Saturday, 27th July 2024

ನಾಳೆ ಅಂಜನಾದ್ರಿಗೆ ರಾಜ್ಯಪಾಲ ವಾಲಾ ಭೇಟಿ

ಕೊಪ್ಪಳ: ರಾಜ್ಯಪಾಲ ವಜುಭಾಯಿ ವಾಲಾ ಅವರು ಜ.10ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿ ದ್ದಾರೆ.

ವಜುಭಾಯಿ ವಾಲಾ ಜ.10ರಂದು ಬೆಳಿಗ್ಗೆ 9.50ಕ್ಕೆ ಬೆಂಗಳೂರಿನ ಹೆಚ್.ಎ.ಎಲ್. ಏರ್‌ಪೋರ್ಟ್ದಿಂದ ಹೆಲಿಕ್ಯಾಪ್ಟರ್ ಮೂಲಕ ನಿರ್ಗಮಿಸಿ, 11.30ಕ್ಕೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವ ನಡೆವ ಸ್ಥಳಕ್ಕೆ ಆಗಮಿಸುವರು.

ಅಲ್ಲಿಂದ ಕಿಷ್ಕಿಂದದಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಆಂಜನೇಯ (ಹನುಮಾನಜೀ) ದೇವಸ್ಥಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ ಆನೆಗೊಂದಿ ಉತ್ಸವ ಸ್ಥಳದಿಂದ ಹೆಲಿಕ್ಯಾಪ್ಟರ್ ಮೂಲಕ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸುವರು ಎಂದು ರಾಜ್ಯಪಾಲರ ಕಾರ್ಯದರ್ಶಿ ತಿಳಿಸಿದ್ದಾರೆ.

ರಾಜ್ಯಪಾಲ‌ ವಜುಭಾಯಿ ವಾಲಾ ಅವರ ತವರಾದ ಗುಜರಾತ್ ನಲ್ಲಿ ನಿರ್ಮಿಸುತ್ತಿರುವ ಹನುಮಾನ್ ದೇವಸ್ಥಾನಕ್ಕಾಗಿ ಹನು ಮಂತನ ಜನ್ಮಸ್ಥಳವಾದ ಅಂಜನಾದ್ರಿಯ ಹನುಮಂತ ದೇವರ ಆಶೀರ್ವಾದದೊಂದಿಗೆ ಶಿಲಾ ಪೂಜೆ ನೆರವೇರಿಸಿ ಆಶೀರ್ವಾದ ಪಡೆಯುವ ಸಲುವಾಗಿ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!