Thursday, 19th September 2024

ಇಂದೇಕೋ ಹಳೆಯದರ ಹಂಬಲ.

ಸೌರಭ ರಾವ್, ಕವಯಿತ್ರಿ, ಬರಹಗಾರ್ತಿ

ಶಿಶಿರಸುಪ್ತಿಿಯಲ್ಲಿದ್ದಂತಿದ್ದ ನೆನಪುಗಳು ಮೈಮುರಿದು ಎಚ್ಚರಗೊಳ್ಳುತ್ತಿಿವೆ. ಮಲೆನಾಡ ಮಹತ್ತಾಾದ ಸೌಂದರ್ಯವೈವಿಧ್ಯದಲ್ಲಿ, ಅದರ ಊಹಾತೀತ ಕೃಪೆಯಲ್ಲಿ ಅಂತರಂಗವ ತಡಕಿ ಪುನರ್ಶೋಧಿಸಿಕೊಳ್ಳುವ ಅನ್ವೇಷಣೆಯಲ್ಲಿರುವವರಿಗೆ ಇದೊಂದು ಪುಟ್ಟ ಅವಕಾಶ, ಭಾವಮಂಥನಕ್ಕೆೆ. ಕಡೆಗೆ ಅಲ್ಲಿಂದ ಸಮಯಾನಿಬದ್ಧ ಅನುಭವದಲ್ಲಿ ಮುಳುಗಿ ಮೌನ ಆವರಿಸಿ, ಮಂಥನದಿಂದಲೂ ಮುಕ್ತವಾಗಿ ನಡೆದುಬರಲು ಅನುವು ಮಾಡಿಕೊಡುವ ಈ ಜಾಗಕ್ಕೆೆ ಹೆಸರೊಂದಿದೆ – ಗೌರಿತೀರ್ಥ.

ಯೋಗಿಯೊಬ್ಬರು ಚಪ್ಪಾಾಳೆ ತಟ್ಟಿಿಯೇ ಇಲ್ಲೊಂದು ಕೊಳ ಆವಿರ್ಭವಿಸುವಂತೆ ಮಾಡಿದರಂತೆ, ಮತ್ತೊೊಬ್ಬ ಯೋಗಿ ಅದರ ಮೇಲೆ ಕೂತು ತಾಸುಗಟ್ಟಲೆ ಧ್ಯಾಾನ ಮಾಡುತ್ತಿಿದ್ದರಂತೆ. ಮನಸ್ಸಿಿನಲ್ಲಿ ಉತ್ಕಟ ಆಸೆಯೊಂದಿದ್ದರೆ, ಅದನ್ನು ಭಾವಿಸಿಕೊಂಡು ಚಪ್ಪಾಾಳೆ ತಟ್ಟಿಿದರೆ, ಈ ಕೊಳದ ತಳದಿಂದ ನೀರಿನ ಗುಳ್ಳೆೆಗಳೆದ್ದು ಮೇಲ್ಮೈವರೆಗೂ ಬಂದರೆ, ಇಷ್ಟಾಾರ್ಥ ಸಿದ್ಧಿಿಸುತ್ತದೆಂದು ಪ್ರತೀತಿ. ನಂಬಿಕೆ, ಅಪನಂಬಿಕೆ ಬೇರೆ ಚರ್ಚೆ, ಆದರೆ ಇಂಥ ಆಖ್ಯಾಾನಗಳು ಕೇಳುವುದಕ್ಕೇ ಚಂದ.

ಕೊಡಚಾದ್ರಿಿಯ ಬೆಟ್ಟ ಹತ್ತಿಿಳಿದದ್ದಾಯ್ತು, ಅದೊಂದು ಸಮಯಾತೀತ ಅನುಭೂತಿ. ಆದರೆ ಒಂದು ಸಂಜೆ ಗೌರಿತೀರ್ಥದಲ್ಲಿ ಕಳೆದ ಅನುಭವ ಆಧ್ಯಾಾತ್ಮಿಿಕವಾದದ್ದು. ಅತಿಶಯೋಕ್ತಿಿಯಲ್ಲ, ಅದರ ತೀವ್ರತೆಗೆ ಸಮನಾದ ಮತ್ತೊೊಂದು ಪದವಿದ್ದರೆ ಬಳಸಬಹುದಿತ್ತೇನೋ.

ಮಣ್ಣಿಿನ ಸುತ್ತುಗೋಡೆಯೊಳಗೆ ಈ ಕೊಳ, ಗೌರಿತೀರ್ಥ. ಅದರ ಮೇಲೊಂದು ಗೌರಿಶಂಕರ ಗುಡಿ. ಪುಟ್ಟ ಹೆಂಚಿನ ಗುಡಿಯೊಳಗೆ ಶಿವಲಿಂಗ. ಮಲೆನಾಡ ಮಡಿಲಲ್ಲಿ, ಹಿತವಾದ ಮೌನದಲ್ಲಿ ಸೊಗಸಾದ ಸಪ್ಪಳ ಮೂಡಿಸಲು ಅಲ್ಲಿರುವ ಮೂರು ಘಂಟೆಗಳಲ್ಲಿ ಒಂದನ್ನು ಬಡಿದರಾಯಿತು, ನಾದಬ್ರಹ್ಮಂ ಆವಾಹಯಾಮಿ. ಆ ಸದ್ದು ಮೊಳಗುವಾಗ ಕಣ್ಣುಗಳು ಅನೈಚ್ಛಿಿಕವಾಗಿಯೇ ಮುಚ್ಚಿಿಕೊಳ್ಳುತ್ತವೆ. ಧ್ಯಾಾನಸ್ಥ ಸ್ಥಿಿತಿ. ಗುಡಿಯ ಹೊಸ್ತಿಿಲಿಂದ ಮಣ್ಣಿಿನ ಮೆಟ್ಟಿಿಲುಗಳು ಶುರುವಾಗಿ, ನೇರವಾಗಿ ಗೌರಿತೀರ್ಥವನ್ನು ತಲುಪುತ್ತವೆ.

ಭೂಮಿ ನಮ್ಮ ಭೂಮಿ, ಕಲ್ಲು-ಮಣ್ಣಿಿನಿಂದಲೂ ನೀರು ಒಸರುವ ನಮ್ಮ ಭೂಮಿ. ಓಹ್! ಜನಿಸಿ, ಉಸಿರಾಡುತ್ತಾಾ, ಇದೇ ಭೂಮಿಯನ್ನು ಮತಿವಿಕಲರಂತೆ ಪೂಜಿಸುತ್ತಾಾ ಬದುಕಿರುವ ಅವಕಾಶಕ್ಕೆೆ ಮನಸ್ಸು ಸೋತು, ಶರಣಾಗಿ, ಐಹಿಕ ವಿವರಗಳೆಡೆಗೂ ಮತ್ಸರವಿಲ್ಲದ ವೈರಾಗ್ಯ ತಳೆಯುವಂತಾಗುತ್ತದೆ. ವಾರವಿಡೀ ಸಮಾಜದಲ್ಲಿ ನಟಿಸುವ ಪಾತ್ರಗಳಿಗೂ, ಆಳದಲ್ಲಿ ಅಡಗಿಕೂತ ಯಾವುದೋ ಪ್ರಾಾಚೀನ ಅರಿವಿಗೂ ಸಂಬಂಧವೇ ಇರದ ವ್ಯೋೋಮದಲ್ಲಿ ಎಂಥದೋ ಬೆಳಕು. ಪ್ರಾಾರ್ಥನೆ, ಧ್ಯಾಾನಗಳಿಗೆ ಹೊಸ ಲಹರಿ, ಅರ್ಥ ಹುಟ್ಟಿಿದಂತೆ.

ಕೇಳಿಕೊಳ್ಳಲು ತಾನೇ ಏನಿದೆಯೆಂದು ಸುಮ್ಮನೆ ಚಪ್ಪಾಾಳೆ ತಟ್ಟಿಿದರೂ ನೀರಿನಗುಳ್ಳೆೆಗಳೇಳುತ್ತವೆ. ಇಲ್ಲ, ಅರೆಕ್ಷಣದಲ್ಲಿ, ಅಲ್ಲೇ ಮತ್ತೊೊಂದು ಆಸೆಯ ಉಗಮ – ಈ ಭೂಮಿಯನ್ನು, ಈ ಧರಿತ್ರಿಿಯನ್ನು ಈ ಒಂದು ಜೀವಿತಾವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನೂ ನೋಡಬೇಕು. ಪಾದಗಳಿಗೆ ಅವನೀಚುಂಬನವಾಗಬೇಕು. ಇದೊಂದೇ ಒಲವು, ಮನಸ್ಸಲ್ಲಿ ಧೃಢವಾಗಿ ಬೇರೂರಿರುವುದು. ಇಹ-ಪರಗಳ ಪರಾಮರ್ಶೆ ಅದರಪಾಡಿಗದಿರಲಿ, ಆದರೆ ಇಲ್ಲಿ, ಉಚ್ಛ್ವಾಾಸ -ನಿಶ್ವಾಾಸಗಳೂ ಅಚ್ಚರಿಯೆನಿಸುವಾಗ ಈ ಆಸೆಯೇ ಪ್ರಾಾರ್ಥನೆಯಾಗಿ, ಮೊರೆಯಾಗಿ ಮನದಲ್ಲಿ ಮೊಳಗಿತ್ತು. ಮತ್ತೊೊಮ್ಮೆೆ ಚಪ್ಪಾಾಳೆ. ಮತ್ತೊೊಮ್ಮೆೆ ನೀರಿನಗುಳ್ಳೆೆಗಳು. ಮತ್ತೊೊಮ್ಮೆೆ ಮುಗುಳ್ನಗು. ಮತ್ತೊೊಮ್ಮೆೆ ಮೌನ.

ಕೊಳ ತಲುಪುವ ಮುನ್ನ, ಹಾವೊಂದು ಸರಸರನೆ ನಮ್ಮ ಪಕ್ಕವೇ ಹರಿದುಹೋಗಿ ಮಣ್ಣಿಿನ ಸುತ್ತುಗೋಡೆಯ ಒಂದು ಮೂಲೆಯಲ್ಲಿದ್ದ ಕುಳಿಬಿದ್ದ ಜಾಗ ಸೇರಿತು. ಮೆಲ್ಲಗೆ ಅಲ್ಲಿ ಇಣುಕಿ ನೋಡಿದರೆ ಅದರೊಟ್ಟಿಿಗೆ ನಾಲ್ಕೈದು ಪುಟ್ಟ-ಪುಟ್ಟ ಮರಿಗಳು, ಅವುಗಳ ಚರ್ಮದ ಮಂದಮಿನುಗು. ಅಪಾರ ಜೀವಸಂಕುಲವ ಹೊರೆಯುತ್ತಿಿರುವ ವ್ಯಕ್ತವಿಶ್ವದಲ್ಲಿ ಸದ್ಯಕ್ಕೆೆ ಗುರುತಾಗಿರುವ ಒಂದೇ ಗ್ರಹ, ಭೂಮಿ. ಭೂಮಿ. ಪೃಥ್ವಿಿ. ಅವನೀ.

ಗೌರಿತೀರ್ಥ ಈಗ ನೆನಪಾಗಿ ಮನಸ್ಸಲ್ಲಿ ಚಿರಸ್ಥಾಾಯಿ. ಒಂದು ಮಾಸವೇ ಕಳೆದಿದೆ, ಅಲ್ಲಿಂದ ಬಂದು. ಈಗ ಚಂಚಲ ಮನಸ್ಸಿಿನ ಮೂಲೆಯಲ್ಲಿ ಇನ್ನೊೊಂದು ಪುಟ್ಟ ಆಸೆ. ಮಗಳು ಹುಟ್ಟಿಿದರೆ, ಆ ಆನಂದದ ಅನುಭವವಾಗುವುದೇ ಇದ್ದರೆ, ಅವಳನ್ನು ಅವನೀ’ ಎಂದು ಕರೆಯಬೇಕೆಂಬ ಹಂಬಲ.
ಗೌರಿತೀರ್ಥಕ್ಕೆೆ ಮೌನನಮನ.

Leave a Reply

Your email address will not be published. Required fields are marked *