ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಕಿಶನ್ ಅಣ್ಣ ಎಂದು ತಿಳಿಯದೆ ಆದೀಶ್ವರ್​ನ ಮೈಚಳಿ ಬಿಡಿಸಿದ ಕುಸುಮಾ

ಭಾಗ್ಯ ಲಕ್ಷ್ಮೀ ಧಾರಾವಾಹಿ ರೋಚಕತೆ ಸೃಷ್ಟಿಸಿದೆ. ಚಿನ್ನದಂತಹ ಗುಣ ಇರುವ ಭಾಗ್ಯ ಮೇಲೆ ಸಮಯ-ಸಂದರ್ಭಗಳು ಆದೀಯ ಎದುರು ತಪ್ಪಾಗಿ ಅರ್ಥಹಿಸುವಂತೆ ಮಾಡಿದೆ. ಇದೆಲ್ಲ ಮನವರಿಕೆ ಆಗಿ ಆದೀ ಈ ಮದುವೆ ಒಪ್ಪುತ್ತಾನ ಅಥವಾ ಕನ್ನಿಕಾ ಜೊತೆ ಸೇರಿ ಮದುವೆ ಮುರಿಯಲು ಪ್ಲ್ಯಾನ್ ಮಾಡುತ್ತಾನ ಎಂಬುದು ನೋಡಬೇಕಿದೆ.

ಕಿಶನ್ ಅಣ್ಣ ಎಂದು ತಿಳಿಯದೆ ಆದೀಶ್ವರ್​ನ ಮೈಚಳಿ ಬಿಡಿಸಿದ ಕುಸುಮಾ

Bhagya Lakshmi Serial

Profile Vinay Bhat Jun 2, 2025 12:08 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತಂಗಿ ಪೂಜಾಳ ಮದುವೆ ಕಾರ್ಯದ ಎಪಿಸೋಡ್​ಗಳು ಸಖತ್ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿವೆ. ಆದೀಶ್ವರ್ ಕಾಮತ್ ಎಂಬ ಹೊಸ ಪಾತ್ರ ಧಾರಾವಾಹಿಯ ದಿಕ್ಕನ್ನೇ ಬದಲಾಯಿಸಿದ್ದು, ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ಆದೀಶ್ವರ್ ಕಾಮತ್ ಹಾಗೂ ಭಾಗ್ಯ ಕುಟುಂಬದ ಜುಗಲ್​ಬಂದಿ ನೋಡಲು ಸಖತ್ ಮಜಾ ನೀಡುತ್ತಿದೆ. ಅಂದಹಾಗೆ ಇಲ್ಲಿ ಆದೀ ವಿದೇಶದಿಂದ ಬಂದಿರುವುದು ಪೂಜಾ-ಕಿಶನ್ ಮದುವೆ ನಿಲ್ಲಿಸಲು. ಆದರೆ, ಕಿಶನ್ ಮಾತು ಕೇಳಿ ಆದೀ ಭಾಗ್ಯ ಕುಟುಂಬವನ್ನ ಭೇಟಿ ಮಾಡಲು ಮುಂದಾಗುತ್ತಾನೆ. ಆದರೆ, ಇಬ್ಬರಿಗೂ ಸಂಬಂಧದ ಬಗ್ಗೆ ಗೊತ್ತಿಲ್ಲದೆ ಇವರಿಬ್ಬರ ನಡುವೆ ಜಗಳ ಶುರುವಾಗಿದೆ.

ಮೊದಲಿಗೆ ಕುಸುಮಾ ಹಾಗೂ ಭಾಗ್ಯ ಕಾರಿನಲ್ಲಿ ಹೋಗುತ್ತಿರುವಾಗ ಸಿಗ್ನಲ್​ನಲ್ಲಿ ಆದೀಶ್ವರ್​ನ ಕಾರು ಭಾಗ್ಯ ಕಾರಿಗೆ ಒರೆಸಿಕೊಂಡು ಹೋಗಿದೆ. ಇದೇ ವಿಷಯವನ್ನು ಹಿಡಿದುಕೊಂಡು ಆದೀ ಜೊತೆ ಕುಸುಮಾ ಜೋರಾಗಿ ಜಗಳ ಮಾಡಿದ್ದಳು. ಭಾಗ್ಯ-ಕುಸುಮಾ ಅಡ್ಡಗಟ್ಟಿ ಕಾರನ್ನು ನಿಲ್ಲಿಸಿ ತಾವು ಜಗಳ ಆಡುತ್ತಿರುವುದು ಕಿಶನ್​ನ ಅಣ್ಣನ ಜೊತೆ ಎಂಬುದು ತಿಳಿಯದೆ ಮನಬಂದಂತೆ ಬೈದಿದ್ದಳು. ಅಷ್ಟೇ ಅಲ್ಲದೆ ಕುಸುಮಾ ಈತನಿಗೆ ಸರಿಯಾಗಿ ಬುದ್ದಿ ಕಲಿಸಬೇಕು ಎಂದು ಪಕ್ಕದಲ್ಲೇ ಇದ್ದ ಕಲ್ಲನ್ನು ಎತ್ತು ಆದೀ ಕಾರಿನ ಗಾಜಿಗೆ ಬಿಸಾಡಿ ಗಾಜು ಪುಡಿಪುಡಿ ಮಾಡಿದ್ದಾರೆ.

ಇದಾದ ಬಳಿಕ ಮತ್ತೊಂದೆಡೆ ಭಾಗ್ಯ-ಕುಸುಮಾ ರೋಡ್ ಸೈಡ್​ನಲ್ಲಿ ಒಬ್ಬರ ಬಳಿ ಹಣ ವಸೂಲಿ ಮಾಡುತ್ತಿರುವುದನ್ನು ಆದೀ ನೋಡುತ್ತಾನೆ. ಅಸಲಿಗೆ ಇಲ್ಲಿ ಭಾಗ್ಯ-ಕುಸುಮಾ ವಸೂಲಿ ಮಾಡುತ್ತಿರುವುದು ತಮಗೆ ಬರಬೇಕಾಗಿದ್ದ ಹಣವನ್ನು. ಕೆಲ ದಿನಗಳ ಹಿಂದೆ ಕ್ಯಾಟರಿಂಗ್ ಬೇಕೆಂದು ಹೇಳಿ ಇವರು ಊಟ ಆರ್ಡರ್ ಮಾಡಿದ್ದರು. ಆದರೆ, ಹಣ ಕೊಡದೆ ಸತಾಯಿಸುತ್ತಿದ್ದ. ಈಗ ಭಾಗ್ಯ-ಕುಸುಮಾ ಅವರ ಮನೆ ಬಳಿ ಹೋಗಿ ಧಮ್ಕಿ ಹಾಕಿ ಹಣ ವಸೂಲಿ ಮಾಡಿದ್ದಾರೆ.



ಆದರೆ, ಈ ಘಟನೆಯನ್ನು ಆದೀ ತಪ್ಪಾಗಿ ತಿಳಿದುಕೊಂಡಿದ್ದಾನೆ. ಈ ಹೆಂಗಸರಿಗೆ ಇದೇ ಕೆಲಸ.. ಸಿಕ್ಕ ಸಿಕ್ಕವರಿಂದ ಹಣ ವಸೂಲಿ ಮಾಡೋದು ಎಂದು ಹೇಳುತ್ತಾನೆ. ನಿಜಾಂಶ ಗೊತ್ತಿಲ್ಲದೆ ಆದೀ ಭಾಗ್ಯ ಕುಟುಂಬದ ಮೇಲೆ ಸಿಟ್ಟಾಗಿದ್ದಾನೆ. ಅಲ್ಲದೆ ಇದನ್ನು ಆದೀ ಬಂದು ಪ್ರಶ್ನಿಸಿದ್ದಕ್ಕೆ ಕುಸುಮಾ ಆದೀಯ ಮೈಚಳಿ ಬಿಡಿಸಿದ್ದಾಳೆ. ಯಾಕೆ ಕಾಲು ಕೆರ್ಕೊಂಡು ನಮ್ ಹತ್ರ ಬರ್ತೀಯ.. ಕೋಲು ಕೊಟ್ಟ ಹೊಡಿಸಿಕೊಳ್ಳುವ ಕೆಲಸ ನಿನ್ಗೆ ಯಾಕೆ.. ನೋಡು ಇನ್ನುಮುಂದೆ ಯಾವತ್ತೂ ನೀನು ನನ್ನ ಕಣ್ಣಮುಂದೆ ಕಾಣಿಸಿಕೊಳ್ಳಬೇಡ ಎಂದು ವಾರ್ನ್ ಮಾಡಿದ್ದಾಳೆ ಕುಸುಮಾ.



ಆದೀಯ ವಿರೋಧಕ್ಕೆ ಮತ್ತಷ್ಟು ತುಪ್ಪ ಸುರಿದಿರುವುದು ಭಾಗ್ಯ ಅಮ್ಮ ಸುನಂದ. ಆದೀ ಭಾಗ್ಯಳನ್ನು ಭೇಟಿ ಮಾಡಬೇಕೆಂದು ಮನೆಗೆ ಬಂದಿರುತ್ತಾನೆ. ಆದರೆ, ಅಲ್ಲಿ ಸುನಂದ ಮತ್ತು ಪೂಜಾ ಮಾತ್ರ ಇರುತ್ತಾರೆ. ಆದೀ ಮನೆಗೆ ಬಂದೊಡನೆ ಸುನಂದ ನಮಗೆ ಬಂಗಾರ ತೆಗೆಯಲು ಹಣ ಕೊಡಿ ಎಂದು ನೇರವಾಗಿ ಕೇಳಿದ್ದಾರೆ. ಇದರಿಂದ ಆದೀಗೆ ಕೋಪ ಬಂದಿದೆ. ಎಲ್ಲದಕ್ಕೂ ಒಂದು ಇತಿ-ಮಿತಿ ಅಂತ ಇರುತ್ತೆ.. ಅದನ್ನು ಮೀರಿ ಯಾರೂ ಯಾವತ್ತೂ ಹೋಗಬಾರದು. ನಿಮ್ಗೆ ನೀವೇ ಒಂದು ಗೆರೆ ಎಳೆದುಕೊಂಡ್ರೆ ಅದು ನಿಮಗೂ ಒಳ್ಳೆಯದು ನಿಮ್ ಜೊತೆ ಇರೋರಿಗೂ ಒಳ್ಳೆಯದು ಎಂದು ಹೇಳಿ ಹೋಗಿದ್ದಾನೆ.

ಸದ್ಯ ಭಾಗ್ಯ ಲಕ್ಷ್ಮೀ ಧಾರಾವಾಹಿ ರೋಚಕತೆ ಸೃಷ್ಟಿಸಿದೆ. ಚಿನ್ನದಂತಹ ಗುಣ ಇರುವ ಭಾಗ್ಯ ಮೇಲೆ ಸಮಯ-ಸಂದರ್ಭಗಳು ಆದೀಯ ಎದುರು ತಪ್ಪಾಗಿ ಅರ್ಥಹಿಸುವಂತೆ ಮಾಡಿದೆ. ಇದೆಲ್ಲ ಮನವರಿಕೆ ಆಗಿ ಆದೀ ಈ ಮದುವೆ ಒಪ್ಪುತ್ತಾನ ಅಥವಾ ಕನ್ನಿಕಾ ಜೊತೆ ಸೇರಿ ಮದುವೆ ಮುರಿಯಲು ಪ್ಲ್ಯಾನ್ ಮಾಡುತ್ತಾನ ಎಂಬುದು ನೋಡಬೇಕಿದೆ.

Rakshak Bullet: ಫಿಕ್ಸ್ ಆಯಿತು ರಕ್ಷಕ್ ಬುಲೆಟ್ ಮದುವೆ?: ಹುಡುಗಿ ರಮೋಲಾನೆ ಎಂದ ರಕ್ಷಕ್ ಅಮ್ಮ