ಹುಬ್ಬಳ್ಳಿ: ವಿದ್ಯಾಗಮ ಯೋಜನೆಗೆ ಮಾಜಿ ಸಚಿವ ಬಸವರಾಜ್ ಹೊರಟ್ಟಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿ ವಿರೋಧಿಸಿದ ಹೊರಟ್ಟಿಯವರು, ವಿದ್ಯಾಗಮ ಅನ್ನೋದು ಹುಚ್ಚುತನ ಕೈಬಿಡಬೇಕು ವಿದ್ಯಾಗಮ ಜಾರಿಯಿಂದ ಏನ್ ಲಾಭ ಇದೆ ಅರ್ಥವಾಗು ತ್ತಿಲ್ಲ. ಇದರಿಂದ ನಯಾಪೈಸೆ ಲಾಭ ಇಲ್ಲ ಎಂದು ಸರ್ಕಾರವನ್ನು ಟೀಕಿಸಿದರು.
ಎಷ್ಟು ಜನ ಮಕ್ಕಳಿಗೆ ವಿದ್ಯಾಗಮದಿಂದ ಲಾಭ ಆಗಿದೆ ಸರ್ಕಾರ ಹೇಳಲಿ ? ಒಂದು ವರ್ಷ ಮಕ್ಕಳನ್ನು ಪಾಸ್ ಮಾಡಲು ಏನ್ ತೊಂದರೆ..? ಎಂದು ಪ್ರಶ್ನಿಸಿದರು. ಮಕ್ಕಳನ್ನು ಶಾಲೆಗೆ ಕರೆತರಲು ಅವರ ಮನೆ ಮನೆಗೆ ಅಲೆಯುವಂತಾಗಿದೆ.
ಇದುವರೆಗೆ 136 ಜನ ಶಿಕ್ಷಕರ ಬಲಿಯಾಗಿದ್ದಾರೆ. ಶಿಕ್ಣಣ ಸಚಿವರು ಪತ್ರ ಬರೆದು ಅಭಿಪ್ರಾಯ ಕೇಳ್ತಾರೆ, ಮತ್ತೆ ಅವರು ಮಾಡಬೇಕಾದನ್ನೆ ಮಾಡ್ತಾರೆ ಎಂದು ವ್ಯಂಗ್ಯವಾಡಿದರು.