ದೆಹಲಿ:
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೇಶದ ಜನತೆಗೆ ಈದ್ ಉಲ್ ಫಿತರ್ನ ಶುಭ ಕೋರಿದರು.
ರಾಷ್ಟ್ರಪತಿ ಕೋವಿಂದ್ ಈದ್ ಮುಬಾರಕ್, ಇದು ಪ್ರೀತಿ, ಸೌಹಾರ್ದತೆ, ಶಾಂತಿ ಅಭಿವ್ಯಕ್ತಪಡಿಸುವ ಹಬ್ಬ. ಈದ್ ಬಡವರು ಮತ್ತು ಅಗತ್ಯವುಳ್ಳವರಿಗೆ ನರವಾಗುವ ನಂಬಿಕೆಯನ್ನು ಪುನರುಚ್ಚರಿಸುತ್ತದೆ. ನಾವೆಲ್ಲರೂ ಕರೋನಾ ವೈರಸ್ ಹರಡುವಿಕೆ ತಡೆಯಲು ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ಈ ಹಬ್ಬವನ್ನು ಆಚರಿಸೋಣ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಈದ್ ಮುಬಾರಕ್ ಈ ವಿಶೇಷ ಸಂದರ್ಭ ಎಲ್ಲರ ಕರುಣೆ, ಸಹೋದರತೆ ಮತ್ತು ಸೌಹಾರ್ದತೆಯನ್ನು ಹೆಚ್ಚಿಸಲು. ಎಲ್ಲರೂ ಆರೋಗ್ಯ ಮತ್ತು ಸಮೃದ್ದವಾಗಿರಲಿ ಎಂದು ಟ್ವೀಟ್ ಮೂಲಕ ಶುಭಾಷಯ ಕೋರಿದ್ದಾರೆ.