ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಆರೋಪಗಳಿಗೆ ಗುರಿಯಾ ಗಿರುವ ಬ್ರಿಜ್ ಭೂಷಣ್, 2024ರಲ್ಲಿ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಈ ರ್ಯಾಲಿಯನ್ನು ಡ್ಯಾಮೇಜ್ ಕಂಟ್ರೋಲ್ ಮಾಡುವ ಅವರ ಪ್ರಯತ್ನ ಎಂದು ನೋಡಲಾಗುತ್ತಿದೆ. ಏತನ್ಮಧ್ಯೆ, ಬಿಜೆಪಿಯ ಅಯೋಧ್ಯೆ ಘಟಕವು ಬ್ರಿಜ್ ಭೂಷಣ್ ರ ರ್ಯಾಲಿ ಯಿಂದ ದೂರ ಉಳಿದಿದೆ.
ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಎಫ್ಐಆರ್ ದಾಖಲಾದ ನಂತರ ಇದು ಬ್ರಿಜ್ ಭೂಷಣ್ ಅವರ ಮೊದಲ ಪ್ರಮುಖ ರ್ಯಾಲಿಯಾಗಿದೆ. ರ್ಯಾಲಿಯಲ್ಲಿ ಗರಿಷ್ಠ ಜನರನ್ನು ಸಂಗ್ರಹಿಸಲು ಬ್ರಿಜ್ ಭೂಷಣ್ ಅಯೋಧ್ಯೆ, ಬಸ್ತಿ, ಬಹ್ರೈಚ್ ಸೇರಿದಂತೆ ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ನಿರಂತರವಾಗಿ ಪ್ರವಾಸ ಮಾಡುತ್ತಿದ್ದಾರೆ.
ಸಂಸದ ಬ್ರಿಜ್ ಭೂಷಣ್ ಬೆಂಬಲಿಗರು ಇದು ರಾಜಕೀಯ ರ್ಯಾಲಿ ಅಲ್ಲ ಎಂದು ಹೇಳುತ್ತಾರೆ.