Saturday, 27th July 2024

ಸಿದ್ದುಗೆ ಹಿಂದೂ ಧರ್ಮವನ್ನ ಅವಹೇಳನ ಮಾಡುವುದೇ ಕೆಲಸವಾಗಿದೆ

ಬೆಂಗಳೂರು: ಮುಸ್ಲಿಂ ಹೆಣ್ಣಮಕ್ಕಳು ತಲೆಗೆ ದುಪ್ಪಟ್ಟ ಹಾಕಿದರೆ ತಪ್ಪೇನು.? ‘ಸ್ವಾಮೀಜಿಗಳು ತಲೆಮೇಲೆ ಬಟ್ಟೆ ಹಾಕಿಕೊಳ್ಳುವು ದಿಲ್ಲವೇ ಎಂದು ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ, ಕೇಸರಿ ಪಡೆ ಮುಗಿಬಿದ್ದಿದೆ.

ಸಿದ್ಧರಾಮಯ್ಯ ವಿರುದ್ಧ ವಾಕ್ ಸಮರ ನಡೆಸಿರುದ ಬಿಜೆಪಿಯ ಸಚಿವ ಬಿಸಿ ನಾಗೇಶ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಅವರು, ಕೆಂಡಾಮಂಡಲವಾಗಿದ್ದಾರೆ.

ಸಿದ್ದರಾಮಯ್ಯ ಕೂಡಲೇ ಸ್ವಾಮೀಜಿಗಳ ಕ್ಷಮೆ ಯಾಚಿಸುಬೇಕು. ಸ್ವಾಮೀಜಿಗಳನ್ನು ಇದರಲ್ಲಿ ಎಳೆದು ತಂದಿರುವುದು ದುರ್ದೈ ವದ ವಿಚಾರವಾಗಿದೆ. ಸಿದ್ಧರಾಮಯ್ಯ ಹತಾಶೆಯಿಂದ ಹೀಗೆಲ್ಲಾ ಹೇಳಿಕೆ ನೀಡುತ್ತಿದ್ದಾರೆ ಎಂಬುದಾಗಿ ವಾಗ್ದಾಳಿ ನಡೆಸಿದ್ದಾರೆ.

ಹಿಜಾಬ್ ವಿವಾದ ಕಾಂಗ್ರೆಸ್ ಪ್ರೇರಿತ ಸಮಸ್ಯೆಯಾಗಿದೆ. ಕಾಂಗ್ರೆಸ್ ನಾಯಕರು ವ್ಯವಸ್ಥಿತ ವಾಗಿ ಪ್ರಚೋದನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಿಂದೂಗಳಿಗೆ ಅವಹೇಳನ ಮಾಡ್ತಾರೆ. ಮುಸ್ಲಿಂ ಸಮುದಾಯದ ತುಷ್ಠೀಕರಣ ಮಾಡುತ್ತಿದ್ದಾರೆ. ಅವರಿಗೆ ಹಿಂದೂ ಧರ್ಮವನ್ನ ಅವಹೇಳನ ಮಾಡುವುದೇ ಕೆಲಸವಾಗಿದೆ. ಸಿದ್ದರಾಮಯ್ಯ ಹಿಂದೂ ಕೇಸರಿಪೇಟ ಹಾಕಿದರೆ ಅದನ್ನ ಕಿತ್ತು ಎಸೆಯುತ್ತಾರೆ ಎಂಬುದಾಗಿ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಗೆ ಹತಾಶೆಯಿಂದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಹಿಜಾಬ್ ವಿವಾದವನ್ನ ಹುಟ್ಟು ಹಾಕಿದ್ದೇ ಕಾಂಗ್ರೆಸ್ ನವರು. ಜಮೀರ್‌ ಅಹಮ್ಮದ್ ಸೇರಿದಂತೆ ಕೆಲವರ ಹೇಳಿಕೆಗಳು ಪ್ರಚೋದನೆಗೆ ಎಡೆಮಾಡಿಕೊಟ್ಟಿತು ಎಂದರು.

 

error: Content is protected !!