Saturday, 27th July 2024

ಮುಂದಿನ ಮುಖ್ಯಮಂತ್ರಿ ಅರವಿಂದ ಬೆಲ್ಲದ್…ಪೋಸ್ಟ್ ವೈರಲ್

ಬೆಂಗಳೂರು : ಸಚಿವ ಸಿಪಿ ಯೋಗೇಶ್ವರ್, ಸಿಎಂ ಪುತ್ರ ವಿಜಯೇಂದ್ರ ಆನಂತರ ಶಾಸಕ ಅರವಿಂದ ಬೆಲ್ಲದ್ ದೆಹಲಿಗೆ ಹೋಗಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಜೊತೆಗೆ, ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಉತ್ತರ ಕರ್ನಾಟಕದ ವೀರಶೈವ ಮುಖಂಡ ಅರವಿಂದ ಬೆಲ್ಲದ್ ಎನ್ನುವ ಪೋಸ್ಟ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಿಜೆಪಿಯ ಹೈಕಮಾಂಡ್ ಸೂಚಿಸಿದ ದಿನವೇ ತಾವು ಸಿಎಂ ಹುದ್ದೆಯಿಂದ ಕೆಳಗೆ ಇಳಿದು, ಈ ರಾಜ್ಯದ ಜನರ ಸೇವೆಯನ್ನು ಮಾಡುವೆ ಎಂದು ಹೇಳಿದಂತ ಸಿಎಂ ಯಡಿಯೂರಪ್ಪ ಮಾತಿನಿಂದ, ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆಗೆ ಮತ್ತಷ್ಟು ಟ್ವಿಸ್ಟ್ ಪಡೆದುಕೊಂಡಿತ್ತು.

ಈ ಮಧ್ಯೆ ಶಾಸಕ ಅರವಿಂದ ಬೆಲ್ಲದ್ ಅವರು ದೆಹಲಿಗೆ ಹೋಗಿದ್ದು, ವೈಯಕ್ತಿಕ ಕಾರಣಗಳಿಂದಲೂ ದೆಹಲಿಗೆ ಹೋಗ ಬಾರದ ಎಂಬುದಾಗಿ ಅರವಿಂದ ಬೆಲ್ಲದ್ ಸ್ಪಷ್ಟ ಪಡಿಸಿದರು. ಅವರ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಶಾಸಕ ಅರವಿಂದ ಬೆಲ್ಲದ್ ಮುಂದಿನ ಮುಖ್ಯಮಂತ್ರಿ ಎಂಬುದಾಗಿ ಪೋಸ್ಟ್ ಹಾಕಲಾಗುತ್ತಿದ್ದು, ಸಖತ್ ವೈರಲ್ ಕೂಡ ಆಗಿದೆ.

 

Leave a Reply

Your email address will not be published. Required fields are marked *

error: Content is protected !!