೫ ಲಕ್ಷ ಕೋಟಿ ರು. ಸಾಲದ ಹೊರೆಯಲ್ಲಿ ಸರಕಾರ
ಶಿವಕುಮಾರ್ ಬೆಳ್ಳಿತಟ್ಟೆ
ರಾಜ್ಯದ ಸಾಲದ ಹೊರೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇದರಿಂದ ತಪ್ಪಿಸಿಕೊಳ್ಳದಿದ್ದರೆ ಮುಂದೆ ದೊಡ್ಡ ಅಪಾಯವೇ ಕಾದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡಿದೆ.
ಸದ್ಯ ಸುಮಾರು ೫.೧೮ ಲಕ್ಷ ಕೋಟಿ ರು. ಸಾಲದ ಹೊರೆ ಕರ್ನಾಟಕದ ಮೇಲಿದ್ದು ಇದನ್ನು ಕಡಿಮೆ ಮಾಡಿಕೊಳ್ಳುವಂತೆ ಆರ್ಬಿಐ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ. ಇದನ್ನು ಗಂಭೀರವಾಗಿ ಪರಿಗಣಿ ಸಿರುವ ರಾಜ್ಯ ಹಣಕಾಸು ಅಧಿಕಾರಿಗಳು ಮುಂದಿನ ಬಾರಿ ಸಾಲದ ಕಾರಣ, ಪರಿಣಾಮಗಳನ್ನು ಗಮನ ದಲ್ಲಿಟ್ಟುಕೊಂಡು ಬಜೆಟ್ ರೂಪಿಸುವ ಚಿಂತನೆ ನಡೆಸಿದ್ದಾರೆ. ಕೋವಿಡ್ ನಂತರ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರಗಳ ಆರ್ಥಿಕ ಸ್ಥಿತಿ ಮತ್ತು ಸಾಲದ ಒತ್ತಡಗಳನ್ನು ಬಗ್ಗೆ ಸುದೀರ್ಘ ವಿಶ್ಲೇಷಣೆ ಮಾಡಿದೆ.
ಇದರಲ್ಲಿ ವಿಶೇಷವಾಗಿ ರಾಜ್ಯಗಳ ಸಾಲದ ಸ್ಥಿತಿ- ಗತಿಯನ್ನೇ ಗಂಭೀರವಾಗಿ ಪರಿಗಣಿಸಿ ವಿಶ್ಲೇಷಣೆ ಮಾಡಿದ್ದು, ದೇಶದ ೧೦ ರಾಜ್ಯಗಳಲ್ಲಿ ಸಾಲ ಮರುಪಾವತಿಸುವ ಹೊಣೆಗಾರಿಕೆ ವಿಪರೀತಕ್ಕೆ ಹೋಗಿರುವುದನ್ನು ಆರ್ಬಿಐ ಗುರುತಿಸಿದೆ. ಸಾಲದ ಪ್ರಮಾಣ ಹೆಚ್ಚುತ್ತಾ ಹೋದಷ್ಟು ಆರ್ಥಿಕ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆ ಇರುತ್ತದೆ. ರಾಜ್ಯ ಸರಕಾರಗಳು ಸಾಲದ ಪ್ರಮಾಣ ಕಡಿಮೆ ಮಾಡಿಕೊಳ್ಳಬೇಕು. ಜತೆಗೆ ವಿತ್ತೀಯ ಕೊರತೆ ಸರಿದೂಗಿಸಿ ಕೊಳ್ಳಬೇಕು ಎಂದು ಆರ್ಬಿಐ ತನ್ನ ಆರ್ಥಿಕ ವಿಶ್ಲೇಷಣಾತ್ಮಕ ವರದಿಯಲ್ಲಿ ಸಲಹೆ ನೀಡಿದೆ.
ಹೀಗಾಗಿ ರಾಜ್ಯ ಸರಕಾರ ಹೊಸ ಬಜೆಟ್ ಮಂಡಿಸುವವರೆಗೂ ವಿತ್ತೀಯ ಕೊರತೆಯನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ನಿರ್ವಹಣೆ ಆಗುವಂತೆ ಮಾಡಬೇಕು ಎಂದು ಎಲ್ಲ ರಾಜ್ಯ ಸರಕಾರಗಳಿಗೂ ಆರ್ಬಿಐ ಕಳುಹಿಸಿರುವ ವಿಶ್ಲೇಷಣಾತ್ಮಕ ರದಿಯಲ್ಲಿ ಶಿಫಾರಸು ಮಾಡಲಾಗಿದೆ.
ದೇಶದ ೨೦೨೦- ೨೧ನೇ ಸಾಲಿನ ಬಜೆಟ್ ಅನುಷ್ಠಾನ ಕಾಲದ ಸಾಲದ ಸ್ಥಿತಿಗತಿ ಗಮನಿಸಿದರೆ, ಪಂಜಾಬ್, ರಾಜಸ್ಥಾನ, ಕೇರಳ, ಪಶ್ಚಿಮ ಬಂಗಾಳ, ಬಿಹಾರ, ಆಂಧ್ರಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಹರಿಯಾಣ ಸೇರಿದಂತೆ ೧೦ ರಾಜ್ಯಗಳ ಸ್ಥಿತಿ ಕಷ್ಟದಲ್ಲಿದೆ. ಅಂದರೆ ಈ ರಾಜ್ಯಗಳ ಒಟ್ಟಾರೆ ವೆಚ್ಚ ಇಡೀ ದೇಶದ ಎಲ್ಲ ರಾಜ್ಯಗಳ ವೆಚ್ಚದ ಅರ್ಧದಷ್ಟಿದೆ. ಇನ್ನುಳಿದಂತೆ ಗುಜರಾತ್, ಮಹಾರಾಷ್ಟ್ರ, ಒಡಿಶಾ ರಾಜ್ಯಗಳ ಸ್ಥಿತಿ ಚೆನ್ನಾಗಿದೆ ಎನ್ನುವಂತಾಗಿದೆ. ಇದರ ಮಧ್ಯೆ, ಕರ್ನಾಟಕದ ಸ್ಥಿತಿ ಇತ್ತ ತೀರಾ ಕಟ್ಟದಾಗಿಯೂ ಇಲ್ಲ. ಅಲ್ಲ.
ತೀರಾ ಉತ್ತಮ ಸ್ಥಿತಿಯಲ್ಲೂ ಇಲ್ಲದಂತಾಗಿದೆ. ಆದರೆ ರಾಜ್ಯದ ಒಟ್ಟಾರೆ ನಿವ್ವಳ ಉತ್ಪನ್ನವನ್ನಾಧರಿಸಿ ಹೇಳುವುದಾದರೆ ರ್ನಾಟಕದಲ್ಲಿ ಸಾಲದ ಸ್ಥಿತಿ ಏರುಗತಿಯಲ್ಲಿದೆ ಎಂದು ಆರ್ಬಿಐ ವರದಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಪರವಾಗಿಲ್ಲ: ರಾಜ್ಯ ಬಜೆಟ್ನಲ್ಲಿ ಪ್ರಸಕ್ತ ಸಾಲಿನಲ್ಲಿ ೭೨,೦೦೦ ಕೋಟಿ ರು.ಸಾಲ ಮಾಡುವುದಾಗಿ ಪ್ರಕಟಿಸಿತ್ತು. ಇದರಲ್ಲಿ ಈತನಕ ೧೪,೦೦೦ ಕೋಟಿಗಳಷ್ಟು ಸಾಲ ಪಡೆಯಲಾಗಿದ್ದು, ಉಳಿಕೆ ಸಾಲವನ್ನು ಮಾರ್ಚ್ ಒಳಗಾಗಿ ಪಡೆದುಕೊಳ್ಳ ಲಿದೆ. ಇದರೊಂದಿಗೆ ರಾಜ್ಯ ಸರಕಾರದ ಈವರೆಗಿನ ಒಟ್ಟಾರೆ ಸಾಲದ ಪ್ರಮಾಣ ಸುಮಾರು ೫.೧೮ ಲಕ್ಷ ಕೋಟಿ ರು.ಗಳಿಗೂ ಅಧಿಽಕವಾಗಲಿದೆ. ರಾಜ್ಯದ ಒಟ್ಟಾರೆ ನಿವ್ವಳ ಉತ್ಪನ್ನವನ್ನಾ ಧರಿಸಿ ನೋಡಿದರೆ ರಾಜ್ಯ ಶೇ.೨೪ರಷ್ಟು ಸಾಲ ಪಡೆದು ಕೊಂಡಿದೆ. ಅಂದರೆ ಸರಕಾರ ಶೇ.೨೫ರಷ್ಟು ವಿತ್ತೀಯ ಹೊಣೆಗಾರಿಕೆ ಹೊಂದಿದೆ ಎಂದು ಹೇಳಬಹುದು. ಈ ಪ್ರಮಾಣದ ಸಾಲವನ್ನು ಬೇರೆ
ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಕಡಿಮೆ ಸಾಲದ ಪ್ರಮಾಣವನ್ನು ಹೊಂದಿದೆ ಹೇಳಬಹುದು. ಏಕೆಂದರೆ ಆ ರಾಜ್ಯಗಳು ತನ್ನ ವಿತ್ತೀಯ ಹೊಣೆಗಾರಿಕೆ ಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡು ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ. ಅದರಲ್ಲಿ ಪಂಜಾಬ್ ಪ್ರಥಮ, ರಾಜಸ್ಥಾನ್ ಮತ್ತು ತೆಲಂಗಾಣ ನಂತರದ ಸ್ಥಾನಗಳಲ್ಲಿವೆ.
ಏರುಗತಿಯಲ್ಲಿ ಸಾಗಿದೆ ರಾಜ್ಯದ ವಿತ್ತೀಯ ಹೊಣೆ
ಇನ್ನು ವಿತ್ತೀಯ ಕೊರತೆ ವಿಚಾರಕ್ಕೆ ಬಂದರೆ ರಾಜ್ಯ ಸರಕಾರ ಕೊಂಚ ಕಷ್ಟದಲ್ಲಿದೆ ಎನ್ನಬಹುದು. ಏಕೆಂದರೆ ವಿತ್ತೀಯ
ಕೊರತೆ ಜಿಎಸ್ಡಿಪಿಯ ಶೇ. ೩ರ ಒಳಗೆ ಇರಬೇಕಿತ್ತು. ಆದರೆ ಕೋವಿಡ್ ನಂತರದ ಆರ್ಥಿಕ ಸಂಕಷ್ಟ ಸರಿದೂಗಿಸಲು
ಬಿಜೆಪಿ ಸರಕಾರ ಈ ಕೊರತೆಯ ಪ್ರಮಾಣವನ್ನು ಶೆ.೩.೫ರವರೆಗೂ ಏರಿಕೆ ಮಾಡಿತ್ತು. ವಿತ್ತೀಯ ಕೊರತೆ ಈಗ
ಶೇ.೩.೨೬ ರ ಪ್ರಮಾಣದಲ್ಲಿದೆ.
ಅಂದರೆ ಸದ್ಯಕ್ಕೆ ವ್ಯಾಪ್ತಿಯ ಒಳಗೇ ನಿರ್ವಹಣೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಆರ್ಬಿಐ ನಿಯಮದ ಪ್ರಕಾರ ಅನೇಕ ಷೇರು ಬಾಂಡುಗಳ ಮೂಲಕ ಮಾರುಕಟ್ಟೆ ಸಾಲ ಹೊಂದಿದೆ. ಅಂದರೆ ಈವರೆಗಿನ ಮಾರುಕಟ್ಟೆಯ ಸಾಲ ಸುಮಾರು ೩.೬೯ ಲಕ್ಷ ಕೋಟಿ ರು.ಗಳಿದ್ದು, ಇದು ಕೂಡ ಸರಕಾರದ ವಿತ್ತೀಯ ಹೊಣೆಗಾರಿಕೆಯ ಪ್ರಮುಖ ಅಂಶವಾಗುತ್ತದೆ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಹೇಳಿzರೆ. ಸದ್ಯ ಏರುತ್ತಿರುವ ಸಾಲದ ಮರುಪಾವತಿಗಾಗಿ ಸರಕಾರ ಈ ವರ್ಷ ಸುಮಾರು ೪೦,೦೦೦ ಕೋಟಿಗಳನ್ನು ವೆಚ್ಚ ಮಾಡಬೇಕಿದೆ. ಇದ ರಲ್ಲಿ ೩೯೫,೦೦೦ ಕೋಟಿಗಳು ಸಾಲದ ಮೇಲಿನ ಬಡ್ಡಿ ಪಾವತಿಗೆಂದೇ ವಿನಿಯೋಗಿಸಬೇಕಿದೆ. ಹಾಗೆಯೇ ೧೯,೧೨೯ ಕೋಟಿ ರು.ಗಳನ್ನು ಅಸಲು ಪಾವತಿಸಲು ಕೊಡಬೇಕಾಗುತ್ತದೆಂದು ಹಣಕಾಸು ಇಲಾಖೆ ಅಧಿಕಾರಿಗಳು ಹೇಳಿzರೆ.