ರಾಮನಗರ : ಶಾಸಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತ, ಜಿಲ್ಲಾ ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ.
ಇದೇ ವೇಳೆ ಇಕ್ಬಾಲ್ ಗೆ 10 ವರ್ಷಗಳ ಆದಾಯ ಮೂಲದ ಮಾಹಿತಿ ಕೇಳಿದ್ದು, ಅ.೧ರಂದು ಬೆಳಗ್ಗೆ ದೆಹಲಿಯ ಇಡಿ ಕಚೇರಿಯಲ್ಲಿ ಇಕ್ಬಾಲ್ ಹುಸೇನ್ ವಿಚಾರಣೆಗೆ ಬರುವಂತೆ ತಿಳಿಸಿದೆ.
ಬ್ಯಾಂಕ್ ವಿವರ, ಕಾರ್ಖಾನೆ, ಜಮೀನು ಹಾಗೂ ಇತರ ಆಸ್ತಿಗಳ ಬಗ್ಗೆ ಮಾಹಿತಿಯನ್ನು ಕೂಡ ವಿಚಾರಣೆ ವೇಳೆ ತರುವಂತೆ ಇಡಿ ತಿಳಿಸಿದೆ ಎನ್ನಲಾಗಿದೆ.