Saturday, 27th July 2024

ಟ್ರ್ಯಾಕ್ಟರ್​ ಪರೇಡ್‌ʼಗೆ ಅನುಮತಿ ಇಲ್ಲ: ಕಮಲ್‌ ಪಂತ್‌

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಟ್ರ್ಯಾಕ್ಟರ್​ ಪರೇಡ್‌ʼಗೆ ಪೊಲೀಸರ ಅನುಮತಿ ಇಲ್ಲ. ಗಣರಾಜ್ಯೋತ್ಸವ ಆಚರಣೆಗೆ ಮನವಿ ಮಾಡಿದೆ. ಆದರೆ ಟ್ರ್ಯಾಕ್ಟರ್​ ರ್ಯಾಲಿ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದ್ದಾರೆ.

ನೂತನ ಕೃಷಿ ಮಸೂದೆಗಳನ್ನ ವಿರೋಧಿಸಿ ನವದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲವಾಗಿ ಜ.26ರಂದು ರಾಜ್ಯ ರಾಜಧಾನಿಯಲ್ಲಿ ರೈತರು ಟ್ರ್ಯಾಕ್ಟರ್‌ ಪರೇಡ್‌ ನಡೆಸಲಿದ್ದೇವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಬೆಂಗಳೂರಲ್ಲಿ ಟ್ರ್ಯಾಕ್ಟರ್​ ರ್ಯಾಲಿಗೆ ಪೊಲೀಸರ ಅನುಮತಿ ಇಲ್ಲ. ಕೆಲವು ಸಂಘಟನೆಗಳು ಗಣರಾಜ್ಯೋತ್ಸವ ಆಚರಣೆಗೆ ಮನವಿ ಮಾಡಿದೆ. ಆದರೆ ಟ್ರ್ಯಾಕ್ಟರ್​ ರ್ಯಾಲಿ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಅವರು ನಿರ್ದಿಷ್ಟವಾಗಿ ಮಾಹಿತಿ ಕೊಟ್ಟರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.

 

ಬೆಂಗಳೂರಿನಲ್ಲಿ ಕಾರು, ಜೀಪ್ ಸೇರಿ ಇತರೆ ವಾಹನಗಳಲ್ಲಿ ಬರೋದಕ್ಕೆ ಅನುಮತಿ ನೀಡಬಹುದು. ಟ್ರ್ಯಾಕ್ಟರ್ʼನಲ್ಲಿ ಬರಲು ಅವಕಾಶ ನೀಡುವುದಿಲ್ಲ. ಸಂಕೇತವಾಗಿ ಟ್ರ್ಯಾಕ್ಟರ್‌ ಬರಲು ಕೂಡ ಅವಕಾಶ ಕೋಡೋದಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!