ನವದೆಹಲಿ: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ತಾಯಿ ಮಾಧವಿ ರಾಜೇ ಸಿಂಧಿಯಾ ಬುಧವಾರ ದೆಹಲಿಯ ಏಮ್ಸ್’ನಲ್ಲಿ ಬೆಳಿಗ್ಗೆ ನಿಧನರಾದರು. ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೂ ಮುನ್ನ ಮಾಧವಿ ರಾಜೇ ಅವರನ್ನು ದೆಹಲಿ ಏಮ್ಸ್ ಗೆ ದಾಖಲಿಸಲಾಗಿತ್ತು. ಅವರು ಸೆಪ್ಸಿಸ್ ಜೊತೆಗೆ ನ್ಯುಮೋನಿಯಾದಿಂದ ಬಳಲುತ್ತಿದ್ದರು. ಅವರ ಅಂತ್ಯಕ್ರಿಯೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆಯಲಿದೆ. ನೇಪಾಳದ ರಾಜಮನೆತನಕ್ಕೆ ಸೇರಿದ ಮಾಧವಿ ರಾಜೇ ಮಹಾರಾಜ ಎರಡನೇ ಮಾಧವರಾವ್ ಸಿಂಧಿಯಾ ಅವರನ್ನು ವಿವಾಹವಾದರು. ಸೆಪ್ಟೆಂಬರ್ 30, 2001 ರಂದು, ಹಿರಿಯ ಕಾಂಗ್ರೆಸ್ […]