ಬೆಂಗಳೂರು : ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರು ಅಂತರಾಜ್ಯ ಕಳ್ಳರನ್ನು ಬಂಧಿಸಿದ ಆರ್ ಟಿ ನಗರ ಪೊಲೀಸರು, ಸುಮಾರು 28.3 ಲಕ್ಷ ಮೌಲ್ಯದ 20 ಬೈಕ್ ಗಳನ್ನು ವಶಕ್ಕೆ ಪಡೆದಿ ದ್ದಾರೆ.
ಬಂಧಿತ ಆರೋಪಿಗಳನ್ನು ಆಂಧ್ರಪ್ರದೇಶದ ಪುಂಗಾನೂರಿನ ಶೇಖ್ ಅಬ್ರಾರ್, ಸೈಫುಲ್ಲಾ ಬಾಷಾ, ಮುಫೀದ್ ಉಲ್ಲಾ ಖಾನ್ ಮತ್ತು ಬೆಂಗಳೂರಿನ ಚಾಮುಂಡಿನಗರದ ಅತೀಕ್ ಹುಸೇನ್ ಎಂಬು ದಾಗಿ ಗುರುತಿಸಲಾಗಿದೆ.
ಈ ನಾಲ್ವರು ಸೆ.29ರಂದು ಆರ್ ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾನಗರದ ಬಳಿ, ಅನುಮಾನಾಸ್ಪದವಾಗಿ ತಿರುಗಾಡು ತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಪಿಎಸ್ಐ ಸುಭಾಷ್ ಚಂದ್ರ ಹಾಗೂ ಸಿಬ್ಬಂದಿ ಬೆನ್ನಟ್ಟಿ ಹಿಡಿದಿದ್ದರು. ಈ ವೇಳೆ ಮೂವರು ಆರೋಪಿಗಳು ಪಾರಿಯಾಗಿದ್ದರು.
ವಿಚಾರಣೆ ನಡೆಸಿದ ವೇಳೆ ಬೆಂಗಳೂರು ಸೇರಿದಂತೆ ಹೊರ ರಾಜ್ಯ ಗಳಲ್ಲಿಯೂ ಬೈಕ್ ಕಳ್ಳತನ ಮಾಡಿದ ಪ್ರಕರಣಗಳ ಮಾಹಿತಿ ಕುರಿತು ಬಾಯಿಬಿಟ್ಟಿದ್ದಾರೆ. ಬಂಧಿತರ ಹೇಳಿಕೆಯ ಮೇರೆಗೆ ಸುಮಾರು 28.3 ಲಕ್ಷ ಮೌಲ್ಯದ ವಿವಿಧ ಕಂಪನಿಯ 20 ದ್ವಿಚಕ್ರ ವಾಹನಗಳನ್ನು ವಶಪಡಿಸಿ ಕೊಂಡಿದ್ದಾರೆ.