Thursday, 19th September 2024

74ನೇ ದಿನಕ್ಕೆ ಕಾಲಿಟ್ಟ ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆ: ಗಡಿ ಬಳಿ ಭಾರೀ ಭದ್ರತೆ

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 74ನೇ ದಿನಕ್ಕೆ ಕಾಲಿಟ್ಟಿದೆ. ದೆಹಲಿ-ಹರ್ಯಾಣದ ಟಿಕ್ರಿ ಗಡಿಭಾಗದಲ್ಲಿ ಭಾರೀ ಭದ್ರತೆ ಮುಂದುವರಿದಿದೆ. ಚಕ್ಕಾ ಜಾಮ್ ನಂತರ ಟಿಕ್ರಿ ಗಡಿಯ ಹತ್ತಿರ ಬ್ಯಾರಿಕೇಡ್ ಗಳ ಸಮೀಪ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ನಿಯೋಜನೆ ಗೊಂಡಿದ್ದಾರೆ. ಎರಡೂವರೆ ತಿಂಗಳಿನಿಂದ ರೈತರು ರಾತ್ರಿ ಹಗಲು ತೀವ್ರ ಕಷ್ಟಪಡುತ್ತಿದ್ದು, ಸರ್ಕಾರ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು. ಆಗಲೇ ನಾವು ಮನೆಗಳಿಗೆ ಹೋಗಲು ಸಾಧ್ಯ ಎಂದು ಪಂಜಾಬ್ ನ ರೈತರೊಬ್ಬರು ಹೇಳುತ್ತಾರೆ.  

ಮುಂದೆ ಓದಿ