ಹುಬ್ಬಳ್ಳಿ: ಬೆಂಗಳೂರಿನ ಕೆಐಡಿಬಿಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿರುವ ಅಧಿಕಾರಿಯ ನಿವಾಸಗಳಿರುವ ರಾಜಧಾನಿ ಮತ್ತು ಹುಬ್ಬಳ್ಳಿಯಲ್ಲಿ ಏಕಕಾಲಕ್ಕೆ ದಾಳಿ ನಡೆದಿದ್ದು, ತನಿಖೆ ಮುಂದುವರೆದಿದೆ.
ಧಾರವಾಡ ಎಸಿಬಿ ಅಧಿಕಾರಿಗಳಿಂದ ದಾಳಿಯಾಗಿದ್ದು ಹುಬ್ಬಳ್ಳಿ ಹೆಗ್ಗೇರಿಯ ಕೋಟಿಲಿಂಗನಗರದಲ್ಲಿರೋ ನಿವಾಸ ಹಾಗೂ ಇನ್ನಿತರ ಕಡೆ ದಾಳಿ ನಡೆದಿದೆ. ಕೆಐಡಿಬಿ ಸಹಾಯಕ ಕಾರ್ಯದರ್ಶಿ ಹರೀಶ್ ಹಳೇಪೇಟೆ ಎಂಬುವವರ ಮನೆಯಲ್ಲಿ ತನಿಖೆ ಮುಂದುವರೆದಿದೆ. ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಏಕಕಾಲಕ್ಕೆ ತನಿಖೆ ನಡೆದಿದ್ದು, ಹರಿಲಕ್ಷ್ಮೀ ನಿಲಯದಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಹರೀಶ ಹಳೇಪೇಟೆಯವರ ಯಾವ ಪ್ರಕರಣದ ಮೇಲೆ ದಾಳಿ ನಡೆದಿದೆ ಎಂದು ನಿಖರವಾಗಿ ಗೊತ್ತಾಗಿಲ್ಲವಾದರೂ, ಬೆಳಿಗ್ಗೆಯೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ.