Saturday, 11th May 2024

ಖುಷಿಗಳೆಲ್ಲವೂ ನಮ್ಮದಾಗಬೇಕು !

ವಿನಯ್‌ ಖಾನ್‌

ಕೆಲವೊಮ್ಮೆ ನೋವು, ದುಃಖ, ದುಮ್ಮಾನ, ಸಂಕಟ, ನಿರಾಶೆ, ಸೋಲು, ಅಭದ್ರತೆಗಳೆಲ್ಲ ಜೀವನದಲ್ಲಿ ಆಗುವುದೇ, ಆದರೆ ಅದರ ಬಗ್ಗಯೇ ಚಿಂತಿಸುತ್ತಾ ಕುಳಿತರೆ, ಬದುಕುವುದಾದರೂ ಹೇಗೆ? ನನ್ನ ಸುತ್ತಲಿರುವರೆಲ್ಲರೂ ಖುಷಿಯಾಗಿ ಆರಾಮವಾಗಿ ಇದ್ದಾರೆ ಯೇ, ಇದ್ದರೂ ಅದು ಹೇಗೆ? ನನ್ನ ಕಷ್ಟ ಬರೀ ನನ್ನದಷ್ಟೇನಾ? ಅನಿಶ್ಚಿತತೆಯ ಹೋರಾಟ ದಲ್ಲಿ ಬದುಕುವುದಾದರೂ ಹೇಗೆ? ಬದುಕೆಂದರೆ ಸವಾಲು, ಅದನ್ನು ಎದುರಿಸುವುದಾದರೂ ಹೇಗೆ? ಬದುಕಿಗೆ ಖುಷಿಯಿರಬೇಕು ಆದರೆ ಅದು ಸಿಗುವುದೆಲ್ಲಿ? ಇಂತಹ ಹಲವಾರು ಮನೋಸಾಮಾನ್ಯ ಪ್ರಶ್ನೆಗಳಿಗೆ ಸಹಜವಾದ, ಮಾಡಲು ಸಾಧ್ಯವಾಗುವ, ಅತೀ ಈಸಿಯಾದ ಥರದಲ್ಲಿ ಉತ್ತರ ಹೇಳುವ ಪ್ರಯತನ್ವನ್ನು ‘ವಿಶ್ವವಾಣಿ’ಯ ‘ಶ್ವೇತಪತ್ರದ’ ಅಂಕಣಕಾರ್ತಿ ಡಾ.ಶ್ವೇತಾ ಗೌರಿಬಿದನೂರು (ಡಾ.ಶ್ವೇತಾ ಬಿ ಸಿ) ಅವರು ಮಾಡಿ ದ್ದಾರೆ.

ಖುಷಿಯಾಗಿರಲು ದಿನವೂ ಧ್ಯಾನಮಾಡಿ, ಯಾವುದಕ್ಕೂ ಚಿಂತಿಸಬೇಡಿ, ಸಿಟ್ಟಾಗಬೇಡಿ, ಮನೆಯವರೊಟ್ಟಿಗೆ ಸಮಯ ಕಳೆಯಿರಿ, ಕೆಟ್ಟದನ್ನು ನೆನೆಸಿಕೊಳ್ಳಬೇಡಿ, ದೂರ ಆದವರ ಬಗ್ಗೆ ಯೋಚಿಸಬೇಡಿ, ನಿರಾಳರಾಗಿರಿ ಎಂದೇ ಎಷ್ಟೋ ಜನ ಹೇಳುವು ದುಂಟು. ಆದರೆ ಮಾಡುವುದ್ಹೇಗೆ? ದುಃಖ, ಭಯ, ದುಗುಡಗಳೆಲ್ಲವೂ ಮಾನವನ ಸಹಜ ಪ್ರತಿಕ್ರಿಯೆಗಳು ಅದನ್ನೇ ಮಾಡಿ ಕೊಳ್ಳಬೇಡಿ ಅಂದರೆ, ಹಾಗಾಗುವುದ್ಹೇಗೆ? ಮೋಟಿವೇಷನ್ ಸ್ಪೀಕರ್‌ಗಳು ಮಾತನಾಡವಾಗ, ಆಧ್ಯಾತ್ಮಿಕ ಗುರುಗಳು ಮಾತನಾಡು ವಾಗ ಅದನ್ನೆಲ್ಲ ಕೇಳಲು ಇಂಪಾಗೇ ಇರುತ್ತೆ ಆದರೆ, ಅದನ್ನೆಲ್ಲ ಜೀವನದಲ್ಲಿ ಜಾರಿ ಮಾಡುವುದಾದರೂ ಹೇಗೆ? ಎಲ್ಲರೂ ಯಾವುದರ ಹಿಂದೆನೇ ಓಡುತ್ತಿರುತ್ತೇವೆ, ದುಡ್ಡು, ಹೆಸರು, ಕೆಲಸ, ಪ್ರೀತಿ, ಸಾಧನೆ ಇನ್ನೇನೊ ಆದರೆ ಅವುಗಳ ಹಿಂದೆ ಓಡ್ತಾ ಓಡ್ತಾ ನಮ್ಮ ಖುಷಿಗಳನ್ನೇ ಕಳೆದುಕೊಳ್ಳುತ್ತಿರುತ್ತೇವೆ.

ತುಂಬಾ ಮೂಡಿ ಆಗಿರುತ್ತೇವೆ, ಯಾವಾಗಲೂ ಯಾವುದೋ ಚಿಂತೆಯಲ್ಲೇ ತೊಡಗಿರುತ್ತೇವೆ, ನಮ್ಮನ್ನು ಇನ್ನೊಬ್ಬರ ಜತೆ ಕಂಪೇರ್ ಅನ್ನೂ ಮಾಡುತ್ತರುತ್ತೇವೆ, ಹಾಗಿದ್ದಲ್ಲಿ ಖುಷಿಯನ್ನು ಬಿಟ್ಟು ಕೊಟ್ಟು ಮಂಕಾಗಿರಬೇಕಾ? ಅನ್ನುವ ಯೋಚನೆಗಳಲ್ಲಿ ನೀವೂ ತೊಡಗಿದ್ದರೆ ಅದಕ್ಕೆಲ್ಲ ಸರಳವಾದ ಪರಿಹಾರಗಳನ್ನು ಈ ಪುಸ್ತಕಗಳಲ್ಲಿ ಹೇಳಿಕೊಟ್ಟಿದ್ದಾರೆ.

Happiness starts with you- not with your relationships, job or money ಅಂತ ಸದ್ಗುರು ಜಗ್ಗಿ ವಾಸುದೇವ್ ಅವರು ಹೇಳಿ ದ್ದಾರೆ. ಆದರೆ, ಹಲವು ತೊಂದರೆಗಳಿಗೆ ಸಿಲುಕಿರುವ ಮನುಷ್ಯನಿಗೆ ಖುಷಿಯಾದರೂ ಬರುವುದು ಹೇಗೆ? ನಾವಿರುವ ಪ್ರತೀ ಸಂದರ್ಭದಲ್ಲೂ ಒಳ್ಳೆಯದನ್ನು ಹುಡುಕಿಕೊಂಡು ಅದರಲ್ಲೇ ಖುಷಿಯಾಗುವುದು, ಮನಸ್ಸಿಗೆ ಹಿತವೆನಿಸುವ ಕೆಲಸಗಳಿಂದ ಖುಷಿಯನ್ನು ಅನುಭವಿಸಿಕೊಂಡು ಬದುಕನ್ನು ಖುಷಿಯಾಗಿರಿಸುವ ನಮ್ಮಲ್ಲರ ಅತಿ ಸಣ್ಣ ಕನಸಿಗೆ ರೆಕ್ಕೆ ಪುಕ್ಕಗಳನ್ನು ಕೊಟ್ಟು ಹಾರಲು ಬಿಡುವಲ್ಲಿ ಈ ಪುಸ್ತಕ ಸಹಾಯಕಾರಿ.

೨೫ ಅಧ್ಯಾಯಗಳಿಂದ ಕೂಡಿದ ಪುಸ್ತಕದಲ್ಲಿ, ಪ್ರತಿಯೊಂದೂ ಅಧ್ಯಾಯವು ನಮಗೆಲ್ಲ ಕನೆಕ್ಟ್ ಆಗುವುದೇ. ಪ್ರತಿ ಅಧ್ಯಾಯದಲ್ಲಿ ಬರುವ ಇನಸ್ಪಿರೇಷನಲ್ ಕೋಟ್ಸ್, ಕಥೆಗಳು, ಶ್ವೇತಾ ಅವರು ನೋಡಿರುವಂತ ಕೌನ್ಸಲಿಂಗ್‌ಗಳಲ್ಲಿ ನಡೆದ ಕಥೆಗಳು, ಅಧ್ಯಾತ ಮುಗಿದ ಮೇಲೆ ಬರುವ ಪಾಯಿಂಟ್ಸ್‌ಗಳನ್ನು ಅತ್ಯಂತ ಚೆನ್ನಾಗಿ ಹೂರಣ ಮಾಡಿ ಕೊಟ್ಟಿದ್ದಾರೆ ವೃತ್ತಿಯಿಂದ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಧ್ಯಾಪಕಿಯಾಗಿರುವ ಇವರು, ಪ್ರವೃತ್ತಿಯಿಂದ ಮನೋವೈದ್ಯೆಯಾಗಿಯೂ, ಅಂಕಣಕಾರ್ತಿ,  ಲೇಖಕಿ ಯಾಗಿ ಈ ಪುಸ್ತಕನ್ನು ಅತ್ಯಂತ ಆಸ್ಥೆಯಿಂದ ಬರೆದು, ಎಲ್ಲ ರೀತಿಯ ವಯಸ್ಸು ಮತ್ತು ಎಲ್ಲ ರೀತಿಯ ಜನರಿಗೆ ಸೂಕ್ತ ಎನಿಸುವ ಪುಸ್ತಕ ಇದು.

 

Read E-Paper click here

error: Content is protected !!