Murder Case: ಕಲಬುರಗಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ
Murder Case: ಹಳೆ ದ್ವೇಷದ ಹಿನ್ನೆಲೆ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ಹೊರವಲಯದ ಫಿರೋಜಾಬಾದ ಬಳಿ ಜರುಗಿದೆ. ನಿಜಾಮುದ್ದೀನ್ ಬಾವರಚಿ ಅಲಿಯಾಸ್ ನಜ್ಜು (45) ಮೃತ ವ್ಯಕ್ತಿಯಾಗಿದ್ದು, ಹಳೆ ದ್ವೇಷದ ಹಿನ್ನೆಲೆ ನಡು ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.


ಕಲಬುರಗಿ: ಹಳೆ ದ್ವೇಷದ ಹಿನ್ನೆಲೆ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ (Murder Case) ಕಲಬುರಗಿ ನಗರದ ಹೊರವಲಯದ ಫಿರೋಜಾಬಾದ ಬಳಿ ಜರುಗಿದೆ. ನಿಜಾಮುದ್ದೀನ್ ಬಾವರಚಿ ಅಲಿಯಾಸ್ ನಜ್ಜು (45) ಮೃತ ವ್ಯಕ್ತಿಯಾಗಿದ್ದು, ಹಳೆ ದ್ವೇಷದ ಹಿನ್ನೆಲೆ ನಡು ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಕಲಬುರಗಿಯ ಕಿಂಗ್ ಪ್ಯಾಲೆಸ್ ಹಾಲ್ ಹತ್ತಿರದ ನಿವಾಸಿಯಾದ ನಿಜಾಮುದ್ದೀನ್, ಕಳೆದ ಕೆಲ ದಿನಗಳ ಹಿಂದೆ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ, ಬಿಡುಗಡೆಯಾಗಿ ಹೊರ ಬಂದಿದ್ದನು ಎಂದು ತಿಳಿದುಬಂದಿದೆ. ಈ ಕುರಿತು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಂಬಾಕು ಉಗುಳಲೆಂದು ಕಾರಿನ ಬಾಗಿಲು ತೆಗೆದ ಚಾಲಕನಿಂದಾಗಿ ಭೀಕರ ಅಪಘಾತ
ರಾಯ್ಪುರ: ತಂಬಾಕು ಉಗುಳಲೆಂದು (Spit Tobacco) ಕಾರು ಚಾಲಕನೊಬ್ಬ 100 ಕಿ.ಮೀ. ವೇಗದಲ್ಲಿರುವಾಗ ಬಾಗಿಲು ತೆರೆದಿದ್ದು, ಇದರಿಂದ ಭೀಕರ ಅಪಘಾತ (Accident) ಸಂಭವಿಸಿ ಒಬ್ಬ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಛತ್ತೀಸ್ಗಢದಲ್ಲಿ (Chhattisgarh) ನಡೆದಿದೆ. ಈ ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಛತ್ತೀಸ್ಗಢದ ರಾಯ್ಪುರದಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಬಿಲಾಸ್ಪುರದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಕಾರು ಚಾಲಕನ ಅಜಾಗರೂಕತೆಯಿಂದ ಚಕರ್ಭಾತದ ಬಟ್ಟೆ ವ್ಯಾಪಾರಿ ಜಾಕಿ ಗೆಹಿ (31) ಎಂಬಾತ ಮೃತಪಟ್ಟಿದ್ದಾನೆ.
ಬಿಲಾಸ್ಪುರದಲ್ಲಿ ಭಾನುವಾರ ತಡರಾತ್ರಿ ಅಂದರೆ ಸೋಮವಾರ ಮುಂಜಾನೆ ಕಾರು ಚಾಲಕ 100 ಕಿ.ಮೀ. ವೇಗದಲ್ಲಿರುವಾಗ ತಂಬಾಕು ಉಗುಳಲೆಂದು ಕಾರಿನ ಬಾಗಿಲು ತೆರೆದಿದ್ದು ಇದರಿಂದ ಭೀಕರ ಅಪಘಾತ ಉಂಟಾಗಿದೆ.
ಭಾನುವಾರ ತಡರಾತ್ರಿ ಪಾರ್ಟಿಗೆ ಹೋಗಿ ಬರುತ್ತಿದ್ದ ಚಕರ್ಭಾತದ ಬಟ್ಟೆ ವ್ಯಾಪಾರಿ ಜಾಕಿ ಗೆಹಿ ಎಂಬಾತ ತನ್ನ ಸ್ನೇಹಿತ ಆಕಾಶ್ ಚಂದಾ ಹಾಗೂ ಆಕಾಶ್ನ ಮತ್ತೊಬ್ಬ ಸ್ನೇಹಿತ ಪಂಕಜ್ ಛಾಬ್ರಾ ಜತೆ ಕಾರಿನಲ್ಲಿ ಬರುತ್ತಿದ್ದನು. ಈ ಸಂದರ್ಭದಲ್ಲಿ ಆಕಾಶ್ ಕಾರು ಚಾಲನೆ ಮಾಡುತ್ತಿದ್ದು, ಪಂಕಜ್ ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದನು. ಜಾಕಿ ಹಿಂಭಾಗದಲ್ಲಿದ್ದನು. ಬಿಲಾಸ್ಪುರ- ರಾಯ್ಪುರ ಹೆದ್ದಾರಿಯಲ್ಲಿ ತಂಬಾಕು ಉಗುಳಲು ಆಕಾಶ್ ವಾಹನ ಚಲಾಯಿಸುವಾಗ ಇದ್ದಕ್ಕಿದ್ದಂತೆ ಬಾಗಿಲು ತೆರೆದಿದ್ದ. ತಕ್ಷಣವೇ ಅವನು ವಾಹನದ ನಿಯಂತ್ರಣ ಕಳೆದುಕೊಂಡು, ಅದು ವಿಭಜಕಕ್ಕೆ ಡಿಕ್ಕಿಯಾಗಿ ಹಲವು ಬಾರಿ ತಿರುಗಿ ರಸ್ತೆಗೆ ಉರುಳಿದೆ.
ಈ ಅಪಘಾತದ ಪರಿಣಾಮ ವಾಹನದಲ್ಲಿದ್ದ ಮೂವರು ಪ್ರಯಾಣಿಕರ ಪೈಕಿ ಜಾಕಿ ರಸ್ತೆಗೆ ಎಸೆಯಲ್ಪಟ್ಟು ವಿಭಜಕಕ್ಕೆ ಬಿದ್ದಿದ್ದಾನೆ. ಇದರಿಂದ ಆತನ ಎದೆ, ತಲೆ ಮತ್ತು ಭುಜಕ್ಕೆ ಗಂಭೀರ ಗಾಯಗಳಾಗಿವೆ. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಕಾಶ್ ಮತ್ತು ಪಂಕಜ್ ಕೂಡ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಅವರಿಗೂ ಗಂಭೀರ ಗಾಯಗಳಾಗಿವೆ.
ಚಾಲಕನ ನಿಯಂತ್ರಣ ತಪ್ಪಿದ ಕಾರು ನಿಲ್ಲಿಸಿದ್ದ ವಾಹನವೊಂದಕ್ಕೆ ಡಿಕ್ಕಿಯಾಗಿ ನಾಲ್ಕರಿಂದ ಐದು ಬಾರಿ ಪಲ್ಟಿಯಾಗಿ ಬಳಿಕ ನಿಲ್ಲಿಸಿದ್ದ ಎರ್ಟಿಗಾ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಅದರ ಚಾಲಕನೂ ಗಾಯಗೊಂಡಿದ್ದಾನೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದಾರಿಹೋಕರು ಪೊಲೀಸರಿಗೆ ಕೂಡಲೇ ಮಾಹಿತಿ ನೀಡಿದ್ದು, ತುರ್ತು ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿತ್ತು. ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು, ಬಳಿಕ ರಸ್ತೆಯಲ್ಲಿದ್ದ ವಾಹನಗಳ ಅವಶೇಷಗಳನ್ನು ತೆರವುಗೊಳಿಸಿದರು.
ಈ ಸುದ್ದಿಯನ್ನೂ ಓದಿ | Physical Abuse: ಮಗಳ ಮೇಲೆ ತನ್ನ ಪ್ರಿಯಕರ, ಆತನ ಸ್ನೇಹಿತ ಅತ್ಯಾಚಾರ ಎಸಗೋಕೆ ಹೆತ್ತ ತಾಯಿಯೇ ಸಪೋರ್ಟ್- ಬಿಜೆಪಿ ಮಾಜಿ ನಾಯಕಿ ಅರೆಸ್ಟ್