ಬೆಂಗಳೂರು: ಜಸ್ಟಿಸ್ ಮೋಹನ ಶಾಂತನಗೌಡರ ಅಂತ್ಯಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಲು ಸರಕಾರ ಆದೇಶ ಹೊರಡಿಸಿದೆ.
ಭಾನುವಾರ ಬೆಳಿಗ್ಗೆ ಮೃತರ ಮನೆಗೆ ತೆರಳಿದ ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ ಸರಕಾರದ ಪರವಾಗಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಜಸ್ಟಿಸ್ ಪಾರ್ಥಿವ ಶರೀರ ಸಾರ್ವಜನಿಕರ ದರ್ಶನ ಅವಕಾಶಕ್ಕಾಗಿ ರಾಜಾಜಿನಗರದ ಮನೆಯ ಲ್ಲಿಡಲಾಗಿತ್ತು.
ಪ್ರಸ್ತುತ ಪೊಲೀಸ್ ಬೆಂಗಾವಲು ಪಡೆಯೊಂದಿಗೆ ಅವರ ಸ್ವಗ್ರಾಮಕ್ಕೆ ಬೀಳ್ಕೊಡಲಾಗಿದೆ.