Saturday, 27th July 2024

ಪುನೀತ್ ಸಾವಿಗೆ ಮನನೊಂದ ಅಭಿಮಾನಿಗೂ ಹೃದಯಾಘಾತ

ಬೆಳಗಾವಿ: ತಾಲ್ಲೂಕಿನ ಶಿಂದೊಳ್ಳಿಯಲ್ಲಿ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ನಿಧನದಿಂದ ನೊಂದ ಅಭಿಮಾನಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಆ ಗ್ರಾಮದ ಕನಕದಾಸ ನಗರದ ಪರುಶರಾಮ ಹನುಮಂತ ದೇಮಣ್ಣವರ(33) ಮೃತ. ಪುನೀತ್ ಸಾವಿನ ಸುದ್ದಿ ತಿಳಿದು ಆಘಾತಕ್ಕೆ ಒಳಗಾಗಿದ್ದರು. ಕೂಲಿ ಮಾಡುತ್ತಿದ್ದ ಪರುಶರಾಮ, ಶಿವರಾಜ್‌ಕುಕುಮಾರ್ ಹಾಗೂ ಪುನೀತ್ ಅವರ ಅಪ್ಪಟ ಅಭಿಮಾನಿ ಆಗಿದ್ದರು ಎಂದು ಸ್ಥಳೀಯರು ತಿಳಿಸಿದರು.

ಜಿಲ್ಲೆಯ ಅಥಣಿಯಲ್ಲಿ ಅಭಿಮಾನಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಹುಲ್ ಗಾಡಿವಡ್ಡರ (26) ಮೃತ. ಪುನೀತ್ ರಾಜ್‌ಕುಮಾರ್ ಫೋಟೊಗೆ ಪೂಜೆ ಸಲ್ಲಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!