Thursday, 19th September 2024

ರಾಜಸ್ಥಾನ್ ರಾಯಲ್ಸ್’ಗೆ ಗೆಲ್ಲಲೇಬೇಕಾದ ಒತ್ತಡ

ಅಬುಧಾಬಿ: ಪ್ಲೇ ಆಫ್‌ ಪ್ರವೇಶದ ಸ್ಪರ್ಧೆಯಲ್ಲಿ ಜೀವಂತವಾಗಿರಬೇಕಾದರೆ, ರಾಜಸ್ಥಾನ ರಾಯಲ್ಸ್ ತಂಡವು ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ಜಯಿಸಲೇಬೇಕಾದ ಒತ್ತಡದಲ್ಲಿದೆ.

ಕಳೆದ ಶುಕ್ರವಾರ ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದರಿಂದ ಕೀರನ್ ಪೊಲಾರ್ಡ್ ನಾಯಕತ್ವದಲ್ಲಿ ಆಡಿದ್ದ ಮುಂಬೈ ತಂಡವು ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ 10 ವಿಕೆಟ್‌ಗಳ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತ್ತು. ಮುಂಬೈ ಬೌಲರ್‌ಗಳು ಚೆನ್ನೈ ತಂಡದ ಬ್ಯಾಟಿಂಗ್‌ ಪಡೆಯನ್ನು ಧೂಳೀಪಟ ಮಾಡಿದ್ದರು. ಆರಂಭಿಕ ಬ್ಯಾಟಿಂಗ್ ಜೋಡಿ ಇಶಾನ್ ಕಿಶನ್ ಮತ್ತು ಕ್ವಿಂಟನ್ ಡಿ’ಕಾಕ್ ಅವರು ವಿಕೆಟ್ ನಷ್ಟವಿಲ್ಲದೇ ಗೆಲುವಿನ ಗುರಿಯನ್ನು ಸುಲಭವಾಗಿ ಮುಟ್ಟಿದರು.

ಟೂರ್ನಿಯ ಆರಂಭದಲ್ಲಿ ಅಬ್ಬರಿಸಿದ ಸಂಜು ಸ್ಯಾಮ್ಸನ್ ಬ್ಯಾಟ್ ನಿಂದ ರನ್‌ಗಳು ಬರುತ್ತಿಲ್ಲ. ಜೋಫ್ರಾ ಆರ್ಚರ್‌ ಬಿಟ್ಟರೆ ರಾಯಲ್ಸ್‌ ತಂಡವು ಉಳಿದ ಬೌಲರ್‌ಗಳ ಮೇಲೆ ವಿಶ್ವಾಸವಿಡುವುದು ಕಷ್ಟ. ಬ್ಯಾಟಿಂಗ್‌ನಲ್ಲಿಯೂ ಜೋಫ್ರಾ ಸಿಕ್ಸರ್‌ಗಳನ್ನು ಸಿಡಿಸುತ್ತಾರೆ.

Leave a Reply

Your email address will not be published. Required fields are marked *