Thursday, 19th September 2024

ಟೀಮ್ ಇಂಡಿಯಾ ಆಯ್ಕೆ ಇಂದು

ವಿಂಡೀಸ್ ವಿರುದ್ಧದ ತವರು ಸರಣಿ ರೋಹಿತ್‌ಗೆ ವಿಶ್ರಾಾಂತಿ, ಶಿಖರ್ ಧವನ್ ಆಯ್ಕೆೆ ಅನುಮಾನ ?

ದೆಹಲಿ:
ವೆಸ್‌ಟ್‌ ಇಂಡೀಸ್ ವಿರುದ್ಧ ಸೀಮಿತ ಓವರ್‌ಗಳ ಸರಣಿಯ ಭಾರತ ತಂಡವನ್ನು ಇಂದು ರಾಷ್ಟ್ರೀಯ ಕ್ರಿಿಕೆಟ್ ಆಯ್ಕೆೆ ಸಮಿತಿ ಪ್ರಕಟಿಸಲಿದ್ದು, ಉಪ ನಾಯಕ ರೋಹಿತ್ ಶರ್ಮಾ ಅವರಿಗೆ ವಿಶ್ರಾಾಂತಿ ನೀಡುವ ಸಾಧ್ಯತೆ ಇದೆ. ಆದರೆ, ಬ್ಯಾಾಟಿಂಗ್ ಲಯ ಕಳೆದುಕೊಂಡಿರುವ ಆರಂಭಿಕ ಶಿಖರ್ ಧವನ್ ಅವರ ಆಯ್ಕೆೆ ತೀವ್ರ ಕುತೂಹಲ ಮೂಡಿಸಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಅವರಿಗೆ ಅವಕಾಶ ಬಾಗಿಲು ತೆರೆದರೂ ಅಚ್ಚರಿಯೇನಿಲ್ಲ.

ಉಪ ನಾಯಕ ರೋಹಿತ್ ಶರ್ಮಾ ಐಸಿಸಿ ವಿಶ್ವಕಪ್ ಟೂರ್ನಿ ಮುಗಿದ ದಿನದಿಂದಲೂ ಬಿಡುವಿಲ್ಲದೆ ರಾಷ್ಟ್ರೀಯ ತಂಡದಲ್ಲಿ ತೊಡಗಿಸಿಕೊಂಡಿದ್ದಾಾರೆ. ಹಾಗಾಗಿ, ವೆಸ್‌ಟ್‌ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೆ ಅವರಿಗೆ ವಿಶ್ರಾಾಂತಿ ನೀಡಬಹುದು. ಒಂದು ವೇಳೆ ಅವರಿಗೆ ವಿಶ್ರಾಾಂತಿ ನೀಡಿದ್ದೇ ಆದಲ್ಲಿ ಅವರು ಮುಂದಿನ ವರ್ಷ ನ್ಯೂಜಿಲೆಂಡ್ ಪ್ರವಾಸಕ್ಕೆೆ ತಂಡಕ್ಕೆೆ ಮರಳಲಿದ್ದಾಾರೆ. ಕಿವೀಸ್ ವಿರುದ್ಧ ಭಾರತ ಐದು ಪಂದ್ಯಗಳ ಟಿ-20, ಮೂರು ಪಂದ್ಯಗಳ ಏಕದಿನ ಹಾಗೂ ಎರಡು ಪಂದ್ಯಗಳ ಟೆಸ್‌ಟ್‌ ಸರಣಿ ಆಡಲಿದೆ.

ಟೀಮ್ ಇಂಡಿಯಾ ಕೆರಿಬಿಯನ್ನರ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿಯು ಡಿ.6 ರಂದು ಮುಂಬೈನಲ್ಲಿ ಆರಂಭಗೊಂಡು ಡಿ.8 ರಂದು ತಿರುವನಂತಪುರಂ ಹಾಗೂ ಡಿ.11 ರಂದು ಹೈದರಾಬಾದ್ ನಲ್ಲಿ ಮುಕ್ತಾಾಯವಾಗಲಿದೆ.
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲನೇ ಪಂದ್ಯ ಡಿ.15 ರಂದು ಚೆನ್ನೈನಲ್ಲಿ ಆರಂಭಗೊಂಡು, ಡಿ.18 ರಂದು ವಿಶಾಖಪಟ್ಟಣಂ ಹಾಗೂ ಡಿ.22ಕ್ಕೆೆ ಕಟಕ್ ನಲ್ಲಿ ಮೂರನೇ ಪಂದ್ಯದೊಂದಿಗೆ ತವರು ಸರಣಿ ಅಂತ್ಯವಾಗಲಿದೆ.

60 ಪಂದ್ಯಗಳಾಡಿರುವ ಹಿಟ್‌ಮನ್:

ಐಪಿಎಲ್ ಸೇರಿದಂತೆ ಪ್ರಸಕ್ತ ವರ್ಷದಲ್ಲಿ ಒಟ್ಟು 60 ಪಂದ್ಯಗಳಾಡಿರುವ ರೋಹಿತ್ ಶರ್ಮಾ ಬಗ್ಗೆೆ ಆಯ್ಕೆೆ ಸಮಿತಿ ಹೆಚ್ಚು ಚರ್ಚೆ ನಡೆಸಲಿದೆ. ಪ್ರಸಕ್ತ ಆವೃತ್ತಿಿಯಲ್ಲಿ ಹಿಟ್‌ಮನ್ 25 ಏಕದಿನ, 11 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಾಡಿದ್ದಾಾರೆ. ಇತ್ತೀಚೆಗೆ ವಿಶ್ರಾಾಂತಿ ಪಡೆದಿದ್ದ ನಾಯಕ ವಿರಾಟ್ ಕೊಹ್ಲಿಿ ಗಿಂತ ರೋಹಿತ್ ಮೂರು ಏಕದಿನ ಹಾಗೂ ನಾಲ್ಕು ಟಿ-20 ಪಂದ್ಯಗಳು ಹೆಚ್ಚಾಾಗಿ ಆಡಿದ್ದಾಾರೆ. ಈ ಹಿನ್ನೆೆಲೆಯಲ್ಲಿ ರೋಹಿತ್ ಶರ್ಮಾ ಅವರಿಗೆ ವಿಶ್ರಾಾಂತಿ ನೀಡುವ ಸಾಧ್ಯತೆ ದಟ್ಟವಾಗಿದೆ.
ಆರಂಭಿಕರಾಗುವರೇ ಕನ್ನಡಿಗರು?
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಹೆಬ್ಬೆೆರಳು ಗಾಯದಿಂದಾಗಿ ತವರಿಗೆ ಮರಳಿದ್ದ ಶಿಖರ್ ಧವನ್ ಇನ್ನೂ ಬ್ಯಾಾಟಿಂಗ್ ಲಯಕ್ಕೆೆ ಮರಳುವಲ್ಲಿ ವಿಫಲರಾಗಿದ್ದಾಾರೆ. ಪ್ರಸ್ತುತ ಅದ್ಭುತ ಲಯದಲ್ಲಿರುವ ಮಯಾಂಕ್ ಅಗರ್ವಾಲ್ ಅವರಿಗೂ ಸೀಮಿತ ಓವರ್‌ಗಳ ತಂಡಕ್ಕೂ ಪರಿಗಣಿಸುವ ಸಾಧ್ಯತೆಯನ್ನು ತಳ್ಳಿಿ ಹಾಕುವಂತಿಲ್ಲ. ಏಕೆಂದರೆ, ಅವರು ಲಿಸ್‌ಟ್‌ ‘ಎ’ ಕ್ರಿಿಕೆಟ್ ನಲ್ಲಿ ಶೇ. 50 ಸರಾಸರಿ ಹಾಗೂ ಸ್ಟ್ರೈಕ್ ರೇಟ್ 100ಕ್ಕೂ ಹೆಚ್ಚು ಹೊಂದಿದ್ದಾಾರೆ. ಹಾಗಾಗಿ, ಕೆ.ಎಲ್ ರಾಹುಲ್ ಅವರ ಜತೆಗೆ ಮತ್ತೊೊಬ್ಬ ಆರಂಭಿಕನಾಗಿ ಅಗರ್ವಾಲ್‌ಗೆ ಅವಕಾಶ ನೀಡಿದರೂ ಅಚ್ಚರಿ ಪಡುವಂತಿಲ್ಲ.
ದೇಶೀಯ ಕ್ರಿಿಕೆಟ್‌ನಲ್ಲೂ ಶಿಖರ್ ಫೈಲ್:
ಬಾಂಗ್ಲಾಾದೇಶ ವಿರುದ್ಧದ ಟಿ-20 ಸರಣಿಯಲ್ಲಿ ಶಿಖರ್ ಧವನ್ 41 (42 ಎಸೆತ), 31 (27 ಎಸೆತ) ಹಾಗೂ 19 (16 ಎಸೆತ) ರನ್ ಗಳಿಸಿದ್ದರು. ದೇಶೀಯ ಕ್ರಿಿಕೆಟ್ ನ ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿಯಲ್ಲೂ ಕಳಪೆ ಪ್ರದರ್ಶನ ತೋರಿದ್ದಾಾರೆ. ಜಮ್ಮು ಮತ್ತು ಕಾಶ್ಮೀರ ವಿರುದ್ಧ 0 (9), ಜಾರ್ಖಂಡ್ ವಿರುದ್ಧ 9 (6), ಸಿಕ್ಕಿಿಂ ವಿರುದ್ಧ 19 (16) ಹಾಗೂ ಓಡಿಶಾ ವಿರುದ್ಧ 35 (33) ರನ್‌ಗಳಿಗೆ ಸೀಮಿತರಾಗಿದ್ದರು.

ಇನ್ನು, ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಕಳೆದ ಚುಟುಕು ಸರಣಿಯಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ತೋರಿಲ್ಲ. ಹಾಗಾಗಿ, ಮೀಸಲು ವಿಕೆಟ್ ಕೀಪರ್ ಸಂಜು ಸ್ಯಾಾಮ್ಸನ್ ಅವರು ಅವಕಾಶಕ್ಕಾಾಗಿ ಸರತಿ ಸಾಲಿನಲ್ಲಿದ್ದಾಾರೆ. ಹಾರ್ದಿಕ್ ಪಾಂಡ್ಯ, ಜಸ್ಪ್ರಿತ್ ಬುಮ್ರಾಾ, ನವದೀಪ್ ಸೈನಿ ಹಾಗೂ ಭುವನೇಶ್ವರ್ ಕುಮಾರ್ ಗಾಯದಿಂದ ಚೇತರಿಸಿಕೊಳ್ಳುತ್ತಿಿದ್ದಾಾರೆ. ಹಾಗಾಗಿ, ಶಿವಂ ದುಬೆ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಮುಂದುವರಿಸಬಹುದು.

ಕಳೆದ ಸರಣಿಯಲ್ಲಿ ಸ್ಥಿಿರ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದ ಸ್ಪಿಿನ್ ಬೌಲಿಂಗ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಹಾಗೂ ಕೃನಾಲ್ ಪಾಂಡ್ಯ ಅವರ ಆಯ್ಕೆೆ ಕೂಡ ತೀವ್ರ ಕುತೂಹಲ ಕೆರಳಿಸಿದೆ. ಉತ್ತಮ ಲಯದಲ್ಲಿರುವ ಯಜುವೇಂದ್ರ ಚಾಹಲ್ ಹಾಗೂ ರವೀಂದ್ರ ಜಡೇಜಾ ಅವರು ತಂಡದಲ್ಲಿ ಮುಂದುವರಿಯಲಿದ್ದಾಾರೆ. ಚುಟುಕು ಕ್ರಿಿಕೆಟ್ ನಲ್ಲಿ ಗಮನಾರ್ಹ ಪ್ರದರ್ಶನ ತೋರಿರುವ ದೀಪಕ್ ಚಾಹರ್ ತಂಡದಲ್ಲಿ ಮುಂದುವರಿದರೆ, ಖಲೀಲ್ ಅಹಮದ್ ಅವರ ಎಕಾನಮಿ ಕಡಿಮೆ ಇದೆ. ಬಾಂಗ್ಲಾಾ ವಿರುದ್ಧ ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 37 ಕ್ಕೆೆ 1 ಹಾಗೂ 44 ಕ್ಕೆೆ 1 ದುಬಾರಿಯಾಗಿದ್ದರು.
==
ಪಟ್ಟಿಿ
ವೆಸ್‌ಟ್‌ ಇಂಡೀಸ್ ಸರಣಿ ವೇಳಾಪಟ್ಟಿಿ
ದಿನಾಂಕ ಪಂದ್ಯ ಸ್ಥಳ
ಡಿ.6 ಮೊದಲನೇ ಟಿ-20 ಮುಂಬೈ
ಡಿ.8 ಎರಡನೇ ಟಿ-20 ತಿರುವನಂತಪುರಂ
ಡಿ.11 ಮೂರನೇ ಟಿ-20 ಹೈದರಾಬಾದ್
ಡಿ.15 ಮೊದಲನೇ ಏಕದಿನ ಪಂದ್ಯ ಚೆನ್ನೈ
ಡಿ.18 ಎರಡನೇ ಏಕದಿನ ಪಂದ್ಯ ವಿಶಾಖಪಟ್ಟಣಂ
ಡಿ.22 ಮೂರನೇ ಏಕದಿನ ಪಂದ್ಯ ಕಟಕ್
==