ಕೊಡಗು: ಜಿಲ್ಲೆಯ ಕುಶಾಲನಗರ ಬಳಿಯ ತೊರೆನೂರು ಗ್ರಾಮದ ದೊಡ್ಡ ಕಾವಲೆ ಎಂಬಲ್ಲಿ ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ನಾಲೆಯಲ್ಲಿ ತೇಲುತ್ತಾ ಬರುತ್ತಿದ್ದ ದೇಹಗಳನ್ನು ಗಮನಿಸಿ, ಸ್ಥಳೀಯರು ದೇಹಗಳನ್ನು ನೀರಿನಿಂದ ಹೊರ ತೆಗೆದಾಗ ಮೂವರು ಮಕ್ಕಳ ಮೖತಶರೀರಗಳು ಪತ್ತೆಯಾಗಿದೆ. ಕುಶಾಲನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಹೆಚ್ಚಿನ ಮಾಹಿತಿ ಲಭಿಸಬೇಕಾಗಿದೆ.