Saturday, 27th July 2024

ಭೂಸ್ವಾಧೀನ ಪರಿಹಾರ: ಲಂಚಕ್ಕೆ ಬೇಡಿಕೆಯಿಟ್ಟ ಅಧಿಕಾರಿಗಳ ಬಂಧನ

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನ ಸಂಬಂಧ ಪರಿಹಾರದ ಹಣ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಅಧಿಕಾರಿಗಳನ್ನು ಬಂಧಿಸಲಾಗಿದೆ.

ಪರಿಹಾರ ಹಣ ನೀಡಲು 6 ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಚಿತ್ರದುರ್ಗದ ಭೂಸ್ವಾಧೀನ ವಿಶೇಷಾಧಿಕಾರಿ ವಿರೇಶಕುಮಾರ್, ಮ್ಯಾನೇಜರ್ ಮೋಹನ್ ಹಾಗೂ ಚಾಲಕ ಮನ್ಸೂರ್ ನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಪರಿಹಾರ ಹಣ ನೀಡಲು ಹಿರಿಯೂರಿನ ನೇತ್ರಾ ಕರಿಯಪ್ಪ ಅವರಿಂದ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು.

ಈ ಸಂಬಂಧ ನೇತ್ರಾ ಎಸಿಬಿ ಡಿವೈ ಎಸ್ ಪಿ ಬಸವರಾಜ್ ಅವರಿಗೆ ದೂರು ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!