ವಿಜಯಪುರ: ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು, ಈ ನಡುವೆ ಉಕ್ರೇನ್ನಲ್ಲಿ ಎಂಬಿಬಿಎಸ್ನ ಎರಡನೇ ಸೆಮಿಸ್ಟರ್ನಲ್ಲಿ ಓದುತ್ತಿದ್ದ ಸ್ನೇಹಾ ಪಾಟೀಲ್ ಎಂಬ ಯುವತಿ ಭಾರತಕ್ಕೆ ಬಂದು ತಲುಪಿದ್ದಾರೆ.
ವಿಜಯಪುರದ ಐಶ್ವರ್ಯ ನಗರ ನಿವಾಸಿ ಗುತ್ತಿಗೆದಾರ ರಮೇಶ ಪಾಟೀಲ್ ಅವರ ಪುತ್ರಿ ಸ್ನೇಹಾ ಪಾಟೀಲ್ ಫೆ.22ಕ್ಕೆ ಉಕ್ರೇನ್ನಿಂದ ವಿಮಾನದ ಮೂಲಕ ಹೊರಟಿದ್ದರು. ಫೆ.23ಕ್ಕೆ ಬೆಂಗಳೂರಿಗೆ ಆಗಮಿಸಿದ್ದರು. ಅಲ್ಲಿಂದ ರಸ್ತೆ ಮೂಲಕ ವಿಜಯಪುರಕ್ಕೆ ಆಗಮಿಸಿದ್ದಾರೆ. ವಿದ್ಯಾರ್ಥಿನಿ ಸ್ನೇಹಾ ಪಾಟೀಲ್ ಸುರಕ್ಷಿತವಾಗಿ ವಿಜಯಪುರಕ್ಕೆ ಆಗಮಿಸಿದ್ದರಿಂದ ಮನೆಯಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ.
ಸ್ನೇಹಾ ಪಾಟೀಲ್ ಫೆಬ್ರವರಿ 22ಕ್ಕೆ ಉಕ್ರೇನ್ನಿಂದ ವಿಮಾನದ ಮೂಲಕ ಹೊರಟಿದ್ದರು. ಫೆ.23ಕ್ಕೆ ಬೆಂಗಳೂರಿಗೆ ಆಗಮಿಸಿ, ಅಲ್ಲಿಂದ ರಸ್ತೆ ಮೂಲಕ ಇಂದು ಸಂಜೆ ವಿಜಯಪುರಕ್ಕೆ ಆಗಮಿಸಿದ್ದಾರೆ.