Wednesday, 24th April 2024

ಸುಮಲತಾ ಅವರನ್ನೇ ಅಡ್ಡ ಮಲಗಿಸಬೇಕು ಎಂಬ ಹೆಚ್‌ಡಿಕೆ ಹೇಳಿಕೆಗೆ ಸಂಸದೆ ತಿರುಗೇಟು

ಬೆಂಗಳೂರು: ಕೆ.ಆರ್.ಎಸ್. ಬಿರುಕು ಬಿಟ್ಟರೆ ಸಂಸದೆ ಸುಮಲತಾ ಅವರನ್ನೇ ಅಡ್ಡ ಮಲಗಿಸಬೇಕು ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಸಂಸದೆ ಸುಮಲತಾ ಅಂಬರೀಷ್ ತಿರುಗೇಟು ನೀಡಿದ್ದಾರೆ.

ಓರ್ವ ಮಾಜಿ ಸಿಎಂ ಆಗಿ, ಜನಪ್ರಿಯ ರಾಜಕಾರಣಿಯಾಗಿ ಇಂತಹ ಮಾತುಗಳನ್ನು ಆಡುವುದು ಶೋಭೆ ತರಲ್ಲ, ಹೆಣ್ಣುಮಕ್ಕಳ ಬಗ್ಗೆ ಕೀಳುಮಟ್ಟದ ಹೇಳಿಕೆ ಕುಮಾರಸ್ವಾಮಿ ಸಂಸ್ಕೃತಿ, ವ್ಯಕ್ತಿತ್ವನ್ನು ತೋರುತ್ತದೆ ಎಂದು ಕಿಡಿಕಾರಿದ್ದಾರೆ. ಕೆ.ಆರ್.ಎಸ್. ಜಲಾಶಯ ರಕ್ಷಣೆ ನನ್ನ ಉದ್ದೇಶ. ಜಲಾಶಯ ಉಳಿವಿಗಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ. ಈ ಬಗ್ಗೆ ಕುಮಾರಸ್ವಾಮಿಯವರ ಮಾತು ಕೇಳಿ ಕೆಲಸ ಮಾಡಬೇಕಿಲ್ಲ. ಜನರ ಹಿತ ಕಾಯುವುದು ನನ್ನ ಜವಾಬ್ದಾರಿ ಎಂದರು.

ಕುಮಾರಸ್ವಾಮಿ ಹೇಳಿದಂತೆ ಮಂಡ್ಯ ಜಿಲ್ಲೆ ನನ್ನಂತಹ ಸಂಸದೆಯನ್ನು ಹಿಂದೆ ನೋಡಿಲ್ಲ. ಕಾರಣ ನನ್ನ ನೇರವಂತಿಕೆ ಹಾಗೂ ಭ್ರಷ್ಟಾಚಾರದ ಬಗ್ಗೆ ನೇರವಾಗಿ ಧ್ವನಿ ಎತ್ತಿರುವುದರಿಂದ ಜೀರ್ಣಿಸಿಕೊಳ್ಳುವುದು ಕಷ್ಟವಾಗಿದೆ. ಚುನಾವಣೆ ಸಂದರ್ಭದಿಂದಲೂ ಅವರ ಸಂಸ್ಕೃತಿ-ಸಂಸ್ಕಾರ ಏನೆಂಬುದು ಜನರಿಗೂ ಗೊತ್ತಾಗಿದೆ.

ಹೆಣ್ಣುಮಕ್ಕಳ ಬಗ್ಗೆ ಅವರಿಗಿರುವ ಗೌರವ ಗೊತ್ತಾಗುತ್ತಿದೆ. ವೈಯಕ್ತಿಕವಾಗಿ ಇಂತಹ ಮಾತು ಹೇಳಿರುವುದು ಸರಿಯಲ್ಲ. ಇದರಿಂದ ನನಗೇನು ಪರಿಣಾಮಗಳು ಬೀರಲ್ಲ ನನ್ನ ಕೆಲಸಕ್ಕೂ ತೊಂದರೆಯಾಗಲ್ಲ ಜನ ನನಗಲ್ಲ ಅವರಿಗೆ ಬುದ್ಧಿ ಕಲಿಸುತ್ತಾರೆ ಎಂದು ತಿರುಗೇಟು ನೀಡಿದರು.

Leave a Reply

Your email address will not be published. Required fields are marked *

error: Content is protected !!