Saturday, 27th July 2024

ಕರೂರು ವೈಶ್ಯ ಬ್ಯಾಂಕ್​ನ ಎನ್​.ಎಸ್​.ಶ್ರೀನಾಥ್ ನಿಧನ

ಬೆಂಗಳೂರು: ಕರೂರು ವೈಶ್ಯ ಬ್ಯಾಂಕ್​ನ ನಿವೃತ್ತ ಅಧ್ಯಕ್ಷ ಎನ್​.ಎಸ್​.ಶ್ರೀನಾಥ್​( 73) ಶುಕ್ರವಾರ ನಿಧನರಾದರು. ಅವರು ಪತ್ನಿ, ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.

ಕುಟುಂಬದವರು ಶ್ರೀನಾಥ್​ ಅವರ ದೇಹವನ್ನು ಎಂ.ಎಸ್​.ರಾಮಯ್ಯ ಆಸ್ಪತ್ರೆಗೆ ದಾನ ಮಾಡಿದ್ದಾರೆ. 1970ರಲ್ಲಿ ಕೆನರಾ ಬ್ಯಾಂಕ್​ನಲ್ಲಿ ವೃತ್ತಿ ಆರಂಭಿಸಿದ್ದ ಇವರು, 2006ರಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಬಡ್ತಿ ಪಡೆದಿದ್ದರು. 2009ರಲ್ಲಿ ಕೇಂದ್ರ ಸರ್ಕಾರ,ಬ್ಯಾಂಕ್​ ಆಫ್​​​ ಬರೋಡಾಗೆ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಿತ್ತು.

ನಂತರ, ಕರೂರು ವೈಶ್ಯ ಬ್ಯಾಂಕ್​ನ ನಿರ್ದೆಶಕ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಬ್ಯಾಂಕಿಂಗ್​ ಕ್ಷೇತ್ರದಲ್ಲಿ 40 ವರ್ಷ ಅನುಭವ ಹೊಂದಿದ್ದರು.

ಮುಂಬೈ, ಬೆಂಗಳೂರು, ಚೆನ್ನೈ, ಕರೂರು, ಮೈಸೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಕೆಲಸ ಮಾಡಿದ್ದರು. ಮಾನವ ಸಂಪನ್ಮೂಲ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ನೈಪುಣ್ಯತೆ ಹೊಂದಿದ್ದರು. ಕೆನರಾ ಬ್ಯಾಂಕ್​ ಉದ್ಯೋಗಿಗಳ ಕನ್ನಡ ಸಂಘ ಸೇರಿ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.

Leave a Reply

Your email address will not be published. Required fields are marked *

error: Content is protected !!