Friday, 20th September 2024

ಕೊನೆಯ ಟಿ20 ಗೆದ್ದು ನಿಟ್ಟುಸಿರು ಬಿಟ್ಟ ಆಸ್ಟ್ರೇಲಿಯಾ

ಸಿಡ್ನಿ: ಮೂರನೇ ಚುಟುಕು ಪಂದ್ಯಾವಳಿಯಲ್ಲಿ ಟೀಂ ಇಂಡಿಯಾವನ್ನು ಆತಿಥೇಯರು 12 ರನ್ನುಗಳಿಂದ ಸೋಲಿಸಿದೆ.

ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದ್ದ ನಾಯಕ ವಿರಾಟ್‌ ಕೊಹ್ಲಿ ಮತ್ತು ಹಾರ್ದಿಕ್‌ ಪಾಂಡ್ಯ ಒಂದು ಓವರ್‌ ಅಂತರದಲ್ಲಿ ಓಟಾಗಿ ತಂಡದ ಸೋಲಿಗೆ ನಾಂದಿ ಹಾಡಿದರು.

ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ ಕೀಪರ್‌ ಬ್ಯಾಟ್ಸಮನ್‌ ಸಂಜೂ ಸ್ಯಾಮ್ಸನ್‌ ಹಾಗೂ ಶ್ರೇಯಸ್‌ ಅಯ್ಯರ್‌ ವಿಕೆಟ್‌ ಚೆಲ್ಲಿದರು. ಆರಂಭಿಕ ಕೆ.ಎಲ್‌.ರಾಹುಲ್‌ ಕೂಡ ಶೂನ್ಯಕ್ಕೆ ಮರಳಿದರು.

ಇಂದಿನ ಸೋಲು ಕಳೆದ 12 ಪಂದ್ಯಗಳ ಬಳಿಕ ಮೊದಲನೇಯದ್ದಾಗಿದೆ. 2019ರಲ್ಲಿ ಡಿಸೆಂಬರ್‌ ನಲ್ಲಿ ವಿಂಡೀಸ್‌ ವಿರುದ್ದ ಕೊನೆಯ ಟಿ20 ಪಂದ್ಯವನ್ನು ಭಾರತ ಸೋತಿತ್ತು.

ಮಿಚೆಲ್‌ ಸ್ವೆಪ್ಸನ್‌ ಪಂದ್ಯಶ್ರೇಷ್ಠರಾದರೆ, ಹಾರ್ದಿಕ್‌ ಪಾಂಡ್ಯ ಅರ್ಹವಾಗಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.