ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಪೂಜಾ-ಕಿಶನ್ ಮದುವೆ ನಡೆಯೋದೆ ಇಲ್ಲ ಎಂದ ಆದೀಶ್ವರ್: ತಿರುಗಿ ಬೀಳ್ತಾನ ಕಿಶನ್?

ಕಿಶನ್ನ ಮದುವೆ ಆಗುವ ಹುಡುಗಿ ಪೂಜಾ ಭಾಗ್ಯಾ ತಂಗಿ ಎಂಬ ವಿಚಾರ ಗೊತ್ತಾಗಿದ್ದೆ ತಡ ಆದೀಶ್ವರ್ ಕಾಮತ್ ಈ ಮದುವೆ ನಡೆಯೋದೆ ಇಲ್ಲ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೆ ಭಾಗ್ಯ ಕೆಟ್ಟವಳೆಂದು ಪ್ರೂವ್ ಮಾಡುತ್ತೇನೆ ಎಂದು ರಾಮ್ದಾಸ್ ಎದುರು ಚಾಲೆಂಜ್ ಮಾಡಿದ್ದಾನೆ ಆದೀ.

ಪೂಜಾ-ಕಿಶನ್ ಮದುವೆ ನಡೆಯೋದೆ ಇಲ್ಲ ಎಂದ ಆದೀಶ್ವರ್

Bhagya Lakshmi Serial

Profile Vinay Bhat Jun 7, 2025 11:50 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ರೋಚಕ ಘಟ್ಟದತ್ತ ಸಾಗುತ್ತಿದೆ. ಆದೀಶ್ವರ್ ಕಾಮತ್ ಪಾತ್ರದಲ್ಲಿ ಮಿಂಚುತ್ತಿರುವ ಹರೀಶ್ ರಾಜ್ ಧಾರಾವಾಹಿಗೆ ಹೊಸ ಕಳೆ ತಂದುಕೊಟ್ಟಿದ್ದಾರೆ. ಭಾಗ್ಯ ಹಾಗೂ ಆದೀಶ್ವರ್​ನ ಜಗಳ ಸಖತ್ ಕುತೂಹಲ ಕೆರಳಿಸುತ್ತಿದೆ. ಕಿಶನ್​ನ ಮದುವೆ ಆಗುವ ಹುಡುಗಿ ಪೂಜಾ ಭಾಗ್ಯಾ ತಂಗಿ ಎಂಬ ವಿಚಾರ ಗೊತ್ತಾಗಿದ್ದೆ ತಡ ಆದೀಶ್ವರ್ ಕಾಮತ್ ಈ ಮದುವೆ ನಡೆಯೋದೆ ಇಲ್ಲ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೆ ಭಾಗ್ಯ ಕೆಟ್ಟವಳೆಂದು ಪ್ರೂವ್ ಮಾಡುತ್ತೇನೆ ಎಂದು ರಾಮ್​ದಾಸ್ ಎದುರು ಚಾಲೆಂಜ್ ಮಾಡಿದ್ದಾನೆ ಆದೀ.

ಕಿಶನ್-ಪೂಜಾ ಮದುವೆ ನಿಲ್ಲಿಸಲು ಆದೀಶ್ವರ್ ಕಾಮತ್ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದ್ದಾನೆ. ಭಾಗ್ಯ ಮನೆಯವರು ಒಳ್ಳೆಯವರಲ್ಲ, ಸಂಸ್ಕಾರವಂತರಲ್ಲ ಎಂದು ಪ್ರೂವ್ ಮಾಡಲು ಹೊರಟಿದ್ದಾನೆ. ಕಿಶನ್ ಬಂದು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಆದೀ ಮನಸ್ಸು ಕರಗುತ್ತಿಲ್ಲ. ನಾನು ಎಷ್ಟೋ ಮಿಡಲ್-ಕ್ಲಾಸ್ ಫ್ಯಾಮಿಲಿನ ಅವರ ನಡತೆಯನ್ನು ನೋಡಿದ್ದೇನೆ.. ಇವರು ಅವರಿಗಿಂತ ಬೇರೆ ಇಲ್ಲ.. ಅವಳಿಗೆ ನಮ್ಮ ಹೈ-ಫೈ ಲೈಫ್ ನೋಡಿ ಲವ್ ಆಗಿದೆಯಷ್ಟೆ ಎಂದು ಆದೀ ಹೇಳಿದ್ದಾನೆ.

ಆದರೆ, ಆದೀಯ ಮಾತನ್ನು ಕಿಶನ್ ಒಪ್ಪಲು ರೆಡಿಯಿಲ್ಲ. ಅಣ್ಣ ಹಾಗೆಲ್ಲ ಏನಿಲ್ಲ.. ಅವರಿಗೆ ನಾನು ಕಾಮತ್ ಫ್ಯಾಮಿಲಿ ಅವನು ಅಂತ ಗೊತ್ತಾಗಿದ್ದೆ ಮೊನ್ನೆ.. ಅಷ್ಟರ ತನಕ ನಾನು ಯಾರಂತನೇ ಗೊತ್ತಿರಲಿಲ್ಲ ಎಂದಿದ್ದಾನೆ. ಆದರೆ ಇದಕ್ಕೆ ಆದೀ, ನನ್ನ ಏನು ಫೂಲ್ ಅಂದುಕೊಂಡಿದ್ದೀಯಾ?, ಈಗಿನ ಕಾಲದ ಹುಡುಗಿಯರಿಗೆ ಹುಡುಗನ ನೋಡಿದ ಕೂಡಲೇ ಗೊತ್ತಾಗುತ್ತೆ ಅವನ ಹತ್ರ ದುಡ್ಡು ಇದೆಯೊ, ಇಲ್ಲವೋ ಅಂತ.. ನೀನು ನಂಗೆ ಇರಿಟೆಟ್ ಮಾಡ್ಬೇಡ.. ಯಾವುದೇ ಕಾರಣಕ್ಕು ಈ ಮದುವೆ ನಡೆಯಲ್ಲ ಎಂದು ನೇರವಾಗಿ ಹೇಳಿದ್ದಾನೆ. ಇದರಿಂದ ಕಿಶನ್​ಗೆ ಬೇಸರ ಮೂಡಿದೆ. ಅಣ್ಣನ ವಿರುದ್ಧವೇ ತಮ್ಮ ತಿರುಗಿ ಬೀಳುತ್ತಾನ ಎಂಬುದು ಕುತೂಹಲ ಕೆರಳಿಸಿದೆ.



ಮತ್ತೊಂದೆಡೆ ತಾಂಡವ್ ಆಫೀಸ್​ನಲ್ಲಿ ರೆಸಿಗ್ನೇಷನ್ ಕೊಟ್ಟು ತನ್ನದೇಯಾದ ಹೊಸ ಕಂಪನಿ ಶುರುಮಾಡಲು ಹೊರಟಿದ್ದಾನೆ. ಭಾಗ್ಯ ತೆಗೆಸಿ ಕೊಟ್ಟ ಕೆಲಸ ಎಂಬ ತನಗೆ ಬೇಡ ಎಂದು ಬಾಸ್ ಮುಖಕ್ಕೆ ರೆಸಿಗ್ನೇಷನ್ ಲೆಟ್ ಬಿಸಾಕಿ ಬಂದಿದ್ದೇನೆ ಎಂದು ಭಾಗ್ಯ ಮನೆಗೆ ಬಂದು ಹೇಳಿದ್ದಾನೆ. ಜೊತೆಗೆ ಒಂದಲ್ಲ ಒಂದು ದಿನ ನೀನೆ ಬಂದು ನನ್ನ ಕಾಲು ಹಿಡ್ಕೊಂಡು ಸಹಾಯ ಮಾಡು ಅಂತ ಕೇಳ್ತೀಯ ನೋಡು ಎಂದು ಭಾಗ್ಯಾಗೆ ತಾಂಡವ್ ಹೇಳಿದ್ದಾನೆ.



ಇದರಿಂದ ಕೋಪ ಕೊಂಡ ಕುಸುಮಾ, ಒಮ್ಮೆ ಕೆಲಸ ಹುಡುಕೊಂಡು ಒದ್ದಾಡಿದ್ದು ಸಾಲದು ಅಂತ ಮತ್ತೊಮ್ಮೆ ಹುಡುಕೋಕೆ ಹೊರಟಿದ್ದೀಯ ಎಂದಿದ್ದಾರೆ. ಪೂಜಾ ಕೂಡ, ಪಾಪಾ ಎಷ್ಟು ಒದ್ದಾಡಿ ಕೊರಗಿದ್ರು.. ಕೊನೆಗೆ ನಮ್ಮ ಅಕ್ಕನೆ ಭಿಕ್ಷೆ ಹಾಕಬೇಕಾಯಿತು ಎಂದಿದ್ದಾಳೆ. ಇದರಿಂದ ತಾಂಡವ್ ಕೋಪ ಮತ್ತಷ್ಟು ಏರಿದೆ. ಆ ಭಿಕ್ಷೆ ಬೇಡ ಅಂತ ಬಿಟ್ಟು ಬಂದಿದ್ದೇನೆ ಎಂದು ಹೇಳಿದ್ದಾನೆ. ಸದ್ಯ ತಾಂಡವ್ ಭಾಗ್ಯಾನ ಸುಮ್ಮನೆ ಬಿಡುವಂತೆ ಕಾಣುತ್ತಿಲ್ಲ. ಅತ್ತ ತಂಗಿಯ ಮದುವೆ ಬಗ್ಗೆಯೂ ಭಾಗ್ಯಾಗೆ ಟೆನ್ಶನ್ ಶುರುವಾಗಿದೆ.

Kannada Serial TRP: ಕೊನೆಯ ವಾರ ಸೀತಾ ರಾಮ ಧಾರಾವಾಹಿಗೆ ಸಿಕ್ಕ ಟಿಆರ್​ಪಿ ಎಷ್ಟು?: ನಂಬರ್ ಒನ್ ಸೀರಿಯಲ್ ಯಾವುದು?