ಉತ್ತರ ಪ್ರದೇಶದಲ್ಲಿ 3 ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರ: 20 ಗಂಟೆಗಳಲ್ಲಿ ಆರೋಪಿ ಪೊಲೀಸ್ ಗುಂಡೇಟಿಗೆ ಬಲಿ
ಉತ್ತರ ಪ್ರದೇಶದ ಲಖನೌನಲ್ಲಿ 3 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಶುಕ್ರವಾರ ಎನ್ಕೌಂಟರ್ನಲ್ಲಿ ಹತ್ಯೆಗೈದಿದ್ದಾರೆ. ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ದೀಪಕ್ ವರ್ಮಾ ಎಂದು ಗುರುತಿಸಲಾಗಿದೆ. ನಗರದ ವಿವಿಧ ಠಾಣೆಗಳಲ್ಲಿ ಆರೋಪಿಯ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ.

ಲಖನೌ: ಉತ್ತರ ಪ್ರದೇಶದ (Uttar Pradesh) ಲಖನೌ (Lucknow)ನಲ್ಲಿ 3 ವರ್ಷದ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಆರೋಪಿಯನ್ನು ಪೊಲೀಸರು ಶುಕ್ರವಾರ ಎನ್ಕೌಂಟರ್ನಲ್ಲಿ (Encounter) ಹತ್ಯೆಗೈದಿದ್ದಾರೆ. ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ದೀಪಕ್ ವರ್ಮಾ ಎಂದು ಗುರುತಿಸಲಾಗಿದೆ. ನಗರದ ವಿವಿಧ ಠಾಣೆಗಳಲ್ಲಿ ಆರೋಪಿಯ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇಂದ್ರ ವಲಯದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (DCP) ಅಶೀಶ್ ಶ್ರೀವಾಸ್ತವ, “ಘಟನೆ ವರದಿಯಾದ ಕೂಡಲೇ ಐದು ತಂಡಗಳನ್ನು ರಚಿಸಲಾಯಿತು. ಆರೋಪಿಯ ಬಂಧನಕ್ಕೆ 1 ಲಕ್ಷ ರೂ. ಬಹುಮಾನ ಘೋಷಿಸಲಾಯಿತು” ಎಂದರು. ಸಿಸಿಟಿವಿ ದೃಶ್ಯಾವಳಿಗಳಿಂದ ಆರೋಪಿಯ ಸ್ಕೂಟರ್ ರಿಜಿಸ್ಟ್ರೇಷನ್ ವಿವರ ಪಡೆದ ಪೊಲೀಸರು, ಶುಕ್ರವಾರ ಬೆಳಗ್ಗೆ ಕಂಟೋನ್ಮೆಂಟ್ನ ದೇವಿ ಖೇಡಾದಲ್ಲಿ ಆತನನ್ನು ತಡೆದಿದ್ದಾರೆ.
ಅಶೀಶ್ ಶ್ರೀವಾಸ್ತವ, “ಶರಣಾಗುವಂತೆ ಸೂಚಿಸಿದಾಗ ಆರೋಪಿಯು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ. ಪ್ರತಿದಾಳಿಯಲ್ಲಿ ಆತ ಗಂಭೀರವಾಗಿ ಗಾಯಗೊಂಡಿದ್ದ” ಎಂದರು. ಗಾಯಗೊಂಡ ದೀಪಕ್ ವರ್ಮಾನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ.
CCTV footage shows suspect Deepak Verma abducting the 2.5 year-old-girl who was sleeping next to her parents in UP's Lucknow. The girl, fighting for her life in the hospital, was brutally raped and left to die. Suspect Verma was killed in encounter earlier today. https://t.co/f0A3g60g2f pic.twitter.com/7s6oIXb31d
— Piyush Rai (@Benarasiyaa) June 6, 2025
ಜೂನ್ 5ರ ಬೆಳಗ್ಗೆ 10 ಗಂಟೆಗೆ ಲಖನೌ ಅಲಂಬಾಗ್ನಲ್ಲಿ 2.5 ವರ್ಷದ ಬಾಲಕಿಯ ಅತ್ಯಾಚಾರದ ದೂರು ದಾಖಲಾಯಿತು. ಚಂದನನಗರ ಮೆಟ್ರೋ ನಿಲ್ದಾಣದ ಬಳಿಯಿರುವ ಮನೆಯಿಂದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರಗೈದು, ಮೆಟ್ರೋ ಸೇತುವೆಯ ಕೆಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟುಹೋಗಲಾಗಿತ್ತು. ಬಾಲಕಿಯನ್ನು ಪೋಷಕರು ಲೋಕ್ ಬಂಧು ಆಸ್ಪತ್ರೆಗೆ ಕರೆದೊಯ್ದು, ಅಲಂಬಾಗ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತಕ್ಷಣ ತನಿಖೆ ಆರಂಭಿಸಿದರು.
“ಸಿಸಿಟಿವಿ ದೃಶ್ಯಾವಳಿಗಳಿಂದ ಆರೋಪಿಯನ್ನು ಗುರುತಿಸಲಾಯಿತು. ಪೊಲೀಸ್ ಕಮಿಷನರ್ಗೆ 1 ಲಕ್ಷ ರೂ. ಬಹುಮಾನದ ಪ್ರಸ್ತಾವನೆ ಸಲ್ಲಿಸಲಾಗಿತ್ತು. 20 ಗಂಟೆಗಳಲ್ಲಿ ಎನ್ಕೌಂಟರ್ ನಡೆಯಿತು” ಎಂದರು ಡಿಸಿಪಿ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.