Friday, 26th July 2024

ಬಾಬ್ರಿ ತೀರ್ಪಿತ್ತ ನ್ಯಾಯಾಧೀಶರ ಭದ್ರತೆ ಮುಂದುವರಿಕೆಗೆ ಸುಪ್ರೀಂ ’ಅಸಮ್ಮತಿ’

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತೀರ್ಪು ನೀಡಿ ನಿವೃತ್ತರಾಗಿದ್ದ ಸಿಬಿಐ ಕೋರ್ಟ್​ನ ವಿಶೇಷ ನ್ಯಾಯಾಧೀಶ ಎಸ್​.ಕೆ . ಯಾದವ್​ರಿಗೆ ಭದ್ರತಾ ಅವಧಿ ಮುಂದುವರಿಸುವುದಕ್ಕೆ ಸುಪ್ರೀಂ ಕೋರ್ಟ್ ಅಸಮ್ಮತಿ ಸೂಚಿಸಿದೆ.

ನಿವೃತ್ತ ನ್ಯಾಯಾಧೀಶ ಎಸ್.ಕೆ.ಯಾದವ್”ರಿಗೆ ಭದ್ರತೆ ಅವಶ್ಯಕತೆ ಇದೆ ಎಂದು ಎನಿಸುತ್ತಿಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.

2005ರಿಂದ ಬಾಬ್ರಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಎಸ್​.ಕೆ.ಯಾದವ್​ 2019ರಲ್ಲೇ ತಮ್ಮ ಸೇವೆಯಿಂದ ನಿವೃತ್ತಿ ಹೊಂದಿ ದ್ದರು. ಆದರೆ ಕೋರ್ಟ್ ಇವರ ಸೇವಾ ಅವಧಿಯನ್ನ ಮುಂದುವರಿಸಿತ್ತು. ಹೀಗಾಗಿ ಬಾಬರಿ ಮಸೀದಿ ಪ್ರಕರಣದಲ್ಲಿ ಬಿಜೆಪಿ ನಾಯಕರಾದ ಎಲ್​.ಕೆ. ಅಡ್ವಾಣಿ , ಮುರಳಿ ಮನೋಹರ ಜೋಷಿ ಸೇರಿದಂತೆ ಹಲವು ನಾಯಕರನ್ನ ಪ್ರಕರಣದಿಂದ ಖುಲಾಸೆ ಗೊಳಿಸಿದ್ದ ಯಾದವ್​ ತೀರ್ಪು ಪ್ರಕಟಿಸಿದ ದಿನವೇ ನಿವೃತ್ತಿ ಪಡೆದಿದ್ದರು.

ಬಾಬರಿ ಮಸೀದಿ ಧ್ವಂಸ ಪ್ರಕರಣ ಅತ್ಯಂತ ಸೂಕ್ಷ್ಮ ಪ್ರಕರಣವಾದ್ದರಿಂದ ತಮಗೆ ಭದ್ರತೆ ಮುಂದುವರಿಸುವಂತೆ ಎಸ್​.ಕೆ. ಯಾದವ್​ ಕೋರ್ಟ್​ಗೆ ಮನವಿ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!