಸಚಿವೆ ಊಟ ಮಕ್ಕಳೊಂದಿಗೆ ಕೂತು ಊಟ ಸವಿಯುತ್ತಿದ್ದರು. ಆಗ ಅವರ ಬಟ್ಟಲಿನಲ್ಲಿ ಜಿರಳೆ ಕಾಣಿಸಿಕೊಂಡಿದೆ. ಅದನ್ನು ನೋಡಿದ ಸಚಿವೆ ತಕ್ಷಣ ಸತ್ತ ಜಿರಲೆಯನ್ನು ತನ್ನ ಕೈನಲ್ಲಿ ಹಿಡಿದು ವಾರ್ಡನ್ಗೆ ತೋರಿಸಿದ್ದಾರೆ. ತಮ್ಮ ತಪಾಸಣೆಯ ಸಮಯದಲ್ಲಿ ಹಾಸ್ಟೆಲ್ ಆವರಣದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲ ಮತ್ತು ವಾರ್ಡನ್ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹಾಸ್ಟೆಲ್ನಿಂದ ಹೊರಟು ಹೋಗುತ್ತಾರೆ ಎಂಬ ದೂರನ್ನು ಗೃಹ ಸಚಿವರು ಆಲಿಸಿದ್ದಾರೆ. ವರದಿಯ ಪ್ರಕಾರ, ವಾರ್ಡನ್ ರಾತ್ರಿ 9 ಗಂಟೆಯವರೆಗೆ ಹಾಸ್ಟೆಲ್ನಲ್ಲಿ ಇರಬೇಕಿತ್ತು, ಆದರೆ ಸಂಜೆ 5 ಗಂಟೆಯೊಳಗೆ ಹೊರಟು ಹೋಗಿದ್ದರು.
Cockroach in Andhra BC welfare hostel meals !!
— Pratyusha (@PratyushaJourno) July 1, 2025
In the past, under @ysjagan's rule, students ate nutritious, tasty meals to their satisfaction.
Now, the TDP/NDA govt is serving unhygienic cockroach meal to the OBC kids. Home Minister is a witness to it.pic.twitter.com/eTBQHKTudM
ಈ ಘಟನೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅನಿತಾ, ಹಾಸ್ಟೆಲ್ ಆವರಣದಲ್ಲಿನ ಇತರ ಲೋಪಗಳ ಬಗ್ಗೆ ವಿವರಗಳನ್ನು ನೀಡಿದರು ಮತ್ತು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಅಕ್ಕಿ ಉತ್ತಮ ಗುಣಮಟ್ಟದ್ದಾಗಿಲ್ಲ ಮತ್ತು ನಿಗದಿತ ಮೆನುವಿನ ಪ್ರಕಾರವೂ ಇಲ್ಲ. ಹೀಗಾಗಿ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ಅಮಾನತು ಆದೇಶವನ್ನು ನೀಡಿದ್ದೇನೆ ಎಂದು ಹೇಳಿದ್ದಾರೆ. ಜಿಲ್ಲೆಯ ಎಲ್ಲಾ ಹಾಸ್ಟೆಲ್ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಅವರು ಆದೇಶಿಸಿದರು ಮತ್ತು ಎಲ್ಲಾ ಹಾಸ್ಟೆಲ್ಗಳ ನಿಯಮಿತ ತಪಾಸಣೆಗೆ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನದಲ್ಲಿ (Andhra Temple) ಭಾನುವಾರ ಭಕ್ತರೊಬ್ಬರು ಲಡ್ಡೂ 'ಪ್ರಸಾದ'ದಲ್ಲಿ ಜಿರಳೆ ಸಿಕ್ಕಿದೆ ಎಂದು ಹೇಳಿಕೊಂಡಿದ್ದು, ಲಡ್ಡುವಿನಲ್ಲಿರುವ ಸತ್ತ ಜಿರಳೆಯ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸರಶ್ಚಂದ್ರ ಕೆ ಎಂಬ ವ್ಯಕ್ತಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಜಿರಲೆ ಕಂಡು ಬಂದ ಕೂಡಲೇ ಅವರು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಿದರು. ದೂರಿನಲ್ಲಿ ನಿರ್ಲಕ್ಷ್ಯದಿಂದ ಇಂತಹ ಘಟನೆ ಸಂಭವಿಸಿದೆ ಎಂದು ಉಲ್ಲೇಖಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ನೋಡೋಕೆ ಹೈ-ಫೈ ರೆಸ್ಟೋರೆಂಟ್... ಒಳಗೆ ಹೋದ್ರೆ ಎಲ್ಲಿ ನೋಡಿದ್ರಲ್ಲಿ ಜಿರಳೆ- ಶಾಕಿಂಗ್ ವಿಡಿಯೊ ಇಲ್ಲಿದೆ
ದೇವಸ್ಥಾನದ ಅಧಿಕಾರಿಯೊಬ್ಬರು ಸರಶ್ಚಂದ್ರ ಅವರ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಶ್ರೀಶೈಲಂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ ರಾವ್ ಅವರ ಪ್ರಕಾರ, ಅವರು ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಂಡು ಲಡ್ಡೂಗಳನ್ನು ತಯಾರಿಸುತ್ತಾರೆ. "ಲಡ್ಡೂಗಳನ್ನು ತಯಾರಿ ಕೇಂದ್ರದ ಸಿಬ್ಬಂದಿಯ ನಿರಂತರ ಮೇಲ್ವಿಚಾರಣೆಯಲ್ಲಿ ತಯಾರಿಸಲಾಗುತ್ತದೆ ಮತ್ತು ತಯಾರಿಸಲಾಗುತ್ತದೆ. ಅದರಲ್ಲಿ ಜಿರಳೆ ಕಂಡುಬರುವ ಸಾಧ್ಯತೆಯಿಲ್ಲ. ಭಕ್ತರು ಈ ಬಗ್ಗೆ ಚಿಂತಿಸಬೇಡಿ ಎಂದು ಹೇಳಿದ್ದಾರೆ.